ರಾಗಿಣಿಯನ್ನು ಒದ್ದು ಒಳಗಾಕ್ರೀ.. ಇವ್ರೇನು ನಟಿಯರೇನ್ರಿ..? ಮಜಾ ಮಾಡಕ್ಕೆ ಬಂದಿರೋರು !! 

04-09-20 04:00 pm       Headline Karnataka News Network   ಕರ್ನಾಟಕ

ರಾಗಿಣಿಯನ್ನು ಒದ್ದು ಒಳಗಾಕ್ರೀ, ಬೆಂಕಿ ಇದ್ದಾಗಲೇ ಹೊಗೆ ಬರೋದು, ನಿಮ್ಮತ್ರ ದಾಖಲೆಗಳಿರೋದಕ್ಕೆ ನೀವು ಒಳಗಡೆ ನುಗ್ಗಿರೋದು.. ಹೋಗಿ ಅವಳನ್ನ ಚೆಕ್ ಮಾಡೋದು ಏನ್ರೀ.. ಅರೆಸ್ಟ್ ಮಾಡಿ ಜೈಲಿಗೆ ಹಾಕ್ರೀ ಅಂತ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. 

ತುಮಕೂರು, ಸೆಪ್ಟೆಂಬರ್ 4: ನಟಿ ರಾಗಿಣಿಯನ್ನ ಒದ್ದು ಒಳಗಾಕ್ಬೇಕು..ಇದು ಡ್ರಗ್ ಜಿಹಾದ್. ವಿಚಾರಣೆ, ನೋಟೀಸ್ ಅಂತ ನಾಟಕ ಆಡ್ಬೇಡಿ ಅಂತ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. 

ತುಮಕೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಮುತಾಲಿಕ್, ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಅತಿ ಹೆಚ್ಚಿನದಾಗಿ ಡ್ರಗ್ಸ್ ಮಾಫಿಯಾ ನಡೆಯುತ್ತಿದೆ. ಹ್ಯಾರೀಸ್ ಕ್ಷೇತ್ರದ ಎಲ್ಲಾ ಕ್ರಿಶ್ಚಿಯನ್ ಕಾಲೇಜು, ಹೈಸ್ಕೂಲುಗಳ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಗಾಂಜಾ ಸಿಗುತ್ತೆ.. ಕೋಕೈನ್ ಸಿಗುತ್ತೆ, ಡ್ರಗ್ಸ್ ಚಾಕ್ಲೆಟ್ ಸಿಗುತ್ವೆ.. 

" ಈಗ ಬಂಧಿಸಿರುವ ಅನಿಕಾ ಕಿಂಗ್ ಪಿನ್ ಅಲ್ವೇ ಅಲ್ಲ... ಅವಳ ಹಿಂದೆ ದೊಡ್ಡ ದೊಡ್ಡ ಕಿಂಗ್ ಪಿನ್ ಗಳಿದ್ದಾರೆ. ನಾನೇಳೋದು ಈ ರಾಗಿಣಿಯನ್ನ ಒದ್ದು ಹೊಳಗಡೆ ಹಾಕಿ. ವಿಚಾರಣೆ, ನೋಟಿಸ್ ನೀಡ್ತೀವಿ ಅಂತ ನಾಟಕ ಆಡ್ತಿರಾ... 

ಬೆಂಕಿ ಇದ್ದಾಗಲೇ ಹೊಗೆ ಬರೋದು, ನಿಮ್ಮತ್ರ ದಾಖಲೆಗಳಿರೋದಕ್ಕೆ ನೀವು ಒಳಗಡೆ ನುಗ್ಗಿರೋದು.. ಹೋಗಿ ಅವಳನ್ನ ಚೆಕ್ ಮಾಡೋದು ಏನ್ರೀ.. ಅರೆಸ್ಟ್ ಮಾಡಿ ಜೈಲಿಗೆ ಹಾಕ್ರೀ.. ಅವಳಿಗೆ ಭಯಾನೇ ಇಲ್ಲ.. ರಾಜಕಾರಣಿಗಳಿಗೆ ದುಡ್ ಕೊಟ್ರೆ ಎಲ್ಲಾ ಸರಿ ಹೋಗುತ್ತೆ ಎಂಬ ಭಾವನೆ ಇದೆ. ಸಂಜನಾ, ರಾಗಿಣಿ ಇವರೇನು ನಟಿಯರಾ? ಇವರತ್ರ ನಟನೆ ಇದ್ಯಾ..? ಇವರೆಲ್ಲಾ ಸಿನಿಮಾಕ್ಕೆ ಮಜಾ ಮಾಡೋಕ್ಕೆ ಬಂದಿರೋರು.. ಚಿತ್ರರಂಗವನ್ನು ಹಾಳು ಮಾಡೋಕೆ ಬಂದಿರೋರು ಇವರೆಲ್ಲಾ.. ಇವರನ್ನು ಮೊದ್ಲು ಒಳಗಾಕ್ಬೇಕು. ಇವರಿಗೆ ಭಯ ಬರ್ಬೇಕು ಎಂದು ಮುತಾಲಿಕ್ ಕಪಾಳಮೋಕ್ಷ ಮಾಡಿದ್ದಾರೆ. 

ಇದು ಚಿತ್ರರಂಗದಲ್ಲಿ ಮಾತ್ರ ಇರೋದಲ್ಲ. ಇದು ಹೊಸ ರೀತಿಯ ಜಿಹಾದ್. ಮುಸ್ಲಿಮರೇ ಸೇರಿ ನಡೆಸುತ್ತಿರೋ ದಂಧೆ ಇದು. ಪೊಲೀಸರಿಗೆ ಡ್ರಗ್ ದಂಧೆ ಬಗ್ಗೆ ಇಂಚಿಂಚೂ ಮಾಹಿತಿ ಇರುತ್ತೆ.. ಆದ್ರೆ ಪೊಲೀಸರ ಕೈನೂ ಕಟ್ಟಿಹಾಕಿದ್ದಾರೆ ರಾಜಕಾರಣಿಗಳು. ಹೀಗಾಗಿ ಒಳಗಿನ ಕುಳಗಳನ್ನು ಹೊರಗೆಳೆಯೋದು ಇವ್ರಿಂದ ಆಗ್ತಾ ಇಲ್ಲ ಎಂದಿದ್ದಾರೆ, ಪ್ರಮೋದ್ ಮುತಾಲಿಕ್.

Join our WhatsApp group for latest news updates