ಇಂದ್ರಜಿತ್ ಬಹಿರಂಗ ಕ್ಷಮೆ ಕೇಳಬೇಕು : ಮೇಘನಾ ರಾಜ್ 

05-09-20 04:48 pm       Bangalore Correspondent   ಕರ್ನಾಟಕ

ಇಂದ್ರಜಿತ್​ ಲಂಕೇಶ್​ ಅವರು ಸಾರ್ವಜನಿಕವಾಗಿ ಬೇಷರತ್​ ಕ್ಷಮೆ ಕೇಳಬೇಕು ಎಂದು ಚಿರು ಪತ್ನಿ ಮೇಘನಾ ರಾಜ್​ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್.5: ಮಾದಕ ವ್ಯಸನಕ್ಕೆ ಸಂಬಂಧಪಟ್ಟಂತೆ ಚಿರು ಸರ್ಜಾ ಹೆಸರು ಕೇಳಿಬಂದಿದ್ದು ತೀವ್ರ ದುಃಖ ತಂದಿದೆ..ಇಂದ್ರಜಿತ್​ ಲಂಕೇಶ್​ ಅವರು ಸಾರ್ವಜನಿಕವಾಗಿ ಬೇಷರತ್​ ಕ್ಷಮೆ ಕೇಳಬೇಕು ಎಂದು ಚಿರು ಪತ್ನಿ ಮೇಘನಾ ರಾಜ್​ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

'ಪತಿ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡ ದುಃಖದಿಂದ ಇನ್ನೂ ನಾವು ಹೊರಗೆ ಬಂದಿಲ್ಲ. ಹೀಗಿರುವಾಗಲೇ, ಅವರ ವಿರುದ್ಧ ಆರೋಪಗಳನ್ನು ಮಾಡಲಾಗಿದೆ. ಅಕಾಲಿಕ ಮರಣದ ಕುರಿತು ಇಂದ್ರಜಿತ್ ಲಂಕೇಶ್ ನೀಡಿದ ಹೇಳಿಕೆಯಿಂದ ಕುಟುಂಬಕ್ಕೆ ಮಾನಸಿಕವಾಗಿ ಅತೀವ ದುಃಖವಾಗಿದೆ. ಗರ್ಭವತಿ ಆಗಿರುವ ನನ್ನನ್ನು ಈ ರೀತಿ ಮಾನಸಿಕ ತೊಳಲಾಟಕ್ಕೆ ತಳ್ಳುವುದು ಅಮಾನವೀಯ ಕೃತ್ಯ'' ಎಂದು ಪತ್ರದಲ್ಲಿ ಮೇಘನಾ ರಾಜ್ ಉಲ್ಲೇಖಿಸಿದ್ದಾರೆ. 

ಇದರ ಜೊತೆಗೆ ''ಇಂದ್ರಜಿತ್ ಲಂಕೇಶ್ ನನಗೆ ಹಾಗೂ ನಮ್ಮ ಕುಟುಂಬದ ಬಗ್ಗೆ ಬೇಷರತ್ತಾಗಿ ಕ್ಷಮೆ ಕೇಳಬೇಕು''  ಎಂದು ಮೇಘನಾ ರಾಜ್ ಪತ್ರದ ಮುಖೇನ ಒತ್ತಾಯಿಸಿದ್ದಾರೆ.

Join our WhatsApp group for latest news updates