ಬ್ರೇಕಿಂಗ್ ನ್ಯೂಸ್
26-08-21 06:00 pm Headline Karnataka News Network ಕರ್ನಾಟಕ
ಚಿಕ್ಕಮಗಳೂರು, ಆಗಸ್ಟ್ 26: ಕುಟುಂಬಸ್ಥರಿಗೆ ವಾಯ್ಸ್ ಮೆಸೇಜ್ ಕಳುಹಿಸಿ, ಒಂದೇ ಕುಟುಂಬದ ನಾಲ್ಕು ಮಂದಿ ಕಾರಿನಲ್ಲಿದ್ದುಕೊಂಡೇ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎಂ.ಸಿ ಹಳ್ಳಿ ಬಳಿಯ ಭದ್ರಾ ನಾಲೆಯಲ್ಲಿ ನಡೆದಿದ್ದು ಇಬ್ಬರು ಸಾವು ಕಂಡಿದ್ದಾರೆ.
ಮಂಜು, ಆತನ ಪತ್ನಿ ನೀತು, ಮಗ ಧ್ಯಾನ್ ಹಾಗು ನೀತು ತಾಯಿ ಆತ್ಮಹತ್ಯೆಗೆ ಯತ್ನಿಸಿದವರು. 13 ವರ್ಷದ ಮಗ ಧ್ಯಾನ್ ಮತ್ತು ಆತನ ತಾಯಿ ನೀತು(35) ಸಾವಿನಿಂದ ಪಾರಾಗಿದ್ದಾರೆ. ಮಂಜು ಮತ್ತು ಆತನ ಅತ್ತೆ ನೀರಿನಲ್ಲಿ ಮುಳುಗಿ ಸಾವು ಕಂಡಿದ್ದಾರೆ.
ಕಾರಿನಲ್ಲಿ ಪತ್ನಿ, ಮಗ ಹಾಗು ಅತ್ತೆ ಮಲಗಿದ್ದ ಸಂದರ್ಭದಲ್ಲಿ ತನ್ನ ಸೋದರನ ಮಕ್ಕಳೊಂದಿಗೆ ಮಂಜು ಕರೆ ಮಾಡಿ ಮಾತನಾಡಿದ್ದಾರೆ. ನನ್ನನ್ನು ನಂಬಿದವರಿದಂದಲೇ ನಾನು ಮೋಸ ಹೋದೆ. ನೀವು ಜಗತ್ತಿನಲ್ಲಿ ಯಾರನ್ನು ನಂಬಬೇಡಿ. ನನ್ನ ಪತ್ನಿಯೇ ನನ್ನ ಪ್ರಪಂಚ ಎಂದು ಹೇಳಿ ಇನ್ನು ಹತ್ತು ನಿಮಿಷದಲ್ಲಿ ನಾವೆಲ್ಲರು ಈ ಜಗದಲ್ಲಿ ಇರುವುದಿಲ್ಲ ಎಂದು ಮಂಜು ಹೇಳಿದ್ದಾರೆ.
ಘಟನೆಯಲ್ಲಿ ಮಂಜು ಹಾಗು ಸುನಂದಮ್ಮ ನೀರು ಪಾಲಾಗಿದ್ದು, ಮೃತದೇಹ ಪತ್ತೆ ಹಚ್ಚಲಾಗಿದೆ. ಅದೃಷ್ಟವಶಾತ್ ತಾಯಿ ನೀತು ಹಾಗು ಮಗ ಧ್ಯಾನ್ ಈಜಿ ದಡ ಸೇರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.



ಬೆಂಗಳೂರಿನ ಗಿರಿನಗರದಲ್ಲಿ ನೆಲೆಸಿದ್ದ ಮಂಜು ಜೇಡಿಕಟ್ಟೆಯಲ್ಲಿರುವ ಪತ್ನಿ ಸುನಂದಾ ಜೊತೆಗೆ ತವರು ಮನೆಗೆ ಆಗಮಿಸಿದ್ದರು. ನಿನ್ನೆ ಪುನಃ ಬೆಂಗಳೂರಿಗೆ ವಾಪಸ್ಸಾಗುವಾಗ, ಮಂಜು ಸಂಬಂಧಿ ರಾಜುರವರಿಗೆ ವಾಟ್ಸಾಪ್ ಮೆಸೆಜ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ತಕ್ಷಣ ರಾಜು ಮಂಜುಗೆ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ರಾಜು ಎಷ್ಟೇ ಮನವೊಲಿಸಿದರೂ ಮಂಜು ಮತ್ತು ಕುಟುಂಬ ಆತ್ಮಹತ್ಯೆಯ ಕಠಿಣ ನಿರ್ಧಾರ ತಳೆದಿದ್ದರು.
ಕಡೂರು ತಾಲೂಕಿನ ಸಿಂಗಟನಕೆರೆ ಗ್ರಾಮದ ಮಂಜು ಹನ್ನೆರಡು ವರ್ಷಗಳ ಹಿಂದಷ್ಟೆ ನೀತುರನ್ನು ಮದುವೆಯಾಗಿದ್ರು. ಮಂಜು ವ್ಯವಹಾರದಲ್ಲಿ ಒಂದು ಕೋಟಿ ಲಾಸ್ ಆಗಿತ್ತು ಎನ್ನಲಾಗಿದೆ. ನಂಬಿದವರೇ ಕೈಕೊಟ್ಟಿದ್ದರಿಂದ ಮಂಜು ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ರು ಎನ್ನಲಾಗಿದೆ.
ಆದರೆ ಮಂಜು ಆತ್ಮಹತ್ಯೆ ನಿರ್ಧಾರ ಕುಟುಂಬದವರಿಗೆ ತಿಳಿದಿರಲಿಲ್ಲ. ಹೀಗಿದ್ರೂ ತನ್ನ ಕುಟುಂಬವನ್ನು ಮಂಜು ಬಲಿಕೊಡಲು ಮುಂದಾಗಿದ್ದು ಏಕೆ ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ. ತರೀಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Video:
Chikmagalur Family attempts suicide by sending voice message to family mother and son rescued
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm