ನಟಿ ಸಂಯುಕ್ತಾ ಹೆಗ್ಡೆಗೆ ಕಿರಿಕ್ ; ಕವಿತಾ ರೆಡ್ಡಿ ಬೇಷರತ್ ಕ್ಷಮೆ 

07-09-20 12:21 am       Bangalore Correspondent   ಕರ್ನಾಟಕ

ಯಾವುದೂ ಉದ್ದೇಶಪೂರ್ವಕ ನಡೆದಿದ್ದಲ್ಲ. ಅಲ್ಲದೆ, ನೈತಿಕ ಪೊಲೀಸ್ ಗಿರಿ ಅನ್ನುವುದನ್ನು ಹಿಂದಿನಿಂದಲೇ ವಿರೋಧಿಸುತ್ತಾ ಬಂದವಳು ನಾನು ಪೂರ್ತಿಯಾಗಿ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಕವಿತಾ ರೆಡ್ಡಿ ಕ್ಷಮೆ ಯಾಚಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 6: ನಟಿ ಸಂಯುಕ್ತಾ ಹೆಗ್ಡೆ ಮತ್ತು ಸ್ನೇಹಿತೆಯ ಮೇಲಿನ ನೈತಿಕ ಪೊಲೀಸ್ ಪ್ರಕರಣಕ್ಕೆ ಸಂಬಂಧಿಸಿ ಮಹಿಳಾ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ. 

ಘಟನೆ ಬಗ್ಗೆ ವಿಷಾದವಿದೆ. ಯಾವುದೂ ಉದ್ದೇಶಪೂರ್ವಕ ನಡೆದಿದ್ದಲ್ಲ. ಅಲ್ಲದೆ, ನೈತಿಕ ಪೊಲೀಸ್ ಗಿರಿ ಅನ್ನುವುದನ್ನು ಹಿಂದಿನಿಂದಲೇ ವಿರೋಧಿಸುತ್ತಾ ಬಂದವಳು ನಾನು. ಏನ್ ಘಟನೆ ಆಗಿದೆಯೋ ಅದರ ಬಗ್ಗೆ ಪೂರ್ತಿಯಾಗಿ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಕವಿತಾ ರೆಡ್ಡಿ ಫೇಸ್ಬುಕ್ ಪೇಜ್ ನಲ್ಲಿ ಕ್ಷಮೆ ಕೇಳಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. 

ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಠಾಣೆ ವ್ಯಾಪ್ತಿಯ ಪಾರ್ಕ್ ಒಂದರಲ್ಲಿ ಸ್ಪೋರ್ಟ್ಸ್ ಸೂಟ್ ಹಾಕ್ಕೊಂಡು ಸಂಯುಕ್ತಾ ಮತ್ತು ಗೆಳೆತಿಯರು ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ್ದ ಕವಿತಾ ರೆಡ್ಡಿ ಸಂಯುಕ್ತಾ ಡ್ರೆಸ್ ಬಗ್ಗೆ ಆಕ್ಷೇಪಿಸಿದ್ದಲ್ಲದೆ ಸ್ನೇಹಿತೆಯ ಮೇಲೆ ಕೈಮಾಡಿದ್ದರು. ಇದನ್ನು ವಿಡಿಯೋ ಮಾಡಿದ್ದ ಸಂಯುಕ್ತಾ ಇನ್ ಸ್ಟಾ ಗ್ರಾಮಿನಲ್ಲಿ ಹಾಕಿದ್ದಲ್ಲದೆ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ಬಗ್ಗೆ ಸಾಮಾಜಿಕ ವಲಯದಲ್ಲಿ ಟೀಕೆಗೆ ವ್ಯಕ್ತವಾಗಿತ್ತು. ಅಲ್ಲದೆ, ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಸಂಯುಕ್ತಾ ದೂರು ದಾಖಲಿಸಿದ್ದರು. 

ಕವಿತಾ ರೆಡ್ಡಿ ಎಐಸಿಸಿ ಸದಸ್ಯೆ ಆಗಿರುವುದಲ್ಲದೆ ಮಹಿಳಾ ಕಾಂಗ್ರೆಸ್ ನಾಯಕಿ ಆಗಿದ್ದರಿಂದ ಪಕ್ಷದ ನಾಯಕರು ಮುಜುಗರ ಅನುಭವಿಸುವಂತಾಗಿತ್ತು. ಈಗ ಒಟ್ಟು ಘಟನೆ ಬಗ್ಗೆ ಕವಿತಾ ರೆಡ್ಡಿ ಮೂಲಕ ಕ್ಷಮೆ ಯಾಚಿಸುವಂತೆ ಮಾಡಿದ್ದಾರೆ.