ಬ್ರೇಕಿಂಗ್ ನ್ಯೂಸ್
19-10-21 04:53 pm Headline Karnataka News Network ಕರ್ನಾಟಕ
ಢಾಕಾ, ಅ.19: ಬಾಂಗ್ಲಾದೇಶದಲ್ಲಿ ಹಿಂದುಗಳ ಮನೆ, ದೇವಸ್ಥಾನಗಳ ಮೇಲೆ ದಾಳಿ ಮುಂದುವರಿದಿದ್ದು, ಪ್ರವಾದಿ ನಿಂದನೆ ನೆಪ ಇಟ್ಟುಕೊಂಡು ಜನಾಂಗೀಯ ಹಿಂಸೆ ನಡೆದಿದೆ. ಹಿಂದುಗಳನ್ನು ಗುರಿಯಾಗಿಸಿ ಉದ್ರಿಕ್ತರ ಗುಂಪು ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.
ಬಾಂಗ್ಲಾ ರಾಜಧಾನಿ ಢಾಕಾದಿಂದ 255 ಕಿಮೀ ದೂರದ ರಂಗ್ ಪುರ್ ಜಿಲ್ಲೆಯಲ್ಲಿ ಕನಿಷ್ಠ 66 ಹಿಂದುಗಳ ಮನೆಗಳ ಮೇಲೆ ದಾಳಿ ನಡೆಸಿ, ಹಾನಿ ಮಾಡಿದ್ದಾರೆ. ಹಿಂದು ಮೀನುಗಾರನೊಬ್ಬ ಫೇಸ್ಬುಕ್ ನಲ್ಲಿ ಪ್ರವಾದಿಗೆ ಅಗೌರವದಿಂದ ಪೋಸ್ಟ್ ಮಾಡಿದ್ದಾನೆಂಬ ವಿಚಾರದಲ್ಲಿ ಕಿಡಿಗೇಡಿಗಳು ವದಂತಿಗಳನ್ನು ಹರಡಿದ್ದು, ಮುಸ್ಲಿಮ್ ಉದ್ರಿಕ್ತರ ಗುಂಪು ದಾಳಿ ನಡೆಸಿದೆ. ಪೊಲೀಸರು ಜೊತೆಗಿದ್ದರೂ, ಅವರನ್ನು ಲೆಕ್ಕಿಸದೆ ಮನೆಗಳಿಗೆ ಬೆಂಕಿ ಹಚ್ಚುತ್ತಿದ್ದು ಅಲ್ಲಿದ್ದ ನಿವಾಸಿಗಳ ಮೇಲೆ ಪೀಡನೆ ನೀಡುತ್ತಿದ್ದಾರೆ. ರಂಗ್ ಪುರ್ ಜಿಲ್ಲೆಯ ಪಿರ್ಗಾಂಜ್ ಮಜಿಪಾರ ಎಂಬ ಗ್ರಾಮದಲ್ಲಿ 29 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದಾಗಿ ಇಂಡಿಯಾ ಟುಡೇ ಹೇಳಿದೆ.



ಮೊನ್ನೆ ಭಾನುವಾರ ನಾನೌರ್ ದಿಘಿ ಸರೋವರದ ಬಳಿಯ ಕುಮಿಲಾ ಎಂಬಲ್ಲಿ ದುರ್ಗಾ ಪೂಜೆ ನಡೆಸುತ್ತಿದ್ದ ಪೆಂಡಾಲ್ ಮೇಲೆ ಗುಂಪು ದಾಳಿ ನಡೆಸಿದ್ದು, ಅಲ್ಲಿ ಮೂರು ಮಂದಿಯನ್ನು ಹತ್ಯೆ ಮಾಡಲಾಗಿತ್ತು. ದುರ್ಗಾ ಪೂಜೆಯ ಪೆಂಡಾಲ್ ನಲ್ಲಿ ಖುರಾನ್ ಪುಸ್ತಕಕ್ಕೆ ಅವಮಾನ ಮಾಡಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದರು. ಅದನ್ನು ನಂಬಿದ್ದ ಮತಾಂಧರು ದುರ್ಗಾ ಪೂಜೆ ನಡೆಸುತ್ತಿದ್ದ ಜಾಗಕ್ಕೆ ದಾಳಿ ನಡೆಸಿದ್ದರು. ಕುಮಿಲ್ಲಾದ ಹಿಂಸಾಚಾರ ಘಟನೆಯ ಬೆನ್ನಲ್ಲೇ ಚಾಂದ್ ಪುರದ ಹಜೀಗಂಜ್, ಚತ್ತೋಗ್ರಾಮ್ ಜಿಲ್ಲೆಯ ಬನ್ಶಕಾಳಿ, ಕೋಕ್ಸ್ ಬಜಾರಿನ ಪೆಕುವಾ ಎಂಬಲ್ಲಿನ ದೇವಸ್ಥಾನಗಳಿಗೂ ದಾಳಿ ನಡೆಸಲಾಗಿದ್ದು ಜಖಂ ಮಾಡಲಾಗಿದೆ.
ಕಳೆದ ಶುಕ್ರವಾರ ಚಿತ್ತಗಾಂಗ್ ಜಿಲ್ಲೆಯ ನೋಕಾಲಿ ಎಂಬಲ್ಲಿ ಇಸ್ಕಾನ್ ದೇವಸ್ಥಾನದ ಮೇಲೆ ಬೆಂಕಿ ಹಚ್ಚಲಾಗಿತ್ತು. ಇಸ್ಕಾನ್ ಮಂದಿರದಲ್ಲಿ ದುರ್ಗಾ ಪೂಜೆ ನಡೆಸುತ್ತಿದ್ದಾಗ 500 ಮಂದಿಯಷ್ಟಿದ್ದ ಉದ್ರಿಕ್ತರ ಗುಂಪು ದಾಳಿ ನಡೆಸಿದ್ದು, ಬೆಂಕಿ ಹಚ್ಚಿದ್ದಲ್ಲದೆ, ಅಲ್ಲಿದ್ದ ಇಸ್ಕಾನ್ ಅರ್ಚಕರ ಮೇಲೆ ಚೂರಿಯಿಂದ ಇರಿದು ಕೊಲ್ಲಲಾಗಿತ್ತು.
Amid outrage over the incidents of temple vandalism in Bangladesh, a group of assailants vandalised at least 66 homes and torched 20 homes of Hindus in the country on Sunday over an alleged blasphemous social media post.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm