ಬ್ರೇಕಿಂಗ್ ನ್ಯೂಸ್
31-10-21 02:49 pm Mangalore Reporter ಕರ್ನಾಟಕ
ಬೆಂಗಳೂರು, ಅ.31 : ಕನ್ನಡಿಗರ ಕಣ್ಮಣಿಯಾಗಿ ಅರಳಿ ನಿಂತು ಹೊಂಬಿಸಿಲು ಬೀರುತ್ತಿರುವಾಗಲೇ ಮರೆಯಾದ ಅಪ್ಪು ಇನ್ನು ಕೇವಲ ನೆನಪು ಮಾತ್ರ. ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಅಪ್ಪ ರಾಜಕುಮಾರ್ ಸಮಾಧಿ ಪಕ್ಕದಲ್ಲೇ ಪ್ರಕೃತಿಯಲ್ಲಿ ಲೀನವಾಗಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಲಕ್ಷಾಂತರ ಜನರ ಕಣ್ಣೀರಿನ ನಡುವೆ ಪುನೀತ್ ಕುಮಾರ್ ಮಣ್ಣಿನಲ್ಲಿ ಸೇರಿದ್ದಾರೆ.
ಅಲ್ಲಿ ಸೇರಿದ್ದ ಕುಟುಂಬಸ್ಥರ ರೋದನಕ್ಕಿಂತಲೂ ಅಭಿಮಾನಿಗಳ ಆಕ್ರಂದನವೇ ಮುಗಿಲು ಮುಟ್ಟಿತ್ತು. ಕಂಠೀರವ ಕ್ರೀಡಾಂಗಣದಿಂದ ಬೆಳಗ್ಗೆಯೇ ಅಪ್ಪು ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ತರಲಾಗಿತ್ತು. ಜೊತೆಯಲ್ಲೇ ರಾಜ್ಯ ಸರಕಾರದ ಪ್ರತಿನಿಧಿಗಳೂ ಹಿಂಬಾಲಿಸಿದ್ದರು.
ಪುನೀತ್ ಅವರನ್ನು ತೀರಾ ಹಚ್ಚಿಕೊಂಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಂತೂ ತನ್ನ ಮಗನಂತೆಯೇ ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ಸಮಾಧಿಗೆ ಇಳಿಸುವುದಕ್ಕೂ ಮುನ್ನ ಬೊಮ್ಮಾಯಿ ಅಪ್ಪುವನ್ನು ಅಪ್ಪಿಕೊಂಡು ಹಣೆಗೆ ಮುತ್ತಿಕ್ಕಿದ್ದು ನೋಡುಗರನ್ನೇ ಭಾವುಕರನ್ನಾಗಿಸಿತ್ತು.
ದೇಹ, ಮೈಕಟ್ಟು ಸದೃಢ ಆಗಿರಬೇಕೆಂಬ ಅಪಾರ ಕಾಳಜಿ ಹೊಂದಿದ್ದ ಪುನೀತ್, ಸದೃಢ ದೇಹ ಇಟ್ಟುಕೊಂಡೇ ಇಹಲೋಕ ತ್ಯಜಿಸಿದ್ದಾರೆ. ಕೊನೆಯ ಬಾರಿಗೆ ತಮ್ಮನ ಅಗಲಿಕೆ ಬಗ್ಗೆ ಮಾಧ್ಯಮಕ್ಕೆ ಮಾತನಾಡಿದ ಶಿವಣ್ಣ, ಮಗನನ್ನೇ ಕಳಕೊಂಡಿದ್ದೇನೆ. ದೇವರಿಗೆ ಆತನ ಮೇಲೆ ಹೆಚ್ಚು ಪ್ರೀತಿ ಇತ್ತು. ಬೇಗನೇ ಕರೆಸಿಕೊಂಡ ಎಂದು ಹೇಳಿ ಕಣ್ಣೀರು ಹಾಕಿದ್ದು ಅಲ್ಲಿ ಸೇರಿದ್ದ ಜನರನ್ನೂ ಕಣ್ಣಂಚು ಒದ್ದೆ ಮಾಡಿತ್ತು.
ಕಳೆದ ಎರಡು ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಸಾಗರದೋಪಾದಿಯಲ್ಲಿ ಬಂದಿದ್ದು ಅಪ್ಪುವನ್ನು ಕೊನೆಯ ಬಾರಿಗೆ ಕಂಡಿದ್ದಾರೆ. ಎರಡು ದಿವಸದಲ್ಲಿ ಅಂದಾಜು 25 ಲಕ್ಷಕ್ಕೂ ಹೆಚ್ಚು ಜನ ಅಪ್ಪು ಪಾರ್ಥಿವ ಶರೀರದ ದರ್ಶನ ಮಾಡಿದ್ದಾರೆ ಎಂಬ ಅಂದಾಜು ಮಾಡಲಾಗಿದೆ.
ಇಂದು ಬೆಳಿಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಲಾಯಿತು.#PuneethRajkumar @PuneethRajkumar pic.twitter.com/aEymZwD4aG
— Basavaraj S Bommai (@BSBommai) October 31, 2021
ಇಂದು ಬೆಳಿಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಲಾಯಿತು.#PuneethRajkumar @PuneethRajkumar pic.twitter.com/aEymZwD4aG
— Basavaraj S Bommai (@BSBommai) October 31, 2021
Kannada actor Puneeth Rajkumar was buried with State honours next to his parents Dr. Rajkumar and Parvathamma Rajkumar at Kantheerava Studio on October 31 in the presence of family, friends, colleagues from the film industry and dignitaries. The sombre ceremony concluded by 8 a.m.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm