"ಜಮೀರ ಏನ್ರೀ.. ಚಿಲ್ಲರೆ, ಗುಜರಿ ಗಿರಾಕಿ, ಏನೇ ಗಳಿಸಿದ್ರು ಅನೈತಿಕ ಚಟುವಟಿಕೆ ಮಾಡೇ ಗಳ್ಸಿದ್ದು.." 

12-09-20 02:07 pm       Headline Karnataka News Network   ಕರ್ನಾಟಕ

ಜಮೀರ ಏನೇ ಗಳಿಸಿದ್ರು ಅದು ಅನೈತಿಕ ಚಟುವಟಿಕೆ ಗಳಿಂದಲೇ ಮಾಡಿರೋದು ಎಂದು ಶಾಸಕ‌ ಎಂ.ಪಿ. ರೇಣುಕಾಚಾರ್ಯ ಜರೆದಿದ್ದಾರೆ. 

ದಾವಣಗೆರೆ, ಸೆಪ್ಟೆಂಬರ್ 12: ಜಮೀರ್ ಅಹ್ಮದ್ ಏನ್ರೀ.. ಬರೀ ಚಿಲ್ಲರೇ ಗುಜರಿ ಗಿರಾಕಿ ಅಲ್ವೇನ್ರೀ.. ಜಮೀರ ಏನೇ ಗಳಿಸಿದ್ರು ಅದು ಅನೈತಿಕ ಚಟುವಟಿಕೆ ಗಳಿಂದಲೇ ಮಾಡಿರೋದು.. ಹೀಗೆಂದು ಸಿಎಂ ರಾಜಕೀಯ ಕಾರ್ಯದರ್ಶಿ, ಬಿಜೆಪಿ ಶಾಸಕ‌ ಎಂ.ಪಿ. ರೇಣುಕಾಚಾರ್ಯ ಜರೆದಿದ್ದಾರೆ. 

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಈ ಬಗ್ಗೆ ಮಾತನಾಡಿರುವ ರೇಣುಕಾಚಾರ್ಯ, ಜಮೀರ್ ಅಹ್ಮದ್ ಈ ಹಿಂದೆ ಹೇಳ್ಕಂಡಿದ್ದು ಗೊತ್ತಿಲ್ವೇ..  ಯಡಿಯೂರಪ್ಪ ಸಿಎಂ ಆದ್ರೆ ಅವರ ಮನೆ ವಾಚ್ ಮನ್ ಆಗೋದಾಗಿ ಹೇಳ್ಕಂಡಿದ್ದರು. ಆದ್ರೆ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಜಮೀರ್ ವಾಚ್ ಮನ್ ಆಗಿದ್ದಾರೆಯೇ.. ಈ ಜಮೀರ ಒಂದ ರೀತಿ ಎರಡು ನಾಲಿಗೆ ಇರೋ ವ್ಯಕ್ತಿ. ಅನೈತಿಕ ಚಟುವಟಿಕೆಯಿಂದಲೇ ಉನ್ನತ ಸ್ಥಾನಕ್ಕೆ ಬಂದಾ ವ್ಯಕ್ತಿ... ಉಪ್ಪು ತಿಂದವರು ನೀರು‌ ಕುಡಿಯಲೇ ಬೇಕು ಎಂದು ಮೂದಲಿಸಿದ್ದಾರೆ. 

ನಮ್ಮ ಸರ್ಕಾರ ಡ್ರಗ್ಸ್ ಬಗ್ಗೆ ಸಂಪೂರ್ಣ ತನಿಖೆಗೆ ಪೊಲೀಸರಿಗೆ ಅವಕಾಶ ನೀಡಿದೆ. ಮುಕ್ತ ಅವಕಾಶ ನೀಡಿದ್ದರಿಂದ ಡ್ರಗ್ಸ್ ಪ್ರಕರಣದಲ್ಲಿ ಯಾರ್ಯಾರಿದ್ದಾರೆ ಅನ್ನೋ ಸತ್ಯಾಂಶ ಹೊರಬರಲಿದೆ ಎಂದಿದ್ದಾರೆ ರೇಣುಕಾಚಾರ್ಯ.