ಬ್ರೇಕಿಂಗ್ ನ್ಯೂಸ್
16-12-21 02:45 pm HK Desk news ಕರ್ನಾಟಕ
Photo credits : Headline Karnataka
ಬಾಗಲಕೋಟೆ, ಡಿ.16 : ಪ್ರಶಸ್ತಿಗಳ ರಾಜ, ಬೆಟ್ಟದ ಹುಲಿ ಎಂದೇ ಹೆಸರಾಗಿದ್ದ ಅಭಿಮಾನಿಗಳ ಪಾಲಿನ ನೆಚ್ಚಿನ ಟಗರು ಅನಾರೋಗ್ಯದಿಂದ ಸಾವು ಕಂಡಿದ್ದು ನೂರಾರು ಜನರು ಸೇರಿ ಶವಯಾತ್ರೆ ಮೆರವಣಿಗೆ ನಡೆಸಿದ್ದಾರೆ.
ಆಕರ್ಷಕವಾಗಿದ್ದ ಟಗರನ್ನು ಐದು ಲಕ್ಷ ರೂ. ಕೊಟ್ಟು ಖರೀದಿಸಲಾಗಿತ್ತು. ಮಾಲೀಕ ಅದನ್ನು ಖರೀದಿಸಿ ಮನೆ ಮಗನಂತೆ ನೋಡಿಕೊಂಡಿದ್ದಲ್ಲದೆ ವಿವಿಧ ಕಡೆಗಳಲ್ಲಿ ಸ್ಪರ್ಧೆಗೆ ಕೊಂಡೊಯ್ದು ಜನಮೆಚ್ಚುಗೆ ಪಡೆದಿದ್ದ. ಅನಾರೋಗ್ಯದಿಂದ ಟಗರು ದಿಢೀರ್ ಆಗಿ ಸತ್ತಿದ್ದಕ್ಕೆ ಮಾಲೀಕ ಪಾಂಡು ಗೋಳಾಡಿ ಅತ್ತಿದ್ದಾನೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಪಾಂಡು ಟಗರನ್ನು 7 ವರ್ಷಗಳ ಹಿಂದೆ 5 ಲಕ್ಷ ರೂ. ಕೊಟ್ಟು ಖರೀದಿಸಿದ್ದ. ಪ್ರತಿ ಬಾರಿ ಟಗರಿನ ಕಾಳಗದಲ್ಲಿ ಈ ಬೆಟ್ಟದ ಹುಲಿಯದ್ದೆ ದರ್ಬಾರ್ ಆಗಿತ್ತು. ಜನರು ಪಂಥ ಕಟ್ಟಿ ಗೆದ್ದು ಈ ಟಗರಿನ ಅಭಿಮಾನಿಗಳಾಗಿದ್ದರು. ಮೈಸೂರು ದಸರಾ ಸೇರಿ ರಾಜ್ಯ ಮತ್ತು ಹೊರ ರಾಜ್ಯಗಳ ಟಗರಿನ ಕಾಳಗದಲ್ಲಿ ಬೆಟ್ಟದ ಹುಲಿ ಭಾರೀ ಹೆಸರು ಮಾಡಿತ್ತು.
ಈವರೆಗೆ 80 ಕ್ಕೂ ಅಧಿಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಟಗರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತನ್ನದೇ ಅಭಿಮಾನಿಗಳನ್ನು ಹೊಂದಿತ್ತು. ಟಗರು ಸತ್ತ ಸುದ್ದಿ ಕೇಳಿ ಕಲಹಳ್ಳಿಗೆ ಬಂದ ನೂರಾರು ಅಭಿಮಾನಿಗಳು ಆಗಮಿಸಿದ್ದು ಕಣ್ಣೀರಿಟ್ಟಿದ್ದಾರೆ.

ಗ್ರಾಮದಲ್ಲಿ ಮೃತಪಟ್ಟ ಟಗರನ್ನು ಶೃಂಗರಿಸಿ ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಮಾಡಿದ್ದಾರೆ. ಟಗರಿಗೆ ಭಂಡಾರ ಬಳಿದು ದುಃಖದಿಂದ ಮೆರವಣಿಗೆ ನಡೆಸಿದ್ದು ಅಂತಿಮ ಸಂಸ್ಕಾರದಲ್ಲಿ ನೂರಾರು ಜನರು ಭಾಗಿಯಾಗಿದ್ದಾರೆ.

ಗದಗ, ಧಾರವಾಡ, ಮೈಸೂರು, ಗಜೇಂದ್ರಗಡ ಸೇರಿ ವಿವಿಧೆಡೆಯಿಂದ ಟಗರಿನ ಅಂತಿಮ ದರ್ಶನಕ್ಕೆ ಟಗರು ಅಭಿಮಾನಿಗಳು ಬಂದಿದ್ದರು. ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಅಭಿಮಾನಿ ಯುವಕರು ಸೇರಿ ಟಗರಿನ ಕಟೌಟ್ ಕಟ್ಟಿ, ದೀಪ ಬೆಳಗಿ ಶ್ರದ್ದಾಂಜಲಿ ಸಲ್ಲಿಸಿ ಅಭಿಮಾನ ಮೆರೆದಿದ್ದಾರೆ.
Bagalkote Five lakh worth Ram dies fans in tears last rites performed with great honour. Pictures of this has gone viral on social media
07-03-26 12:01 pm
HK News Staffer
ಕಾರವಾರ, ಯಾದಗಿರಿಗೆ 100 ಕೋಟಿ ರೂ. ವೆಚ್ಚದಲ್ಲಿ ಸೂಪ...
06-03-26 07:03 pm
ಅನ್ನಭಾಗ್ಯದಲ್ಲಿ ದೊಡ್ಡ ಬದಲಾವಣೆ ; ಹೆಚ್ಚುವರಿ ಅಕ್...
06-03-26 03:50 pm
ಡಿಜಿಟಲ್ ವ್ಯಸನಕ್ಕೆ ಬ್ರೇಕ್ ; 16 ವರ್ಷದೊಳಗಿನ ಮಕ್ಕ...
06-03-26 12:08 pm
ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ; ಮುಂದುವರೆ...
06-03-26 10:21 am
07-03-26 11:58 am
HK News Staffer
ರಾಜಧಾನಿ ಟೆಹ್ರಾನಲ್ಲಿದ್ದ ಅಯತೊಲ್ಲಾ ಖಮೇನಿಗೆ ಸೇರಿದ...
06-03-26 11:04 pm
ಲವ್ ಜಿಹಾದ್ ಕಡಿವಾಣಕ್ಕೆ ಮಹಾರಾಷ್ಟ್ರದಲ್ಲಿ ಹೊಸ ಮಸೂ...
06-03-26 10:58 pm
ಹರ್ಮುಜ್ ಜಲಸಂಧಿ ಅಮೆರಿಕ ಮಿತ್ರ ರಾಷ್ಟ್ರಗಳಿಗೆ ಮಾತ್...
06-03-26 11:40 am
ಮಾರ್ಕ್-48 ಜಗತ್ತಿನ ಅತಿ ಶಕ್ತಿಶಾಲಿ ಜಲಾಂತರ್ಗಾಮಿ ಸ...
06-03-26 09:50 am
06-03-26 07:01 pm
HK News Staffer
ಮಂಗಳೂರಿನ ನಿವೃತ್ತ ಬ್ಯಾಂಕ್ ಉದ್ಯೋಗಿ ಲೇಡಿಗೆ ಸೈಬರ್...
06-03-26 04:08 pm
ಪುತ್ತೂರಿನಲ್ಲಿ ವಿದ್ಯಾರ್ಥಿನಿಯರಿಗೆ ‘ದಿ ಕೇರಳ ಸ್ಟೋ...
06-03-26 12:17 pm
ದುಬೈನಿಂದ ಬೆಂಗಳೂರಿಗೆ ಹೈಡ್ರೋವೀಡ್ ಗಾಂಜಾ ಪೂರೈಕೆ ;...
05-03-26 07:38 pm
Dr Nagalakshmi Choudhary, Mangalore: ಸಾಕ್ಷಿಗಳ...
05-03-26 04:36 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm