ಮಾನಸಿಕ ಅಸ್ವಸ್ಥ ಮಹಿಳೆಗೆ ಸಹಾಯ ಮಾಡಿದ ಶಿವಮೊಗ್ಗದ ಎಎಸ್ಐ ಮೀರಾಬಾಯಿ

02-08-20 10:36 am       Shimoga Reporter   ಕರ್ನಾಟಕ

ಸಾಗರ ಗ್ರಾಮಾಂತರ ಠಾಣೆಯ ಎಎಸ್ಐ ಮೀರಾಬಾಯಿ ಅವರು ವಿವಸ್ತ್ರದಲ್ಲಿ ಓಡಾಡುತ್ತಿದ್ದ ಮಹಿಳೆಯನ್ನು ಗಮನಿಸಿ ಕೂಡಲೇ ಇತರೆ ಸಿಬ್ಬಂದಿಗಳ ಸಹಾಯದಿಂದ ವಿವಸ್ತ್ರಳಾದ ಮಹಿಳೆಗೆ ಬಟ್ಟೆ ನೀಡಿ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ‌ ಮಾಡಿದ್ದಾರೆ.

ಶಿವಮೊಗ್ಗ , ಆಗಸ್ಟ್ 02: ತಮಿಳುನಾಡು ಮೂಲದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಬಟ್ಟೆಯನ್ನೇ ಧರಿಸದೇ ವಿವಸ್ತ್ರವಾಗಿ ಓಡಾಡುತ್ತಿದ್ದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ನಡೆದಿದೆ.

ಬಕ್ರೀದ್ ಹಬ್ಬದ ಪ್ರಯುಕ್ತ ತಾಳಗುಪ್ಪಕ್ಕೆ ಬಂದೋಬಸ್ತ್ ಕರ್ತವ್ಯ ನಿರ್ವಹಿಸಲು ಆಗಮಿಸಿದ್ದ ಸಾಗರ ಗ್ರಾಮಾಂತರ ಠಾಣೆಯ ಎಎಸ್ಐ ಮೀರಾಬಾಯಿ ಅವರು ವಿವಸ್ತ್ರದಲ್ಲಿ ಓಡಾಡುತ್ತಿದ್ದ ಮಹಿಳೆಯನ್ನು ಗಮನಿಸಿ ಕೂಡಲೇ ಇತರೆ ಸಿಬ್ಬಂದಿಗಳ ಸಹಾಯದಿಂದ ವಿವಸ್ತ್ರಳಾದ ಮಹಿಳೆಗೆ ಬಟ್ಟೆ ಧರಿಸಿ, ದೈಹಿಕವಾಗಿ ಹಸಿವಿನಿಂದ ಬಳಲುತ್ತಿದ್ದ ಮಹಿಳೆಗೆ ತಿಂಡಿ, ನೀರು ನೀಡಿ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ‌ ಮಾಡಿದ್ದಾರೆ.

ನಂತರ‌ ಮಹಿಳೆಯನ್ನು ಸಾಗರದಿಂದ ಬೆಂಗಳೂರಿಗೆ ಬಸ್ ಹತ್ತಿಸಿ ಆಕೆಯ ಊರಿಗೆ ಕಳುಹಿಸುವ ಪ್ರಯತ್ನ ಸಹ‌ ಮಾಡಿದ್ದಾರೆ. ಪೊಲೀಸರೆಂದರೆ ಕೆಲವರು ಮೂಗು ಮುರಿಯುವ ಈ ಕಾಲದಲ್ಲಿ ಅವರಲ್ಲಿಯೂ ಒಳ್ಳೆಯವರು ಇದ್ದಾರೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.