ಸಂತೋಷ್ ಹೆಂಡ್ತಿ ಒಡವೆ ಮಾರಿ ಕಾಮಗಾರಿ ಮಾಡಿದ್ದಾರೆ, ಕುಟುಂಬಕ್ಕೆ ಒಂದು ಕೋಟಿ ಪರಿಹಾರ ಕೊಡಬೇಕು ; ಸಿದ್ದರಾಮಯ್ಯ ಆಗ್ರಹ 

13-04-22 10:02 pm       HK Desk news   ಕರ್ನಾಟಕ

ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಸಂತೋಷ್ ಪತ್ನಿ ಮತ್ತು ತಾಯಿಗೆ ಸಾಂತ್ವನ ಹೇಳಿದ್ದಾರೆ. 

ಬೆಳಗಾವಿ, ಎ.13 : ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಸಂತೋಷ್ ಪತ್ನಿ ಮತ್ತು ತಾಯಿಗೆ ಸಾಂತ್ವನ ಹೇಳಿದ್ದಾರೆ. 

ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಾವು ಇಲ್ಲಿ ರಾಜಕೀಯ ಮಾಡಲಿಕ್ಕೆ ಬಂದಿಲ್ಲ. ಜವಾಬ್ದಾರಿ ವಿರೋಧ ಪಕ್ಷವಾಗಿ ಅಮಾನವೀಯ ಸಾವಿಗೆ ನ್ಯಾಯ ಕೇಳುತ್ತಿದ್ದೇವೆ.‌ ಸಾವಿಗೆ ಕಾರಣ ಈಶ್ವರಪ್ಪ ಅಂತ ಹೇಳಿದ್ದಾರೆ.‌ ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು. ಪಕ್ಷದ ವತಿಯಿಂದ ನಮ್ಮ‌ ಕೈಲಾದಷ್ಟು ಸಹಾಯ ಮಾಡ್ತೀವಿ.‌ ನಾಲ್ಕು ಕೋಟಿ ರೂ. ಕೆಲಸ ಮಾಡಿದ್ದಾರೆ.‌ ಮಂತ್ರಿ ಹೇಳದೇನೆ ಕೆಲಸ ಮಾಡಲಿಕ್ಕೆ ಬರಲ್ಲ.‌ ಕೆಲಸ ಮಾಡಲಿಕ್ಕೆ ಹೇಳಿ ಬಿಲ್ ಪೇಮೆಂಟ್ ಮಾಡಬೇಕಾದಾಗ 40% ಕಮಿಷನ್ ಕೇಳಿದ್ದಾರೆ. 

Breaking; ಸಂತೋಷ್ ಪಾಟೀಲ್ ನಿವಾಸಕ್ಕೆ ಕಾಂಗ್ರೆಸ್‌ ನಾಯಕರ ಭೇಟಿ | Congress Leaders  Visits Contractor Santhosh Patil House - Kannada Oneindia

ಕೆಲಸ ಮಾಡಲಿಕ್ಕೆ ಹೆಂಡತಿ ಒಡವೆಗಳನ್ನ ಅಡ ಇಟ್ಟಿದ್ದರು ಸಂತೋಷ್. ನಾಲ್ಕು ಕೋಟಿ ಹಣ ಅವನಿಗೆ ಸಂದಾಯ ಮಾಡಬೇಕು‌‌. ಬಡ್ಡಿ ಸಾಲ ಮಾಡಿ ಕೆಲಸ ಮಾಡಿದ್ದಾರೆ‌. ಯಾವುದೇ ಸಾವಿಗೆ ಬೆಲೆ ಕಟ್ಟಲಿಕ್ಕೆ ಆಗಲ್ಲ. ಸರಕಾರ ಒಂದು ಕೋಟಿ ಪರಿಹಾರ ಕೊಡಲೇಬೇಕು.‌ ಆತನ ಪತ್ನಿಗೆ ಸರಕಾರಿ ನೌಕರಿ ಕೊಡಬೇಕು. 11 ಲಕ್ಷ ಪರಿಹಾರವನ್ನ ನಾವು ಪಕ್ಷದಿಂದ ಪರಿಹಾರ ಕೊಡುತ್ತೇವೆ. ಈಶ್ವರಪ್ಪ ಅವರನ್ನು ಕೂಡಲೇ ಅರೆಸ್ಟ್ ಮಾಡಬೇಕು.‌ ಕಾನೂನು ಎಲ್ಲರಿಗೂ ಒಂದೇ, ಎಫ್ಐಆರ್ ನಲ್ಲಿ 40 % ಕಮಿಷನ್ ಕೇಳಿದ್ದಾರೆ ಅಂತ ಇದೆ. ಅದಕ್ಕಾಗಿ ಭ್ರಷ್ಟಾಚಾರದ ಕಾಯ್ದೆಯಡಿ ಕೇಸ್ ಹಾಕಬೇಕಾಗುತ್ತದೆ. ಈಶ್ವರಪ್ಪ ಲಂಚ ಡಿಮ್ಯಾಂಡ್ ಮಾಡಿದಕ್ಕೆ‌ ಸಂತೋಷ್ ಸಾವನ್ನಪ್ಪಿದ್ದಾನೆ.‌ ಇದು ಅಮಾನವಿಯವಾದ ಕೃತ್ಯ. ‌ಈಶ್ವರಪ್ಪ ಒಬ್ಬ ಭ್ರಷ್ಟ ಮಿನಿಸ್ಟರ್ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

A team of senior Congress leaders visited the house of Santosh K. Patil and met his family members on Wednesday.AICC general secretary in charge of Karnataka Randeep Singh Surjewala, Leader of the Opposition Siddaramaiah, and KPCC president D.K. Shivakumar were among those who visited the family.They spoke to Jayashree Patil, who said that her husband had pledged her gold jewellery to raise part of the loans taken to build roads in Hindalaga panchayat limits.