ಬ್ರೇಕಿಂಗ್ ನ್ಯೂಸ್
20-06-22 08:45 pm HK News Desk ದೇಶ - ವಿದೇಶ
ಮುಂಬೈ, ಜೂನ್ 20: ಇಬ್ಬರು ಸೋದರರಿಗೆ ಸೇರಿದ ಎರಡು ಕುಟುಂಬಗಳ ಒಂಬತ್ತು ಮಂದಿ ವಿಷ ಸೇವಿಸಿ ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದ್ದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಕರ್ನಾಟಕ ಗಡಿ ಜಿಲ್ಲೆ ಸಾಂಗ್ಲಿಯ ಮೀರಜ್ ತಾಲೂಕಿನ ಮೈಸಾಲ್ ಎನ್ನುವ ಗ್ರಾಮದಲ್ಲಿ ಇಬ್ಬರು ಸೋದರರ ಎರಡು ಮನೆಗಳಲ್ಲಿ ಘಟನೆ ನಡೆದಿದೆ. ವೃತ್ತಿಯಲ್ಲಿ ಪಶು ವೈದ್ಯರಾಗಿದ್ದ ಪೋಪಟ್ ಯಲ್ಲಪ್ಪ ವಾನ್ಮೋರ್(52) ಅವರ ಅಂಬಿಕಾನಗರದ ಮನೆಯಲ್ಲಿ ಆರು ಮಂದಿಯ ಶವ ಕಂಡುಬಂದಿದ್ದರೆ, ಇನ್ನೊಂದು ಸೋದರನ ಮನೆಯಲ್ಲಿ ಮತ್ತೆ ಮೂವರ ಶವ ಪತ್ತೆಯಾಗಿದೆ. ಸಂಗೀತಾ ಪೋಪಟ್ ವಾನ್ಮೋರ್ (48), ಅರ್ಚನಾ ಪೋಪಟ್ ವಾನ್ಮೋರ್(30), ಶುಭಮ್ ಪೋಪಟ್ ವಾನ್ಮೋರ್ (28), ಮಾನಿಕ್ ಯಲ್ಲಪ್ಪ ವಾನ್ಮೋರ್ (49), ರೇಖಾ ಮಾನಿಕ್ ವಾನ್ಮೋರ್(45), ಆದಿತ್ಯ ಮಾನಿಕ್ ವಾನ್ಮೋರ್ (15), ಅನಿತಾ ಮಾಣಿಕ್ ವಾನ್ಮೋರ್(28), ಅಕ್ಕತಾಯಿ ವಾನ್ಮೋರ್(72) ಮೃತರು ಎಂದು ಪೊಲೀಸರು ಗುರುತಿಸಿದ್ದಾರೆ.
ಬ್ಯಾಂಕ್ ಸಾಲ ಹೊಂದಿದ್ದರಿಂದ ಎರಡು ಕುಟುಂಬಗಳು ಧೃತಿಗೆಟ್ಟು ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಅಂಬಿಕಾ ನಗರದ ಮನೆಯಲ್ಲಿ ಬೆಳಗ್ಗಿನಿಂದಲೂ ಓಪನ್ ಆಗಿರಲಿಲ್ಲ. ಸ್ಥಳೀಯರು ಸಂಶಯದಿಂದ ಬಾಗಿಲು ಬಡಿದು ನೋಡಿದ್ದಾರೆ. ಯಾರೂ ಸ್ಪಂದಿಸದೇ ಇದ್ದಾಗ, ಬಾಗಿಲು ಮುರಿದು ನೋಡಿದ್ದು ಮನೆಮಂದಿ ಸಾವು ಕಂಡಿದ್ದರು. ಆನಂತರ ಇನ್ನೊಬ್ಬ ಸೋದರನ ರಾಜಧಾನಿ ಕಾರ್ನರ್ ಎನ್ನುವ ಜಾಗದ ಮನೆಯಲ್ಲಿ ಮೂರು ಶವಗಳು ಪತ್ತೆಯಾಗಿವೆ. ಎರಡೂ ಕಡೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶವಗಳನ್ನು ಪೋಸ್ಟ್ ಮಾರ್ಟಂ ಕಳಿಸಿದ್ದು, ವೈದ್ಯಕೀಯ ಪರೀಕ್ಷೆಯ ಬಳಿಕವೇ ಸಾವಿನ ಕಾರಣ ತಿಳಿಯಬೇಕಷ್ಟೆ ಎಂದಿದ್ದಾರೆ.
In a tragic incident reported from Mhaisal under Miraj taluka in the Sangli district of Maharashtra, nine members of two brothers' families died after allegedly consuming poison at their houses in separate places on Monday.While six of the family members were found dead in their house at Ambikanagar, the bodies of the other three were recovered from another house in Rajdhani Corner.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm