ಬ್ರೇಕಿಂಗ್ ನ್ಯೂಸ್
            
                        15-07-22 03:27 pm HK News Desk ದೇಶ - ವಿದೇಶ
            ಕೊಲಂಬೋ, ಜುಲೈ 15: ಮಾಲ್ದೀವ್ಸ್ ಬಳಿಕ ಸಿಂಗಾಪುರಕ್ಕೆ ಹಾರಿರುವ ಲಂಕಾ ಅಧ್ಯಕ್ಷ ಗೊಟಬಾಯ ರಾಜಪಕ್ಸ ಅಂತೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ,. ರಾಜಿನಾಮೆ ಪತ್ರವನ್ನು ಸಂಸತ್ತಿನ ಸ್ಪೀಕರ್ ಅಂಗೀಕರಿಸಿದ್ದು, ಹೊಸ ಅಧ್ಯಕ್ಷರ ನೇಮಕ ಆಗೋ ವರೆಗೂ ಹಂಗಾಮಿ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಅವರನ್ನೇ ಮುಂದುವರಿಯುವಂತೆ ಸೂಚಿಸಿದ್ದಾರೆ. ರಾಜಪಕ್ಸ ರಾಜಿನಾಮೆ ನೀಡುತ್ತಿದ್ದಂತೆ ಕೊಲಂಬೋಲ್ಲಿ ಬೀದಿಗಿಳಿದಿದ್ದ ಪ್ರತಿಭಟನಾಕಾರರು ಹರ್ಷ ವ್ಯಕ್ತಪಡಿಸಿದ್ದಾರೆ.
ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜುಲೈ 20ರಂದು ನಡೆಯಲಿದೆ ಎಂದು ಸಂಸತ್ತಿನ ಮೂಲಗಳು ತಿಳಿಸಿವೆ. ಇದರೊಂದಿಗೆ ನೂರು ದಿನಗಳ ಪರ್ಯಂತ ನಡೆದ ಪ್ರತಿಭಟನೆ ಅಂತ್ಯವಾಗಿದ್ದು, ದೇಶದ ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಸರ್ವಪಕ್ಷಗಳ ಸರಕಾರ ಅಸ್ತಿತ್ವಕ್ಕೆ ತರಲು ವೇದಿಕೆ ಸಜ್ಜಾಗಿದೆ. ಅಧ್ಯಕ್ಷರ ಸ್ಥಾನಕ್ಕೇರಲು ಆಡಳಿತ ಮತ್ತು ವಿಪಕ್ಷಗಳಿಂದ ಹಲವರು ಕಸರತ್ತು ನಡೆಸುತ್ತಿದ್ದಾರೆ. ಆದರೆ, ಹಿರಿತನ ಮತ್ತು ಅನುಭವದ ಆಧಾರದಲ್ಲಿ ಹಾಲಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರೇ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲದೆ, ಹಿರಿಯ ಸಚಿವ ಸಜಿತ್ ಪ್ರೇಮದಾಸ, ಮಾಜಿ ಸಚಿವ ದುಲ್ಲಾಸ್ ಅಲ್ಲಾಹಪೆರುಮಾ, ಜೆವಿಪಿ ಪಕ್ಷದ ನಾಯಕ ಅನುರಾ ಕುಮಾರ ನಾಯಕ ಹೆಸರು ಕೂಡ ಮುಂಚೂಣಿಯಲ್ಲಿ ಕೇಳಿಬರುತ್ತಿದೆ.

ಈ ನಡುವೆ, ಸ್ಪೀಕರ್ ಅಭಯವರ್ದನ ಜುಲೈ 16ರಂದು ಸಂಸತ್ತಿನ ಸಭೆ ಕರೆದಿದ್ದು, ಎಲ್ಲ ಪಕ್ಷಗಳ ಸಂಸದರು ಪಾಲ್ಗೊಳ್ಳುವಂತೆ ಸೂಚಿಸಿದ್ದಾರೆ. ಮುಂದಿನ ಅಧ್ಯಕ್ಷ ಮತ್ತು ಪ್ರಧಾನಿ ಆಯ್ಕೆ ಬಗ್ಗೆ ಸಂಸತ್ತಿನ ಅಭಿಪ್ರಾಯ ಆಲಿಸಲು ತಯಾರಿ ನಡೆಸಿದ್ದಾರೆ. ಈ ನಡುವೆ, ಗೊಟಬಾಯ ರಾಜಪಕ್ಸ ಲಂಕಾದಿಂದ ಎಸ್ಕೇಪ್ ಆಗಲು ಭಾರತದ ಹೈಕಮಿಷನ್ ಸಹಾಯ ಮಾಡಿದೆ ಎನ್ನುವ ವದಂತಿ ಹಬ್ಬಿದ್ದು, ರಾಯಭಾರ ಕಚೇರಿ ಅಂತಹ ವದಂತಿಯನ್ನು ಅಲ್ಲಗಳೆದಿದೆ. ಗೊಟಬಾಯ ರಾಜಿನಾಮೆಯೊಂದಿಗೆ ರಾಜಪಕ್ಸ ಕುಟುಂಬದ ಸುದೀರ್ಘ ಕಾಲದ ಸರ್ವಾಧಿಕಾರದ ಆಡಳಿತ ಕೊನೆಯಾಗಿದ್ದು, ಪ್ರಧಾನಿ, ಅಧ್ಯಕ್ಷ ಪದವಿಯನ್ನೂ ಕಳಕೊಂಡಿದ್ದಾರೆ. ಮೂರು ತಿಂಗಳ ಹಿಂದಿನ ವರೆಗೂ ಇದೇ ಕುಟುಂಬದ ಸದಸ್ಯರು ಅಧ್ಯಕ್ಷ, ಪ್ರಧಾನಿ, ಸಚಿವ ಸ್ಥಾನದಲ್ಲಿದ್ದರು.
ಲಂಕಾ ದಿವಾಳಿ ಮಾಡಿದ್ದ ರಾಜಪಕ್ಸ ಕುಟುಂಬ

ಆರ್ಥಿಕ ಬಿಕ್ಕಟ್ಟು ಎದುರಾಗಿ ಜನರು ಬೀದಿಗಿಳಿಯುತ್ತಲೇ ಮೊದಲಿಗೆ ಸಚಿವ ಸ್ಥಾನದಲ್ಲಿದ್ದ ಪ್ರಧಾನಿಯ ಪುತ್ರನೇ ರಾಜಿನಾಮೆ ನೀಡಿದ್ದ. ಆನಂತರ, ತೀವ್ರ ವಿರೋಧ ಎದುರಾದ ಬಳಿಕ ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸ ರಾಜಿನಾಮೆ ನೀಡಿದ್ದರು. ಇದೀಗ ಅಧ್ಯಕ್ಷ ಸ್ಥಾನಕ್ಕೆ ಮಹಿಂದಾ ಅವರ ಸೋದರ ಗೊಟಬಾಯ ಅವರೂ ರಾಜಿನಾಮೆ ನೀಡಿದ್ದಾರೆ. ಸುದೀರ್ಘ ನಲ್ವತ್ತು ವರ್ಷಗಳಿಂದಲೂ ರಾಜಪಕ್ಸ ಕುಟುಂಬದ ಸದಸ್ಯರೇ ಲಂಕಾದಲ್ಲಿ ಅಧಿಕಾರ ಹೊಂದಿದ್ದು, ಪ್ರತಿ ಬಾರಿ ಆಯ್ಕೆಯಾಗಿ ಬರಲು ದೇಶದ ಜನರಿಗೆ ಅಗ್ಗದ ತಂತ್ರಗಳಿಗೆ ಮೊರೆ ಹೋಗಿದ್ದರು. ಇದೇ ನೀತಿಯಿಂದಾಗಿ ಲಂಕಾದಲ್ಲಿ ಆರ್ಥಿಕತೆ ದಿಕ್ಕೆಟ್ಟು ಹೋಗಿದ್ದು, ಸರಕಾರ ದಿವಾಳಿಯಾಗಿತ್ತು. ಪೆಟ್ರೋಲ್ ಸೇರಿದಂತೆ ದಿನಾವಶ್ಯಕ ಸಾಮಗ್ರಿಗಳ ಬೆಲೆ ಗಗನಕ್ಕೇರಿತ್ತು. ಕೊನೆಯಲ್ಲಿ ಪೆಟ್ರೋಲ್ ಖರೀದಿಸುವುದಕ್ಕೂ ಸರಕಾರದ ಬಳಿ ಹಣ ಇರಲಿಲ್ಲ. ಇದರ ಪರಿಣಾಮ ಜನರು ಕಳೆದ ಮೂರು ತಿಂಗಳಿಂದ ಬೀದಿಗಿಳಿದು ಹೋರಾಟ ಆರಂಭಿಸಿದ್ದರು. ಹಿಂಸೆಗೆ ಇಳಿಯದಿದ್ದರೂ, ಜನರು ರಾಜಪಕ್ಸ ಆಡಳಿತ ಕೊನೆಗೊಳಿಸುವಂತೆ ಆಗ್ರಹ ಮುಂದಿಟ್ಟಿದ್ದರು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ ನಡೆಸಿಕೊಂಡು ಬಂದಿದ್ದ ರಾಜಪಕ್ಸ ಅಂತೂ ರಾಜ್ಯವನ್ನೇ ಬಿಟ್ಟು ಹೊರನಡೆದಿದ್ದಾರೆ.
            
            
            Exhausted and drained after nearly 100 days of protests, a small crowd gathered its remaining strength Thursday to celebrate the resignation of Sri Lanka’s leader at the seaside headquarters of their campaign to oust him.A stone’s throw from what had days earlier been the office of President Gotabaya Rajapaksa, people smiled wearily at their compatriots as they danced,handed out sweets, embraced each other or waved the national flag.
    
            
             04-11-25 04:38 pm
                        
            
                  
                Bangalore Correspondent    
            
                    
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             04-11-25 06:15 pm
                        
            
                  
                Mangalore Correspondent    
            
                    
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
ಹಿಂದುಗಳು, ಬಿಜೆಪಿಗರೆಂದು ತಾರತಮ್ಯಗೈದರೆ ಕ್ಷೇತ್ರದ...
03-11-25 10:47 pm
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm