ಬ್ರೇಕಿಂಗ್ ನ್ಯೂಸ್
22-07-22 09:47 pm HK News Desk ದೇಶ - ವಿದೇಶ
ವಯನಾಡ್, ಜುಲೈ 22: ಕೇರಳದಲ್ಲಿ ಒಂದೆಡೆ ಮಂಕಿ ಪಾಕ್ಸ್ ಭೀತಿ ಮೂಡಿಸಿದ್ದರೆ, ಮತ್ತೊಂದೆಡೆ ವಯನಾಡ್ ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರವೂ ಕಾಣಿಸಿಕೊಂಡಿದೆ. ರೋಗದ ಬಗ್ಗೆ ಸ್ಯಾಂಪಲನ್ನು ಭೋಪಾಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಆಫ್ರಿಕನ್ ಹಂದಿ ಜ್ವರ ಖಚಿತವಾಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ.
ಕಳೆದ ವಾರ ಹಂದಿ ಫಾರ್ಮ್ ನಲ್ಲಿ ಐದು ಹಂದಿಗಳು ದಿಢೀರ್ ಆಗಿ ಸಾವು ಕಂಡಿದ್ದರಿಂದ ಪಶು ಚಿಕಿತ್ಸಾಲಯದ ವೈದ್ಯರು ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ಹಂದಿ ಜ್ವರ ಖಚಿತವಾಗುತ್ತಲೇ ಎರಡು ಕಿಮೀ ಸುತ್ತಲಿನ ಹಂದಿ ಫಾರ್ಮ್ ಗಳಲ್ಲಿರುವ ಎಲ್ಲ ಹಂದಿಗಳನ್ನು ಕೊಲ್ಲಲು ಆರೋಗ್ಯ ಇಲಾಖೆ ಸೂಚಿಸಿದೆ. ಆಸುಪಾಸಿನಲ್ಲಿ ಮೂರು ಫಾರ್ಮ್ ಗಳಿದ್ದು ಅದರಲ್ಲಿ 300ರಷ್ಟು ಹಂದಿಗಳಿದ್ದು ಅವನ್ನು ಶುಕ್ರವಾರವೇ ಕೊಂದು ಮುಗಿಸಲು ಆದೇಶ ಮಾಡಲಾಗಿದೆ.
ಹಂದಿ ಜ್ವರ ಮಾನವನಿಗೆ ಹರಡುವುದು ಅಪರೂಪ. ಆದರೆ, ಕೆಲವು ಸಂದರ್ಭಗಳಲ್ಲಿ ಜ್ವರ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ವಯನಾಡ್ ಮತ್ತು ಕೋಝಿಕ್ಕೋಡ್ ಜಿಲ್ಲೆಯಲ್ಲಿ ಎಲರ್ಟ್ ಮಾಡಲಾಗಿದೆ. ರೋಗದ ಶಂಕೆಯಲ್ಲಿ ಎರಡು ವಾರಗಳ ಹಿಂದೆಯೇ ಹಂದಿ ಮಾಂಸ ಹೊರ ರಾಜ್ಯಗಳಿಗೆ ಸಾಗಾಟ ಮಾಡುವುದಕ್ಕೆ ರಾಜ್ಯ ಸರಕಾರ ನಿಷೇಧ ವಿಧಿಸಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಹಂದಿ ಮತ್ತು ಬೀಫ್ ಮಾಂಸವನ್ನು ಆಹಾರವಾಗಿ ಬಳಸುವ ಮೊದಲು ಚೆನ್ನಾಗಿ ಬೇಯಿಸಬೇಕು ಎಂದು ಜನರಿಗೆ ಸೂಚನೆ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹಂದಿ ಜ್ವರವು ಪ್ರಾಣಿಗಳಲ್ಲಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಮನುಷ್ಯನಿಗೆ ಹರಡಿ ಸಮಸ್ಯೆ ಆಗುವುದಕ್ಕಿಂತಲೂ ಹಂದಿಯಿಂದ ಇತರ ಪ್ರಾಣಿಗಳಿಗೆ ಹರಡಿ ದೊಡ್ಡ ಮಟ್ಟದಲ್ಲಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಹಂದಿ ಫಾರ್ಮ್ ಗಳಿಗೆ ಇದರಿಂದ ದೊಡ್ಡ ಹೊಡೆತ ಬೀಳುತ್ತದೆ ಎಂದು ಹೇಳಿದೆ.
African swine fever found in Kerala’s Wayanad, mass culling of pigs soonTwo districts of north Kerala have been put on high alert after African swine fever was detected in pigs in Wayanad on Friday, health officials said.
21-10-25 11:01 pm
Bangalore Correspondent
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
21-10-25 03:11 pm
HK News Desk
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
21-10-25 09:49 pm
Mangalore Correspondent
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
Ashoka Janamana in Puttur, CM Siddaramaiah: ಪ...
20-10-25 07:25 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm