ಬ್ರೇಕಿಂಗ್ ನ್ಯೂಸ್
04-09-22 06:03 pm HK News Desk ದೇಶ - ವಿದೇಶ
ನವದೆಹಲಿ, ಸೆ.4: ಭಾರತವು 2029ರ ವೇಳೆಗೆ ಜರ್ಮನಿ ಮತ್ತು ಜಪಾನ್ ಆರ್ಥಿಕತೆಯನ್ನು ಹಿಂದಿಕ್ಕಿ ಜಗತ್ತಿನಲ್ಲಿ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಎಸ್ ಬಿಐ ಸಂಶೋಧನಾ ವರದಿಯೊಂದು ಹೇಳಿದೆ.
ಭಾರತದ ಜಿಡಿಪಿ ದರವು ವಿಸ್ತಾರಗೊಳ್ಳುತ್ತಿದ್ದು, ಸದ್ಯಕ್ಕೆ ಯುಕೆಯನ್ನು ಹಿಂದಿಕ್ಕಿ 5ನೇ ಸ್ಥಾನದಲ್ಲಿದೆ. ಹಾಗೆ ನೋಡಿದರೆ, 5ನೇ ಸ್ಥಾನಕ್ಕೆ ಏರಿರುವುದು ಇತ್ತೀಚಿನ ಬೆಳವಣಿಗೆ ಅಲ್ಲ. 2021ರ ಡಿಸೆಂಬರ್ ನಲ್ಲಿಯೇ ಯುಕೆ ಆರ್ಥಿಕತೆಯನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಹೋಗಿತ್ತು. ಭಾರತದ ಜಿಡಿಪಿ ಬೆಳವಣಿಗೆ ದರ ಈಗ ಶೇ. 3.5ರಲ್ಲಿದೆ. 2014ರಲ್ಲಿ ಅದು ಶೇ. 2.5ರಲ್ಲಿತ್ತು. ಇದೇ ರೀತಿ ಬೆಳವಣಿಗೆಯಾದಲ್ಲಿ 2027ರ ಹೊತ್ತಿಗೆ ಜಿಡಿಪಿ ನಾಲ್ಕು ಶೇಕಡಾಕ್ಕೆ ಏರಿಕೆಯಾಗಲಿದೆ. ಹಾಗಾದಲ್ಲಿ ಜರ್ಮನಿ ಆರ್ಥಿಕತೆಯನ್ನು ಹಿಂದಿಕ್ಕಲಿದೆ ಎಂದು ಎಸ್ ಬಿಐ ಸಂಶೋಧನಾ ವಿಭಾಗದ ಗ್ರೂಪ್ ಚೀಫ್ ಇಕನಾಮಿಕ್ ಅಡ್ವೈಸರ್ ಸೌಮ್ಯಾ ಕಾಂತಿ ಘೋಷ್ ಬರೆದಿದ್ದಾರೆ.
2014ರಲ್ಲಿ ಜಿಡಿಪಿ ಆಧಾರದಲ್ಲಿ ವಿಶ್ವ ಆರ್ಥಿಕತೆಯಲ್ಲಿ ಭಾರತದ ಸ್ಥಾನ ಹತ್ತರಲ್ಲಿತ್ತು. 2022-23ರ ಸಾಲಿನ ಮೊದಲ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ 13.5ರಲ್ಲಿತ್ತು. ಇದನ್ನು ಬೇರೆ ದೇಶಗಳಿಗೆ ಹೋಲಿಸಿದರೆ ಅತ್ಯಂತ ವೇಗದ ಬೆಳವಣಿಗೆಯಂತೆ ಕಾಣುತ್ತದೆ. 2022ರ ಜೂನ್ ವೇಳೆಗೆ ಜಿಡಿಪಿ ದರ 13.5ರಷ್ಟು ದಾಖಲಾಗಿತ್ತು. ಅದಕ್ಕೂ ಹಿಂದೆ 2021-22ರ ಸಾಲಿನಲ್ಲಿ ಬೆಳವಣಿಗೆ ದರವು ಶೇ. 20.1ರಲ್ಲಿತ್ತು. ಅಂದರೆ, 2022ರಲ್ಲಿ ದೇಶದ ಒಟ್ಟು ಜಿಡಿಪಿ 36.85 ಲಕ್ಷ ಕೋಟಿಗೇರಿದ್ದರೆ, ಹಿಂದಿನ ಸಾಲಿನಲ್ಲಿ ಈ ಮೊತ್ತ 32.46 ಲಕ್ಷ ಕೋಟಿ ಇತ್ತು ಎಂದು ಎಸ್ ಬಿಐ ಅಧಿಕೃತ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಸ್ 18 ಡಾಟ್ ಕಾಮ್ ವರದಿ ಮಾಡಿದೆ.
ಕಳೆದ ಶುಕ್ರವಾರ ಬ್ಲೂಮ್ ಬರ್ಗ್ ಸಂಸ್ಥೆಯು ಭಾರತದ ಆರ್ಥಿಕತೆಯು ಯುನೈಟೆಡ್ ಕಿಂಗ್ ಡಮ್ ಅನ್ನು ಹಿಂದಿಕ್ಕಿದ್ದಾಗಿ ವರದಿ ಮಾಡಿತ್ತು. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಲ್ಲಿ (ಐಎಂಎಫ್) 2021ರ ಸಾಲಿನ ಉಲ್ಲೇಖಿತವಾಗಿದ್ದ ಜಿಡಿಪಿ ಅಂಶಗಳನ್ನು ಆಧರಿಸಿ ಬ್ಲೂಮ್ ಬರ್ಗ್ ಸಂಸ್ಥೆಯು ಭಾರತದ ಆರ್ಥಿಕತೆಯನ್ನು ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯೆಂದು ಹೇಳಿತ್ತು.
Even as India has surpassed the UK in terms of gross domestic product (GDP) to become the fifth largest economy, an SBI report now says that the Indian economy is expected to become the third largest in the world by 2029, overtaking Germany and Japan as well. In that year, India will be seven notches higher as compared with its position in 2014, when the country was ranked 10th.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm