ಬ್ರೇಕಿಂಗ್ ನ್ಯೂಸ್
09-09-22 08:56 pm HK News Desk ದೇಶ - ವಿದೇಶ
ಲಂಡನ್;ಸೆ.9: ಕೊಹಿನೂರ್ ವಜ್ರ ಬರೋಬ್ಬರಿ 105.6 ಕ್ಯಾರಟ್ ತೂಕದ ವಿಶ್ವದ ಅತ್ಯಂತ ಜನಪ್ರಿಯ ವಜ್ರವಿದು. ಬ್ರಿಟನ್ ರಾಣಿ ಎಲಿಜಬೆತ್-II ಅವರ ನಿಧನಾನಂತರ ಈ ವಜ್ರದಿಂದ ಮಾಡಿದ ಕಿರೀಟ ಕೆಮಿಲ್ಲಾ ಅವರ ಮುಡಿಗೇರಲಿದೆ ಅನ್ನೋ ಸುದ್ದಿಯ ಮೂಲಕ ಕೊಹಿನೂರ್ ಡೈಮಂಡ್ ಮತ್ತೆ ಮುನ್ನಲೆಗೆ ಬಂದಿದೆ..!
1937ರಲ್ಲಿ ಬ್ರಿಟನ್ ರಾಣಿಯ ಕಿರೀಟದಲ್ಲಿ ಸ್ಥಾನ ಪಡೆದ ಕೊಹಿನೂರ್ ವಜ್ರ, ಇದೀಗ ರಾಣಿ ಎಲಿಜಬೆತ್-II ಅವರ ಮರಣಾನಂತರ ರಾಜ ಚಾರ್ಲ್ಸ್ - III ಅವರ ಪತ್ನಿ ರಾಣಿ ಕೆಮಿಲ್ಲಾ ಅವರ ಮುಡಿಗೇರಲಿದೆ. ರಾಜ ಚಾರ್ಲ್ಸ್ - III ಅವರ ಪಟ್ಟಾಭಿಷೇಕದ ದಿನವೇ ರಾಣಿ ಕೆಮಿಲ್ಲಾ ಅವರು ಕೊಹಿನೂರ್ ವಜ್ರದಿಂದ ತಯಾರಿಸಿದ ಕಿರೀಟವನ್ನು ಧರಿಸಲಿದ್ದಾರೆ.
14ನೇ ಶತಮಾನದಲ್ಲಿ ಭಾರತದ ಗೋಲ್ಕೊಂಡ ಗಣಿಯಲ್ಲಿ ಕೊಹಿನೂರ್ ವಜ್ರ ಸಿಕ್ಕಿತು ಎನ್ನುತ್ತದೆ ಇತಿಹಾಸ. ಆರಂಭದಲ್ಲಿ ಈ ವಜ್ರ ಮೊಘಲ್ ದೊರೆಗಳ ಬಳಿಯಲ್ಲಿತ್ತು. ನಂತರ ಇರಾನ್ ಯೋಧರ ಕೈ ಸೇರಿತು. ಆ ನಂತರ ಅಫ್ಘಾನಿಸ್ತಾನದ ರಾಜರುಗಳ ಬಳಿಯಲ್ಲಿತ್ತು. ಅಂತಿಮವಾಗಿ ಬ್ರಿಟಿಷರ ಕೈ ಸೇರುವ ಮುನ್ನ ಪಂಜಾಬಿ ಮಹಾರಾಜನ ಒಡೆತನದಲ್ಲಿತ್ತು.
ಆಂಗ್ಲೋ-ಸಿಖ್ ಕದನದಲ್ಲಿ ಸೋತ ಲಾಹೋರ್ನ ಪಂಜಾಬಿ ದೊರೆ, ದಂಡದ ರೂಪದಲ್ಲಿ ಕೊಹಿನೂರ್ ವಜ್ರವನ್ನು ಬ್ರಿಟಿಷರಿಗೆ ನೀಡಿದ್ದ. ಬರೋಬ್ಬರಿ 186 ಕ್ಯಾರಟ್ ಇದ್ದ ಈ ವಜ್ರವನ್ನು 1849ರಲ್ಲಿ ಬ್ರಿಟಿಷರಿಗೆ ನೀಡಬೇಕಾಯ್ತು. 10 ವರ್ಷದ ಯುವ ರಾಜ ದುಲೀಪ್ ಸಿಂಗ್ನನ್ನು ಆತನ ತಾಯಿಯಿಂದ ಬೇರ್ಪಡಿಸಿ ವಜ್ರದ ಸಮೇತ ಬ್ರಿಟನ್ಗೆ ರವಾನಿಸಲಾಗಿತ್ತು. 1847ರಲ್ಲಿ ಲಾಹೋರ್ನಿಂದ ಹೊರಟ 10 ವರ್ಷದ ಬಾಲಕ ದುಲೀಪ್ ಸಿಂಗ್, ಒಪ್ಪಂದದ ಪ್ರಕಾರ ಬ್ರಿಟನ್ ರಾಣಿಗೆ ವಜ್ರ ಕೊಡುವ ಉದ್ದೇಶದಿಂದಲೇ ಬ್ರಿಟನ್ಗೆ ಪ್ರಯಾಣ ಬೆಳೆಸಿದ್ದ. ಅಂದಿನಿಂದ ಇಂದಿನವರೆಗೆ ಈ ವಜ್ರವು ಬ್ರಿಟನ್ ರಾಣಿಯ ಕಿರೀಟ ಸೇರಿದೆ. ಹಾಗೆ ನೋಡಿದ್ರೆ ಈ ವಜ್ರದ ಗಾತ್ರವು ರಾಣಿಯ ಕಿರೀಟ ಸೇರುವ ಮುನ್ನ ಶೇ. 40ರಷ್ಟು ಕಡಿಮೆ ಕೂಡಾ ಆಗಿದೆ. ಇಷ್ಟಾದ್ರೂ ಕೂಡಾ ಈ ಕಿರೀಟ ತುಂಬಾ ಭಾರವಾಗಿದೆ. 2018ರಲ್ಲಿ ಬಿಬಿಸಿ ಡಾಕ್ಯುಮೆಂಟರಿಗೆ ಸಂದರ್ಶನ ನೀಡುವ ವೇಳೆ ಕೊಹಿನೂರ್ ವಜ್ರದ ಕಿರೀಟದ ಬಗ್ಗೆ ಮಾತನಾಡಿದ್ದ ರಾಣಿ ಎಲಿಜಬೆತ್-II ಅವರು, ಈ ಕಿರೀಟ ಧರಿಸಿದ ವೇಳೆ ಕೆಳಗೆ ಬಗ್ಗಿ ನೋಡಲು ಯತ್ನಿಸಿದರೆ ಕತ್ತಿನ ಮೂಳೆ ಮುರಿದು ಹೋಗುವ ಸಾಧ್ಯತೆ ಇರುತ್ತೆ ಎಂದಿದ್ದರು..!
ಕೊಹಿನೂರ್ ವಜ್ರ ಪುರುಷರಿಗೆ ದುರಾದೃಷ್ಟವನ್ನೇ ಹೊತ್ತು ತರುತ್ತೆ ಎಂಬ ನಂಬಿಕೆ ಇದೆ. ಇದಕ್ಕೆ ಕಾರಣ, ಈ ವಜ್ರದ ಹಿಂದೆ ಇರುವ ರಕ್ತಸಿಕ್ತ ಇತಿಹಾಸ. ಈ ವಜ್ರದ ಒಡೆತನ ಹೊಂದಿದ್ದ ಹಲವು ರಾಜರು ದುರಂತ ಅಂತ್ಯ ಕಂಡಿದ್ದೇ ಇದಕ್ಕೆ ಕಾರಣ. ಆದ್ರೆ, ಈ ವಜ್ರವನ್ನು ಮಹಿಳೆಯರು ಅಥವಾ ದೇವರು ಧರಿಸಿದರೆ ಯಾವುದೇ ಸಮಸ್ಯೆ ಆಗೋದಿಲ್ಲವಂತೆ..!
ಕೊಹಿನೂರ್ ವಜ್ರಕ್ಕಾಗಿ ಭಾರತದ ಹೋರಾಟ ;
ಕೊಹಿನೂರ್ ವಜ್ರ ನಮ್ಮದು, ಅದನ್ನು ನಮಗೆ ಹಿಂದಿರುಗಿಸಿ ಎಂದು 1947ರಿಂದಲೇ ಭಾರತ ಆಗ್ರಹಿಸುತ್ತಿದೆ. 1953ರಲ್ಲಿ ರಾಣಿ ಎಲಿಜಬೆತ್ ಅವರ ಪಟ್ಟಾಭಿಷೇಕದ ವೇಳೆಯಲ್ಲೂ ಭಾರತ 2ನೇ ಬಾರಿ ಕೊಹಿನೂರ್ ವಜ್ರ ವಾಪಸ್ ಮಾಡಿ ಎಂದು ಆಗ್ರಹಿಸಿತ್ತು.
ಈ ಹಿಂದೆ ಬ್ರಿಟನ್ ದೇಶಕ್ಕೆ ಭಾರತದ ಹೈಕಮಿಷನರ್ ಆಗಿದ್ದ ಕುಲ್ದೀಪ್ ನಾಯರ್ ಅವರು ಕೊಹಿನೂರ್ ವಜ್ರ ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯಸಭೆಯಲ್ಲಿ ಮನವಿ ಸಲ್ಲಿಸಿದ್ದರು. ಇದಕ್ಕೆ ಮನಮೋಹನ್ ಸಿಂಗ್ ಅವರನ್ನೂ ಒಳಗೊಂಡಂತೆ 50 ಸಂಸದರು ಸಹಿ ಹಾಕಿದ್ದರು. ಆಗ ಮನಮೋಹನ್ ಸಿಂಗ್ ಅವರು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದರು. ಆದರೆ, ಆ ಮನವಿ ಕಥೆ ಏನಾಯ್ತು ಎಂದು ಯಾರಿಗೂ ಗೊತ್ತಿಲ್ಲ.
ಇನ್ನು 2009ರಲ್ಲಿ ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ತುಷಾರ್ ಗಾಂಧಿ ಅವರು ಕೊಹಿನೂರ್ ವಜ್ರ ವಾಪಸ್ ಮಾಡುವಂತೆ ಬ್ರಿಟನ್ಗೆ ಆಗ್ರಹಿಸಿದ್ದರು. ಈ ಕುರಿತಾಗಿ 2013ರಲ್ಲಿ ಪ್ರತಿಕ್ರಿಯೆ ನೀಡಿದ್ದ ಅಂದಿನ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್, ಕೊಹಿನೂರ್ ವಜ್ರ ಹಿಂದಿರುಗಿಸಿ ಎಂದು ಕೇಳೋದು ಅರ್ಥ ಹೀನ ಬೇಡಿಕೆ ಎಂದಿದ್ದರು.
2016ರಲ್ಲಿ ಕೊಹಿನೂರ್ ವಜ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಭಾರತ ಸರ್ಕಾರ ಕೊಹಿನೂರ್ ವಜ್ರವನ್ನು ಲೂಟಿ ಮಾಡಲಾಗಿತ್ತು ಎಂದು ಹೇಳಿತ್ತು. ಈ ಕುರಿತು ಪ್ರಕಟಣೆ ನೀಡಿದ್ದ ಅಂದಿನ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್, ಕೊಹಿನೂರ್ ವಜ್ರವನ್ನು ಕಳ್ಳತನ ಮಾಡಲಾಗಿತ್ತು, ಅಥವಾ ಬಲವಂತವಾಗಿ ಕಸಿದುಕೊಳ್ಳಲಾಗಿತ್ತು ಎಂದು ಹೇಳಿದ್ದರು.
ಆದ್ರೆ, ಇದಕ್ಕೆ ತದ್ವಿರುದ್ದ ಹೇಳಿಕೆ ನೀಡಿದ್ದ ಭಾರತೀಯ ಪುರಾತತ್ವ ಇಲಾಖೆ, ಕೊಹಿನೂರ್ ವಜ್ರವನ್ನು ಸೌಹಾರ್ದಯುತವಾಗಿ ಭಾರತಕ್ಕೆ ವಾಪಸ್ ತರೋದಾಗಿ ಹೇಳಿತ್ತು. ಅಷ್ಟೇ ಅಲ್ಲ, ಕೊಹಿನೂರ್ ವಜ್ರವನ್ನು ವಾಪಸ್ ತರಲು ಯಾವುದೇ ಕಾನೂನಾತ್ಮಕ ಮಾರ್ಗ ಇಲ್ಲ ಎಂದಿದ್ದರು.
The Koh-i-Noor is arguably the most famous diamond in the world. The 105.6 carat dazzling ‘Mountain of Light’, with controversial origins, is now one of 2,800 diamonds, along with sapphires other precious stones, in the Britain monarch’s crown crafted in 1937. It was Queen Elizabeth II’s, until her death on September 8, 2022.The prestigious crown will now reportedly go to Queen Camilla, as she will be crowned, when she takes her place alongside King Charles III in his coronation.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 06:06 pm
Mangalore Correspondent
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
Yaticorp, Mangalore, AI: ಯತಿಕಾರ್ಪ್ ಸಂಸ್ಥೆಯಿಂದ...
15-09-25 08:28 pm
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm