ಬ್ರೇಕಿಂಗ್ ನ್ಯೂಸ್
19-09-22 12:35 pm HK News Desk ದೇಶ - ವಿದೇಶ
ತಿರುವನಂತಪುರಂ, ಸೆ.19: ಭಾಗ್ಯಲಕ್ಷ್ಮಿ ಕೆಲವೊಮ್ಮೆ ಯಾವ ಮೂಲೆಯಿಂದ ಮನೆ ಒಳಕ್ಕೆ ಕಾಲಿಡುತ್ತಾಳೆಂದು ಹೇಳೋದಿಕ್ಕೆ ಬರಲ್ಲ. ಕೇರಳದಲ್ಲಿ ಬಡ ಆಟೋ ಚಾಲಕನ ಪಾಲಿಗೆ ಅದೃಷ್ಟ ಲಕ್ಷ್ಮಿಯೇ ಒಲಿದು ಬಂದಿದ್ದಾಳೆ. ಹಣ ಇಲ್ಲದೆ, ಮಗಳ ದುಡ್ಡಿನಲ್ಲಿ 500 ರೂ. ಮೊತ್ತದ ಲಾಟರಿ ಟಿಕೆಟ್ ಖರೀದಿಸಿದ್ದ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ ಕೋಟ್ಯಾಧಿಪತಿ ಆಗಿದ್ದಾನೆ. ಕೇರಳ ಸರಕಾರದ ಓಣಂ ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ತನ್ನನ್ನು ತಾನೇ ನಂಬದಾಗಿದ್ದಾನೆ.
ತಿರುವನಂತಪುರದ ಶ್ರೀ ವರಹಂ ಎಂಬಲ್ಲಿನ ನಿವಾಸಿ ಅನೂಪ್ ಎಂಬ ಆಟೋ ಚಾಲಕ ಲಾಟರಿ ಗೆದ್ದ ಅದೃಷ್ಟವಂತ. ಲಾಟರಿ ಡ್ರಾಗೊಳ್ಳುವ ದಿನಾಂಕದ ಒಂದು ದಿನದ ಹಿಂದೆ ಮನೆಗೆ ಮರಳುತ್ತಿದ್ದಾಗ ತಿರುವನಂತಪುರದ ಪಜವಂಗಡಿಯ ಗಣಪತಿ ದೇಗುಲದ ಬಳಿ ಅಂಗಡಿಯೊಂದರಲ್ಲಿ ಲಾಟರಿ ಖರೀದಿಸಿದ್ದರು. ಟಿಜೆ 750605 ನಂಬರಿನ ಲಾಟರಿ ಟಿಕೆಟ್ ಮೂಲಕ ಇವರಿಗೆ ಅದೃಷ್ಟದ ಬಾಗಿಲು ತೆರೆದಿದೆ. ಲಾಟರಿ ಏಜೆಂಟ್ ತಂಗರಾಜ್ ಎಂಬವರಿಂದ ಖರೀದಿಸಿದ ಈ ಲಾಟರಿಯಿಂದ ಅನೂಪ್ ಒಂದೇ ದಿನದಲ್ಲಿ ಕೋಟ್ಯಧಿಪತಿಯಾಗಿದ್ದು, ದೇಶದ ಗಮನಸೆಳೆದಿದ್ದಾರೆ.
ಆಟೋ ಚಾಲಕ ಅನೂಪ್ ಬಡ ಕುಟುಂಬದ ವ್ಯಕ್ತಿಯಾಗಿದ್ದು ಆಟೋ ಚಾಲನೆಯಿಂದಲೇ ಜೀವನ ದೂಡುತ್ತಿದ್ದ. ಲಾಟರಿ ಟಿಕೆಟ್ ದರ 500 ರೂಪಾಯಿ ಇದ್ದುದರಿಂದ ಅದನ್ನು ಕೊಳ್ಳುವುದಕ್ಕೂ ಹಣ ಇರಲಿಲ್ಲ. ತನ್ನ ಮಗಳ ಪಿಗ್ಗಿ ಡಬ್ಬಿಯಲ್ಲಿದ್ದ ಐನೂರು ರೂ. ತೆಗೆದುಕೊಂಡು ಹೋಗಿ ಲಾಟರಿ ಖರೀದಿಸಿದ್ದರು. ಮಗಳ ಅದೃಷ್ಟದ ಫಲವೋ ಎಂಬಂತೆ ಅದೇ ಲಾಟರಿ ಟಿಕೇಟಿಗೆ 25 ಕೋಟಿ ರೂ. ಬಹುಮಾನ ಬಂದಿದೆ. ಭಾನುವಾರ ಮಧ್ಯಾಹ್ನ ಎರಡು ಗಂಟೆಗೆ ಕೇರಳದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರು ಲಾಟರಿ ಬಹುಮಾನದ ಫಲಿತಾಂಶ ಪ್ರಕಟಿಸಿದ್ದರು.
Ticket number TJ-750605 has emerged as the winner at the much-awaited Onam bumper lucky draw, which carries a jackpot of Rs 25 crore. Anoop, a native of Sreevaraham in Thiruvananthapuram, has won the mega prize.
23-02-26 05:15 pm
HK News Staffer
ಮಕ್ಕಳು ತಮ್ಮನ್ನು ನೋಡಿಕೊಳ್ತಿಲ್ಲ ಎಂಬ ನೋವು ; ಕೊಡಗ...
23-02-26 12:35 pm
ಜೂನ್ ಒಳಗಡೆ ಸ್ಥಳೀಯ ಸಂಸ್ಥೆ ಚುನಾವಣೆ ; ಸಿಎಂ ಸಿದ್ದ...
23-02-26 11:14 am
ಕುರಿ ಕಾಯುತ್ತಿದ್ದವನು ಸಿಎಂ ಆದದ್ದೇ ಪಟ್ಟಭದ್ರರ ಕಣ್...
21-02-26 11:27 am
ಹಾಸನಾಂಬೆ ಉತ್ಸವ ಟೆಂಡರ್ನಲ್ಲಿ ಭಾರೀ ಗೋಲ್ಮಾಲ್ ? ;...
20-02-26 09:20 pm
23-02-26 06:57 pm
HK News Desk
ಕಠ್ಮಂಡು ಬಳಿ ಭೀಕರ ಬಸ್ ದುರಂತ ; ತ್ರಿಶೂಲಿ ನದಿಗೆ ಬ...
23-02-26 04:45 pm
ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ತಮಿಳುನಾಡು,...
22-02-26 06:19 pm
ಲವ್ ಜಿಹಾದ್’ ತಡೆಗೆ ಗುಜರಾತ್ ನಲ್ಲಿ ವಿವಾಹ ನೋಂದಣಿ...
21-02-26 05:01 pm
ಸುಂಕ ನೀತಿ ಕಾನೂನುಬಾಹಿರ ಎಂದ ಅಮೆರಿಕ ಸುಪ್ರೀಂ ಕೋರ್...
21-02-26 03:07 pm
23-02-26 12:19 pm
Mangalore Correspondent
Mangalore, Thokottu: ವಿದ್ಯುತ್ ಆಘಾತಕ್ಕೊಳಗಾಗಿ ಯ...
23-02-26 12:00 pm
ನನ್ನ ಅಕ್ಕಿ, ತರಕಾರಿ ನಾನೇ ಬೆಳೆಯುತ್ತೇನೆ, ನೀವೂ ಬೆ...
22-02-26 06:55 pm
ಸುಜಿತ್ ಮಾಡೂರು ಬಿಜೆಪಿಯಿಂದ ಉಚ್ಚಾಟನೆ ಪ್ರಕರಣ ; ಸಾ...
21-02-26 09:30 pm
ಲೂಡೋ ಆಡುವಾಗ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟು ವರ್...
21-02-26 09:02 pm
23-02-26 04:30 pm
Mangalore Correspondent
ನೆರೆಮನೆಯಿಂದ ಚಿನ್ನ ಕದ್ದ ಆರೋಪ ; ಅಡೂರು ಠಾಣೆಗೆ ಕರ...
23-02-26 11:36 am
ಶಿವಮೊಗ್ಗದಿಂದ ಕೇರಳಕ್ಕೆ ಗೋಸಾಗಣೆ ; ಮಂಗಳೂರಿನಲ್ಲಿ...
22-02-26 10:43 pm
ಜಮ್ಮು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ; ಜೈಶ್ ಕಮಾ...
22-02-26 10:00 pm
ಮದುವೆ ದಿನವೇ ಆಘಾತ ; ಹಸೆಮಣೆ ಏರಬೇಕಿದ್ದ ಇಬ್ಬರು ಸೋ...
22-02-26 09:32 pm