ಬ್ರೇಕಿಂಗ್ ನ್ಯೂಸ್
19-09-22 05:21 pm HK News Desk ದೇಶ - ವಿದೇಶ
ಲಕ್ನೋ, ಸೆ.19: ದೇಶದಲ್ಲಿರುವ ಎಲ್ಲ ಮದ್ರಸಗಳನ್ನು ಗನ್ ಪೌಡರ್ ಇಟ್ಟು ಸ್ಫೋಟಿಸಬೇಕು. ಮದ್ರಸದಲ್ಲಿರುವ ಮಕ್ಕಳ ತಲೆಗೆ ಖುರಾನ್ ಹೆಸರಿನ ವೈರಸ್ ತುಂಬುತ್ತಿದ್ದಾರೆ. ಅವರ ತಲೆಯಲ್ಲಿ ತುಂಬಿರುವ ವೈರಸ್ ಕಿತ್ತೊಗೆಯಲು ಮಕ್ಕಳನ್ನು ನಿಗಾ ಕೇಂದ್ರಕ್ಕೆ ಹಾಕಬೇಕು ಎಂದು ವಿವಾದಿತ ಯತಿ ನರಸಿಂಗಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನರಸಿಂಗಾನಂದ ವಿರುದ್ಧ ಆಲಿಗಢ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆಲಿಗಢದಲ್ಲಿ ಹಿಂದು ಮಹಾಸಭಾ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯತಿ ನರಸಿಂಗಾನಂದ ಈ ಹೇಳಿಕೆ ನೀಡಿದ್ದಾರೆ. ಚೀನಾದಲ್ಲಿ ಯಾವ ರೀತಿ ಮದ್ರಸಾಗಳನ್ನು ಬಾಂಬ್ ಇಟ್ಟು ಸ್ಫೋಟ ಮಾಡಲಾಗುತ್ತಿದೆಯೋ ಅದೇ ರೀತಿ ತೆರವು ಮಾಡಬೇಕು. ಅಲ್ಲದೆ ಆಲಿಗಢ ಮುಸ್ಲಿಂ ವಿವಿಯನ್ನೂ ಮದ್ರಸಾಗಳ ರೀತಿಯಲ್ಲೇ ಸ್ಫೋಟಿಸಬೇಕು. ಅಲ್ಲಿ ಕಲಿಯುವ ಮಕ್ಕಳನ್ನು ನಿಗಾ ಕೇಂದ್ರಕ್ಕೆ ಕಳುಹಿಸಿ ಅಲ್ಲಿ ಅವರ ಮೆದುಳನ್ನು ಪರೀಕ್ಷೆಗೊಡ್ಡಬೇಕು. ತಲೆಯಲ್ಲಿ ತುಂಬಿರುವ ವೈರಸನ್ನು ತೆಗೆಸಬೇಕು ಎಂದು ಹೇಳಿದ್ದಾರೆ.

ಕಳೆದ ಬಾರಿ ಹರಿದ್ವಾರದಲ್ಲಿ ನರಸಿಂಗಾನಂದ ಇದೇ ರೀತಿ ದ್ವೇಷದ ಹೇಳಿಕೆ ನೀಡಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ಇತ್ತೀಚೆಗೆ ಗಾಂಧೀಜಿ ಬಗ್ಗೆಯೂ ಅವಹೇಳನಕಾರಿ ಮಾತನಾಡಿದ್ದರು. ದೇಶ ವಿಭಜನೆ ಸಂದರ್ಭದಲ್ಲಿ ಒಂದು ಕೋಟಿ ಹಿಂದುಗಳು ಕೊಲ್ಲಲ್ಪಟ್ಟ ಘಟನೆಗೆ ಮಹಾತ್ಮ ಗಾಂಧಿಯೇ ಹೊಣೆಗಾರ ಎಂದು ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದರು. ಆ ಬಗ್ಗೆಯೂ ಪೊಲೀಸರು ಕೇಸು ದಾಖಲಿಸಿದ್ದಾರೆ.

ಆಲಿಗಢ್ ಕಾರ್ಯಕ್ರಮದಲ್ಲಿ ಸ್ವಾಮೀಜಿ, ಭಾರತ್ ಜೋಡೊ ನಡೆಸುತ್ತಿರುವ ರಾಹುಲ್ ಗಾಂಧಿಯ ಬಗ್ಗೆಯೂ ಟೀಕಿಸಿದ್ದು ಆತನೊಬ್ಬ ಜೋಕರ್ ಎಂದಿದ್ದಾರೆ. ರಾಹುಲ್ ಗಾಂಧಿಗೆ ಉತ್ತರ ಪ್ರದೇಶದಲ್ಲಿ ಗೆಲ್ಲಲಿಕ್ಕಾಗದೆ ಕೇರಳದ ವಯನಾಡಿಗೆ ತೆರಳಿದ್ದಾರೆ. ಆತ ಜಿಹಾದಿಗಳ ಜೊತೆ ಸೇರಿ ಯಾತ್ರೆ ನಡೆಸುತ್ತಿದ್ದಾರೆ ಎಂದು ಹೇಳಿದ್ದರು. ರಾಹುಲ್ ಗಾಂಧಿ ಭಾರತವನ್ನು ಜೋಡಿಸಬೇಕೆಂದಿದ್ದರೆ ಮೊದಲು ಪಾಕಿಸ್ಥಾನ ಮತ್ತು ಬಾಂಗ್ಲಾಕ್ಕೆ ಹೋಗಿ ಅದನ್ನು ಭಾರತದ ಜೊತೆ ಜೋಡಿಸಬೇಕು. ಅದನ್ನು ವಿಭಜಿಸಿದ್ದು ಮಹಾತ್ಮ ಗಾಂಧಿ. ಅವನ್ನು ಮತ್ತೆ ಜೋಡಿಸಿದರೆ ನಾವೆಲ್ಲ ರಾಹುಲ್ ಗಾಂಧಿ ಜೊತೆ ಕೈಜೋಡಿಸುತ್ತೇವೆ ಎಂದು ಹೇಳಿದ್ದಾರೆ.
Controversial preacher Yati Narsinghanand Saraswati has been booked for a statement where he allegedly called for the demolition of madrasas and the Aligarh Muslim University using "gunpowder".
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm