ವಾರದ ಹಿಂದೆ ಅಪಘಾತದಲ್ಲಿ  ಬಲಿಯಾದ ಗರ್ಭಿಣಿ ಹೆಂಡತಿ ; ವಿಷ ಸೇವಿಸಿ  ಆತ್ಮಹತ್ಯೆಗೆ ಶರಣಾದ ಗಂಡ 

18-11-22 10:57 pm       HK News Desk   ದೇಶ - ವಿದೇಶ

ಆಸ್ಪತ್ರೆಗೆ ಗಂಡನ ಜೊತೆಗೆ ತಿಂಗಳ ಚಿಕಿತ್ಸೆಗೆ ಬಂದ ಮಹಿಳೆ ರಸ್ತೆ ಅಪಘಾತದಲ್ಲಿ ದಾರುಣ ಸಾವು ಕಂಡಿದ್ದರು.

ಮಹಾರಾಷ್ಟ್ರ, ನ.18:  ​ಆಸ್ಪತ್ರೆಗೆ ಗಂಡನ ಜೊತೆಗೆ ತಿಂಗಳ ಚಿಕಿತ್ಸೆಗೆ ಬಂದ ಮಹಿಳೆ ರಸ್ತೆ ಅಪಘಾತದಲ್ಲಿ ದಾರುಣ ಸಾವು ಕಂಡಿದ್ದರು.

ಕಣ್ಣೇದುರೇ ಕರಳುಬಳ್ಳಿ ಹೊತ್ತು ಹೆಂಡತಿ ಸಾವು ಕಂಡ ಗಂಡ, ಈ ದುಃಖದಿಂದ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಪುಣೆಯಲ್ಲಿ ನಡೆದಿದೆ. 

ದೊಂಡಕರ್ವಾಡಿಯ ರಮೇಶ್​ ನವ್ನಾಥ್​​ ಕನ್ಶಕರ್​ (29) ಸಾವನ್ನಪ್ಪಿದ ವ್ಯಕ್ತಿ. ಕಳೆದ ಎಂಟು ತಿಂಗಳ ಹಿಂದೆ ರಮೇಶ್ ವಿದ್ಯಾ ಎಂಬಾಕೆಯನ್ನು ವಿವಾಹವಾಗಿದ್ದರು. ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಕಳೆದ ವಾರ ಇಲ್ಲಿನ ನಾರಾಯಣ ಗಾಂವ್​ ಆಸ್ಪತ್ರೆಗೆ ತಿಂಗಳ ಚಿಕಿತ್ಸೆಗೆ ಬಂದಿದ್ದರು. ಚಿಕಿತ್ಸೆ ಮುಗಿಸಿ ಗಂಡನ ಜೊತೆ ಮನೆಗೆ ಮರಳುತ್ತಿದ್ದ ವೇಳೆ ಅವರ ಬೈಕ್ ಟ್ರಾಕ್ಟರ್​ ಮುಖಾಮುಖಿಯಾಗಿದೆ.

ಇದರ ಪರಿಣಾಮವಾಗಿ ಪತ್ನಿ ಬೈಕ್​ನಿಂದ ಬಿದ್ದಿದ್ದಾಳೆ. ಈ ವೇಳೆ ಆಕೆ ತಲೆ ಟ್ರಾಕ್ಟರ್​ ಹರಿದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಕಣ್ಣಾರೆ ಕಂಡ ರಮೇಶ್​ ಶಾಕ್​ಗೆ ಒಳಗಾಗಿದ್ದು, ಒತ್ತಡಕ್ಕೆ ಒಳಗಾಗಿದ್ದಾರೆ. ಕಡೆಗೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಇನ್ನು ನಗರದ ಕಿರಿದಾದ ಮತ್ತು ಕೆಟ್ಟ ರಸ್ತೆಗಳಿಂದಾಗಿ ಈ ಸಾವು ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಬ್ಬು ತುಂಬಿದ ಟ್ರ್ಯಾಕ್ಟರ್​ ಹರಿದು ಗರ್ಭಿಣಿ ಸ್ಥಳದಲ್ಲೇ ಸಾವು 

A 29-year-old man allegedly committed suicide on Thursday three days after his pregnant wife died in an accident in Junnar tehsil of Pune district, police said.
Ramesh Kanaskar consumed some poisonous substance in the early hours of Thursday, said an official.On November 14, Kanaskar was riding motorcycle with his mother-in-law and wife Vidya (22) riding pillion in Warulwadi area of Junnar tehsil. They ran into a speed breaker, so Vidya got down, but was hit by an approaching tractor trolley carrying sugarcane.She died on the spot, said the police official.