ಬ್ರೇಕಿಂಗ್ ನ್ಯೂಸ್
18-02-23 09:32 pm HK News Desk ದೇಶ - ವಿದೇಶ
ಮುಂಬೈ, ಫೆ.18 : ಪಕ್ಷವನ್ನೇ ಒಡೆದು ಮಹಾರಾಷ್ಟ್ರ ಸಿಎಂ ಆಗಿರುವ ಏಕನಾಥ್ ಶಿಂಧೆ ಬಣಕ್ಕೆ ಶಿವಸೇನಾ ಪಕ್ಷದ ಅಧಿಕೃತ 'ಬಿಲ್ಲು ಮತ್ತು ಬಾಣ'ದ ಚಿಹ್ನೆಯನ್ನು ನೀಡಿರುವ ಚುನಾವಣಾ ಆಯೋಗದ ವಿರುದ್ಧ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರವೂ ವಾಗ್ದಾಳಿ ಮುಂದುವರಿಸಿದ್ದಾರೆ.
ಉದ್ಧವ್ ಠಾಕ್ರೆ ತಮ್ಮ ನಿವಾಸ ಮಾತೋಶ್ರೀ ಹೊರಗೆ ಸೇರಿದ್ದ ಬೃಹತ್ ಬೆಂಬಲಿಗರ ಸಮೂಹವನ್ನು ಉದ್ದೇಶಿಸಿ ಮಾತನಾಡಿದರು. ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಅವರ ಗುಲಾಮ. ಈ ರೀತಿ ಹಿಂದೆ ಎಂದೂ ನಡೆದಿರಲಿಲ್ಲ ಎಂದವರು ಆರೋಪಿಸಿದರು. ಇದೇ ವೇಳೆ, ಅವರು ಸಹನೆಯಿಂದ ಇರುವಂತೆ ಮತ್ತು ಮುಂದೆ ನಡೆಯಲಿರುವ ಮುಂಬೈ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಸಿದ್ಧತೆ ನಡೆಸುವಂತೆ ಬೆಂಬಲಿಗರಿಗೆ ಮನವಿ ಮಾಡಿದರು.
ತಮ್ಮ ಕಾರಿನ ಸನ್ ರೂಫ್ನಿಂದ ಹೊರಗೆ ನಿಂತು ಮಾತನಾಡುವ ಮೂಲಕ ಉದ್ಧವ್ ಠಾಕ್ರೆ ಅವರು, ತಮ್ಮ ತಂದೆ ಬಾಳಸಾಹೇಬ್ ಠಾಕ್ರೆ ಅವರನ್ನು ಅನುಕರಿಸಿದರು. ಬಾಳ ಸಾಹೇಬ್ ಅವರೂ ತಮ್ಮ ಕಾರ್ನ ರೂಫ್ನಿಂದ ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ತಮ್ಮ ಪಕ್ಷದ ಚಿಹ್ನೆಯನ್ನು ಕಳ್ಳತನ ಮಾಡಲಾಗಿದೆ. ಅದನ್ನು ಕದ್ದ 'ಕಳ್ಳ'ನಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ತಮ್ಮ ವಿರುದ್ಧ ಬಂಡಾಯವೆದ್ದು, ಶಾಸಕರ ಗುಂಪಿನೊಂದಿಗೆ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ ಏಕನಾಥ್ ಶಿಂಧೆ ಬಗ್ಗೆ ಠಾಕ್ರೆ ಗುಡುಗಿದರು.
ಕಳೆದ 75 ವರ್ಷಗಳಲ್ಲಿ ಇಂತಹ ಹೊಡೆತ ಉಂಟಾಗಿರಲಿಲ್ಲ. ತಮ್ಮ ಗುಲಾಮಿ ಸರ್ಕಾರಿ ಯಂತ್ರವನ್ನು ನಮ್ಮ ಕಡೆಗೆ ಛೂ ಬಿಡುವ ಮೂಲಕ ನಮ್ಮನ್ನು ಅಂತ್ಯಗೊಳಿಸಬಹುದು ಎಂದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾವಿಸಿರಬಹುದು. ಆದರೆ ಶಿವಸೇನಾವನ್ನು ಮುಗಿಸುವುದು ಅಸಾಧ್ಯ ಎಂದು ಉದ್ಧವ್ ಕಿಡಿಕಾರಿದರು.
"ಶಿವಸೇನಾವನ್ನು ಮುಗಿಸಬಹುದು ಎಂದು ಪ್ರಧಾನಿ ಅಂದುಕೊಂಡಿದ್ದಾರೆ. ಆದರೆ ಶಿವಸೇನಾವನ್ನು ಎಂದಿಗೂ ಮುಗಿಸಲಾಗದು. ಸರ್ಕಾರದಲ್ಲಿನ ಅವರ ಸೇವಕರಿಗೆ ನಾನು ಹೇಳಲು ಬಯಸುತ್ತೇನೆ, ಸೇನಾ ಯಾರಿಗೆ ಸೇರಿದ್ದು ಎಂಬುದನ್ನು ಜನರು ನಿರ್ಧರಿಸುತ್ತಾರೆ ಎಂದು ಹೇಳಿದರು.
ನಿನ್ನೆ ಚುನಾವಣಾ ಆಯೋಗ ಗುಲಾಮಗಿರಿ ಪ್ರದರ್ಶಿಸಿದೆ. ನಿವೃತ್ತಿ ಬಳಿಕ ಚುನಾವಣಾ ಆಯುಕ್ತರೊಬ್ಬರು ರಾಜ್ಯವೊಂದರ ರಾಜ್ಯಪಾಲರಾಗಬಹುದು. ಏಕೆಂದರೆ ನ್ಯಾಯಾಧೀಶರೊಬ್ಬರು ಇತ್ತೀಚೆಗಷ್ಟೇ ರಾಜ್ಯಪಾಲರಾಗಿದ್ದಾರೆ. ಮೋದಿ ತಮ್ಮ ಸುತ್ತಲೂ ಅಂತಹ ಗುಲಾಮರನ್ನು ಇರಿಸಿಕೊಂಡಿದ್ದಾರೆ ಎಂದು ಆಂಧ್ರಪ್ರದೇಶ ರಾಜ್ಯಪಾಲರಾಗಿ ಆಯ್ಕೆಯಾದ ಕನ್ನಡಿಗ, ಸುಪ್ರೀಂಕೋರ್ಟ್ನ ಮಾಜಿ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಟೀಕಿಸಿದರು.
ಇದೇ ವೇಳೆ ಶಿಂಧೆ ಅವರಿಗೆ ಸವಾಲು ಹಾಕಿದ ಠಾಕ್ರೆ, "ಕಳ್ಳರಿಗೆ ಪವಿತ್ರ 'ಬಿಲ್ಲು ಮತ್ತು ಬಾಣ' ನೀಡಲಾಗಿದೆ. ಅದೇ ರೀತಿ 'ದೀವಟಿಗೆ'ಯನ್ನು (ಉದ್ಧವ್ ಬಣದ ಚಿಹ್ನೆ) ಕಸಿದುಕೊಳ್ಳಬಹುದು. ಅವರು ಗಂಡಸೇ ಆಗಿದ್ದರೆ, ಕದ್ದ 'ಬಿಲ್ಲು ಮತ್ತು ಬಾಣ'ದ ಜತೆ ನಮ್ಮ ಎದುರು ಬರಲಿ. ನಾವು 'ದೀವಟಿಗೆ'ಯೊಂದಿಗೆ ಚುನಾವಣೆ ಎದುರಿಸುತ್ತೇವೆ. ಇದು ನಮ್ಮ ಪರೀಕ್ಷೆ. ಯುದ್ಧ ಶುರುವಾಗಿದೆ ಎಂದು ಸವಾಲೆಸೆದರು.
By Mustafa Shaikh, Paras Harendra Dama: A day after the Election Commission allotted the name ‘Shiv Sena’ and its poll symbol ‘bow and arrow’ to the group led by Maharashtra Chief Minister Eknath Shinde, Shiv Sena (UBT) president Uddhav Thackeray addressed his supporters on Saturday. Uddhav Thackeray launched a scathing attack against Prime Minister Narendra Modi and the Election Commission.
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm