ಬ್ರೇಕಿಂಗ್ ನ್ಯೂಸ್
21-02-23 09:53 pm HK News Desk ದೇಶ - ವಿದೇಶ
ಮುಂಬೈ, ಫೆ.21: ತನ್ನ ತಾಯಿಯನ್ನೇ ಕೊಲೆಗೈದು ಆಕೆಯ ದೇಹದ ಭಾಗಗಳನ್ನು ಫ್ರೈ ಮಾಡಿ ತಿಂದಿರುವ ಆರೋಪದಲ್ಲಿ ನೇಣು ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ವ್ಯಕ್ತಿಗೆ ಮುಂಬೈ ಹೈಕೋರ್ಟ್, ಮೂರು ದಿನಗಳ ಕಾಲ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ.
ಕೊಲ್ಲಾಪುರ ಮೂಲದ ಸುನಿಲ್ ರಾಮ ಕುಚುಕೊರವಿ ಎಂಬಾತನಿಗೆ ಕಳೆದ 2021ರ ಜುಲೈನಲ್ಲಿ ಹೈಕೋರ್ಟ್ ನೇಣು ಗಂಬಕ್ಕೇರಿಸಿ ಸಾಯುವ ವರೆಗೂ ಹಗ್ಗದಲ್ಲಿ ನೇತಾಡಿಸುವ ಶಿಕ್ಷೆಯನ್ನು ಪ್ರಕಟಿಸಿತ್ತು. ಅತ್ಯಂತ ಅಪರೂಪದ ಪ್ರಕರಣ ಆಗಿರುವುದರಿಂದ ಸಮಾಜಕ್ಕೆ ಸಂದೇಶ ಹೋಗಬೇಕು ಅನ್ನುವ ನೆಲೆಯಲ್ಲಿ ಈ ರೀತಿಯ ಘೋರ ಶಿಕ್ಷೆಯನ್ನು ನೀಡಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದರು.
ಆರೋಪಿಯ ಮಗಳಿಗೆ ಮದುವೆ ನಿಶ್ಚಯವಾಗಿದ್ದು, ವಾರದ ಮಟ್ಟಿಗೆ ಪೆರೋಲ್ ಮೇಲೆ ಕಳುಹಿಸಲು ಅವಕಾಶ ನೀಡಬೇಕು ಎಂದು ಕೈದಿಯ ಪರವಾಗಿ ಯುಗ್ ಮೋಹಿತ್ ಚೌಧರಿ ಹೈಕೋರ್ಟಿನಲ್ಲಿ ವಾದ ಮಂಡಿಸಿದ್ದರು. ಸುನಿಲ್ ರಾಮ್ ಅಂತಹ ವ್ಯಕ್ತಿ ಆಗಿರಲಿಲ್ಲ. ಅಪರಾಧ ಹಿನ್ನೆಲೆಯವರೂ ಅಲ್ಲ. ಆತನ ಸಾಯಿಸುವ ಹಿಂದಿನ ಉದ್ದೇಶ ಏನಿತ್ತು ಅನ್ನೋದು ಗೊತ್ತಿಲ್ಲ. ತಲೆನೋವಿನ ಕಾರಣಕ್ಕೆ ಲಿಕ್ಕರ್ ಸೇವನೆ ಮಾಡುತ್ತಿದ್ದ. ಬುದ್ಧಿ ಸ್ಥಿಮಿತ ಇಲ್ಲದ ಸಂದರ್ಭದಲ್ಲಿ ಕೃತ್ಯ ಎಸಗಿದ್ದಾನೆ ಎಂದು ವಕೀಲರು ಹೇಳಿದರು. ಎಎಸ್ ಗಡ್ಕರಿ ಮತ್ತು ಪಿ.ಡಿ ನಾಯ್ಕ್ ಅವರಿದ್ದ ನ್ಯಾಯಪೀಠವು, ವಾರದ ಮಟ್ಟಿಗೆ ಪೆರೋಲ್ ನೀಡಲು ನಿರಾಕರಿಸಿತು. ಆದರೆ ಮೂರು ದಿನಗಳ ಮಟ್ಟಿಗೆ ಪೊಲೀಸ್ ಭದ್ರತೆಯಲ್ಲಿ ಮದುವೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಒದಗಿಸಿತು.
ಬಿಪಿಎಲ್ ಕುಟುಂಬ ಆಗಿರುವುದರಿಂದ ಪೊಲೀಸರನ್ನು ಕರೆದೊಯ್ಯಲು ಹಣ ತೆರುವುದು ಸಾಧ್ಯವಿಲ್ಲ. ಅದನ್ನು ವಿನಾಯ್ತಿ ಮಾಡಬೇಕೆಂದು ವಕೀಲರು ಕೇಳಿಕೊಂಡಿದ್ದಕ್ಕೆ ಒಪ್ಪಿದ ನ್ಯಾಯಾಧೀಶರು, ಫೆ.23ರಿಂದ 25ರ ವರೆಗೆ ಬೆಳಗ್ಗೆ 9ರಿಂದ 6ರ ವರೆಗೆ ಜೈಲಿನಿಂದ ಪೊಲೀಸರ ಸುಪರ್ದಿಯಲ್ಲೇ ಮದುವೆ ಕಾರ್ಯಕ್ರಮಕ್ಕೆ ಒಯ್ಯಬಹುದೆಂದು ತಿಳಿಸಿದರು. ದಿನವೂ ಪೊಲೀಸರೇ ಆತನನ್ನು ಕರೆದೊಯ್ದು ಮತ್ತೆ ಜೈಲಿಗೆ ತಂದು ಬಿಡಬೇಕೆಂದು ನಿರ್ದೇಶನ ನೀಡಿದ್ದಾರೆ.
The Bombay High Court has permitted a man convicted for killing his mother and frying her organs, to attend the wedding of his daughter under police escort. In July 2021, Kolhapur man Sunil Rama Kuchkoravi was sentenced to be hanged by the neck till he was dead, for the offence of murder, subject to confirmation by the High Court. The judge had also remarked that the case was the rarest of rare as it shook the social conscience of society.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm