ಬ್ರೇಕಿಂಗ್ ನ್ಯೂಸ್
02-04-23 01:04 pm HK News Desk ದೇಶ - ವಿದೇಶ
ವಾಷಿಂಗ್ಟನ್, ಎ.2: ತೀವ್ರ ಸುಂಟರಗಾಳಿ ಸಹಿತ ಬೀಸಿದ ಬಿರುಗಾಳಿಯಿಂದ ದಕ್ಷಿಣ ಮತ್ತು ಮಿಡ್ವೆಸ್ಟ್ ನ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ 21 ಮಂದಿ ಮೃತಪಟ್ಟಿದ್ದಾರೆ. ಅರ್ಕಾನ್ಸಾಸ್ ರಾಜಧಾನಿಯ ಅನೇಕ ಪ್ರದೇಶಗಳು ಹಾನಿಗೀಡಾದ ದುರ್ಘಟನೆ ನಡೆದಿದೆ.
ಈ ದುರ್ಘಟನೆ ನಡೆಯುವ ಸಂದರ್ಭದಲ್ಲಿ ಇಲಿನಾಯ್ಸ್ನಲ್ಲಿ ತುಂಬಿದ ಸಂಗೀತ ಕಚೇರಿ ನಡೆಯುತ್ತಿತ್ತು. ಆಗ ಕಟ್ಟಡದ ಮೇಲ್ಛಾವಣಿಯು ಕುಸಿದುಬಿದ್ದಿದೆ, ಜನರು ಭಯಭೀತರಾದರು.
ಕನಿಷ್ಠ ಎಂಟು ರಾಜ್ಯಗಳಲ್ಲಿ ಸುಂಟರಗಾಳಿ ಬೀಸಿದ್ದು ಮನೆಗಳು ಮತ್ತು ಅನೇಕ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು ಹಾನಿಗೀಡಾಗಿವೆ. ಮೃತಪಟ್ಟವರಲ್ಲಿ ಟೆನ್ನೆಸ್ಸೀ ಕೌಂಟಿಯ ಏಳು ಮಂದಿ ಸೇರಿದ್ದಾರೆ. ಅರ್ಕಾನ್ಸಾಸ್ನ ಸಣ್ಣ ಪಟ್ಟಣವಾದ ವೈನೆಯಲ್ಲಿ ನಾಲ್ವರು, ಇಂಡಿಯಾನಾದ ಸುಲ್ಲಿವಾನ್ನಲ್ಲಿ ಮೂವರು ಮತ್ತು ಇಲಿನಾಯ್ಸ್ನಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಶುಕ್ರವಾರ ರಾತ್ರಿಯಿಂದ ಶನಿವಾರದವರೆಗೆ ಅಪ್ಪಳಿಸಿದ ಬಿರುಗಾಳಿಗಳಿಂದ ಅಲಬಾಮಾ ಮತ್ತು ಮಿಸ್ಸಿಸ್ಸಿಪ್ಪಿಯಲ್ಲಿ ಕೂಡ ಜನರು ಸಾವಿಗೀಡಾಗಿದ್ದಾರೆ.
ಮೆಂಫಿಸ್ನ ಪಶ್ಚಿಮಕ್ಕೆ 50 ಮೈಲುಗಳು ದೂರದಲ್ಲಿ 8,000 ಜನರ ಸಮುದಾಯವಾದ ಟೆನ್ನೆಸ್ಸೀಯ ವೈನ್ನ ನಿವಾಸಿಗಳು, ಹೈಸ್ಕೂಲ್ನ ಮೇಲ್ಛಾವಣಿ ಚೂರುಚೂರು ಆಗಿವೆ, ಕಟ್ಟಡದ ಕಿಟಕಿಗಳು ಹಾರಿಹೋಗಿವೆ. ಬೃಹತ್ ಮರಗಳು ಧರೆಗುರುಳಿವೆ. ಮುರಿದು ಬಿದ್ದ ಗೋಡೆಗಳು, ಕಿಟಕಿಗಳು ಮತ್ತು ಛಾವಣಿಗಳು ಮನೆಗಳ ಅವಶೇಷಗಳನ್ನು ನೋಡಬಹುದಾಗಿದೆ.
ಇಂಡಿಯಾನಾ, ಇಲಿನಾಯ್ಸ್, ಅರ್ಕಾನ್ಸಾಸ್ ಮತ್ತು ಟೆನ್ನೆಸ್ಸೀಯಲ್ಲಿ ಸುಮಾರು 4,50,000 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ವ್ಯಾಪಾರ, ವ್ಯವಹಾರಕ್ಕೆ ತೊಂದರೆಯುಂಟಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಅಲಬಾಮಾ ಮತ್ತು ಜಾರ್ಜಿಯಾದ ಭಾಗಗಳಿಗೆ ಸಹ ಎಚ್ಚರಿಕೆ ನೀಡಲಾಗಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ.
At least 21 people have been killed after a series of tornadoes tore through towns and cities in the United States' South and Midwest. Homes were destroyed and thousands left without power after storms caused devastation across several states. According to Washington Post, more than 60 tornado reports have been recorded.
19-07-25 03:05 pm
Bangalore Correspondent
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
19-07-25 10:01 pm
Mangalore Correspondent
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
Dharmasthala Case, Santosh Kumar, CPIM: ಧರ್ಮಸ...
19-07-25 06:14 pm
Yakshagana Pataala Venkataramana Bhat: ಯಕ್ಷಗಾ...
19-07-25 02:32 pm
19-07-25 09:25 pm
Mangalore Correspondent
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am