ಬ್ರೇಕಿಂಗ್ ನ್ಯೂಸ್
17-05-23 12:57 pm HK News Desk ದೇಶ - ವಿದೇಶ
ಮಧ್ಯಪ್ರದೇಶ, ಮೇ 17: ಆಂಬ್ಯುಲೆನ್ಸ್ಗೆ ನೀಡಲು ಹಣವಿಲ್ಲ ಎನ್ನುವ ಹತಾಶೆ, ಕೊನೆಗೆ ತಂದೆಯೊಬ್ಬರು ಮಗಳ ಶವವನ್ನು ಬೈಕ್ನಲ್ಲಿ ತಮ್ಮ ತೊಡೆಯ ಮೇಲೆ ಮಲಗಿಸಿಕೊಂಡು 70 ಕಿ.ಮೀ ಸಂಚರಿಸಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಶಹದೋಲ್ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ್ದಾರೆ, ಬಳಿಕ ತಂದೆಯೊಬ್ಬರು 13 ವರ್ಷದ ಮಗಳ ಶವವನ್ನು ಬೈಕ್ ಸಹಾಯದಿಂದ ತೆಗೆದುಕೊಂಡು ಹೋಗಬೇಕಾಯಿತು.
ಶಾಹದೋಲ್ನಿಂದ 70 ಕಿಮೀ ದೂರದಲ್ಲಿರುವ ಕೋಟಾ ಗ್ರಾಮದ ನಿವಾಸಿ ಲಕ್ಷ್ಮಣ್ ಸಿಂಗ್, ಸೋಮವಾರ ರಾತ್ರಿ ಅವರ ಮಗಳು ಮಾಧುರಿ ಕುಡಗೋಲು ಕಣ ರಕ್ತಹೀನತೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳನ್ನು ವಾಹನಕ್ಕಾಗಿ ಕೇಳಿದ್ದೆವು ಆದರೆ 15 ಕಿ.ಮೀಗಿಂತ ದೂರದ ಸ್ಥಳಗಳಿಗೆ ವಾಹನಗಳು ಲಭ್ಯವಿಲ್ಲ ಎಂದು ತಿಳಿಸಲಾಯಿತು ಎಂದು ಅವರು ಹೇಳಿದರು.
ನೀವೇ ವ್ಯವಸ್ಥೆ ಮಾಡಿಕೊಳ್ಳಿ ಎಂದರು, ಆದರೆ ಹಣದ ಕೊರತೆಯಿಂದಾಗಿ ನಾವು ನಮ್ಮ ಮಗಳ ಮೃತ ದೇಹವನ್ನು ಮೋಟಾರ್ ಸೈಕಲ್ನಲ್ಲಿ ತೆಗೆದುಕೊಂಡು ಹೋಗಬೇಕಾಯಿತು ಎಂದು ತಿಳಿಸಿದ್ದಾರೆ.
ಮನೆ 20 ಕಿ.ಮೀ ದೂರವಿರುವಾಗ ಶಾಹದೂಲ್ ಕಲೆಕ್ಟರ್ ವಂದನಾ ವೈದ್ಯ ಅವರು ವಾಹನದ ವ್ಯವಸ್ಥೆ ಮಾಡಿದರು, ಬಳಿಕ ಊರನ್ನು ತಲುಪಿದೆವು. ಶಹದೋಲ್ ಕಲೆಕ್ಟರ್ ಕುಟುಂಬಕ್ಕೆ ಸ್ವಲ್ಪ ಆರ್ಥಿಕ ಸಹಾಯವನ್ನು ಒದಗಿಸಿದರು ಮತ್ತು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದರು.
A man was forced to carry the body of his 13-year-old daughter on a motorcycle after a government hospital in Madhya Pradesh's Shahdol allegedly refused him an ambulance. Laxman Singh, a resident of Kota village, around 70 km from Shahdol, said his daughter, Madhuri, died of sickle cell anemia on Monday night. He said he had asked the hospital authorities for a vehicle but was told that vehicles are not available for places more than 15 km away.
19-04-24 11:17 pm
HK NEWS
Actress Priya Savadi, Hubballi Neha Murder: ಅ...
19-04-24 07:58 pm
Hubbali Neha Murder, CM Siddaramaiah: ವೈಯಕ್ತಿ...
19-04-24 04:27 pm
Hubballi Murder Neha, Parameshwar: ಹುಬ್ಬಳ್ಳಿ...
19-04-24 04:08 pm
ಶಿವಮೊಗ್ಗ ಸಂಸದ ರಾಘವೇಂದ್ರ 73 ಕೋಟಿ ಆಸ್ತಿ ; ಪತ್ನಿ...
19-04-24 01:41 pm
17-04-24 08:42 pm
HK News Desk
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
Dubai, Oman Rain, flood; ಧಾರಾಕಾರ ಮಳೆಗೆ ಕೊಚ್ಚಿ...
17-04-24 12:53 pm
29 Naxalites killed in Kanker encounter, Chha...
16-04-24 07:50 pm
ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ ; ಏಳು ಮಂದಿ ದುರ್...
16-04-24 05:09 pm
19-04-24 10:11 pm
Mangalore Correspondent
Mangalore accident, Kulur: ಕೋಡಿಕಲ್ ಕ್ರಾಸ್ ನಲ್...
19-04-24 09:55 pm
Mangalore election, 144 section: ಲೋಕಸಭೆ ಚುನಾವ...
19-04-24 08:32 pm
Kalakul, diploma course: ಕಲಾಕುಲ್ ನಾಟಕ ತಂಡದಿಂದ...
19-04-24 05:18 pm
Congress MP Padmaraj, Bantwal: ಬಂಟ್ವಾಳ ಕ್ಷೇತ್...
19-04-24 02:30 pm
19-04-24 10:25 pm
Mangalore Correspondent
Mangalore Acid Attack, EXAM: ಆ್ಯಸಿಡ್ ದಾಳಿಗೀಡಾ...
19-04-24 09:25 pm
Hubballi student Neha murder: ಹುಬ್ಬಳ್ಳಿ ಕಾಲೇ...
19-04-24 03:43 pm
Gadag Murder news, four killed; ನಗರ ಸಭೆ ಉಪಾಧ್...
19-04-24 09:27 am
Bangalore Double Murder: 'ಕರಿಮಣಿ ಮಾಲೀಕ'ನಿಗೆ ತ...
18-04-24 10:03 pm