ಬ್ರೇಕಿಂಗ್ ನ್ಯೂಸ್
31-10-20 12:50 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್ 31: ಮತಾಂತರಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೇವಲ ಮದುವೆಯ ಕಾರಣಕ್ಕೆ ಮತಾಂತರ ಆಗುವುದನ್ನು ಒಪ್ಪಲಾಗಲ್ಲ. ಸಮಾಜಕ್ಕೆ ಸ್ವೀಕಾರಾರ್ಹವಲ್ಲ ಎಂದು ಪ್ರಕರಣ ಒಂದಕ್ಕೆ ಸಂಬಂಧಿಸಿ ಅಭಿಪ್ರಾಯ ಪಟ್ಟಿದೆ. ತಮಗೆ ಪೊಲೀಸರ ರಕ್ಷಣೆ ನೀಡಬೇಕೆಂದು ಹೇಳಿ ವಿವಾಹಿತ ದಂಪತಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯ ಪಟ್ಟಿದ್ದು, ದಂಪತಿ ಸಲ್ಲಿಸಿದ್ದ ಅರ್ಜಿಯನ್ನ ವಜಾಗೊಳಿಸಿದೆ.
ನ್ಯಾಯಾಧೀಶ ಮಹೇಶ್ ಚಂದ್ರ ತ್ರಿಪಾಠಿ, 2014ರ ತಮ್ಮದೇ ಕೋರ್ಟಿನ ತೀರ್ಪನ್ನು ಉಲ್ಲೇಖಿಸಿ ಈ ಅಭಿಪ್ರಾಯ ನೀಡಿದ್ದಾರೆ. ಯುವತಿ ಮುಸ್ಲಿಂ ಹಾಗೂ ಯುವಕ ಹಿಂದು ಎನ್ನುವುದು ತಿಳಿದಿದ್ದು, ಯುವತಿ ತಿಂಗಳ ಹಿಂದೆ ಮತಾಂತರ ಆಗಿರುವುದೂ ತಿಳಿದಿದೆ. ಇಂಥ ಸಂದರ್ಭದಲ್ಲಿ ಕೇವಲ ಮದುವೆಯ ಉದ್ದೇಶಕ್ಕೆ ಮತಾಂತರ ಆಗಿರುವುದು ಕಂಡುಬರುತ್ತದೆ. ಇದನ್ನು ಸ್ವೀಕಾರ ಮಾಡಲಾಗುವುದಿಲ್ಲ ಎಂದು ಹೇಳಿದೆ. ಅಲ್ಲದೆ, ಇದು ಸಂವಿಧಾನದ 226ನೇ ವಿಧಿ ಅನ್ವಯ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.


2014ರಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಅಲಹಾಬಾದ್ ಕೋರ್ಟ್ ಮದುವೆಯಾಗುವ ಕಾರಣಕ್ಕೆ ಮತಾಂತರ ಆಗುವುದು ಸ್ವೀಕಾರಾರ್ಹವಲ್ಲ ಎಂದು ತೀರ್ಪು ನೀಡಿತ್ತು. ಅಂದಿನ ಪ್ರಕರಣದಲ್ಲಿ ಯುವತಿ ಹಿಂದುವಾಗಿದ್ದು, ಯುವಕ ಮುಸ್ಲಿಂ ಆಗಿದ್ದ. ಯುವತಿ ಮತಾಂತರ ಆದ ತಿಂಗಳ ಬಳಿಕ ಮದುವೆಯಾಗಿ, ಕೋರ್ಟಿನಲ್ಲಿ ರಕ್ಷಣೆಗಾಗಿ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿಯನ್ನು ವಜಾಗೊಳಿಸಿ, ಇದೇ ರೀತಿಯ ತೀರ್ಪು ನೀಡಿತ್ತು.
ಅಲ್ಲದೆ, ಇಸ್ಲಾಂ ಧರ್ಮದ ಹುಡುಗನ ಜೊತೆ ಸ್ನೇಹ ಇದ್ದ ಕಾರಣಕ್ಕೆ ಇಸ್ಲಾಂ ಬಗ್ಗೆ ನಂಬಿಕೆ ಇಲ್ಲದ ಯುವತಿ ಕೇವಲ ಮದುವೆಯ ಕಾರಣಕ್ಕೆ ತನ್ನ ಧರ್ಮ ಬದಲಿಸುವುದು ಸರಿಯೇ ಎಂದು ಪ್ರಶ್ನೆ ಮಾಡಿತ್ತು.
Religious conversion only for the purpose of marriage is unacceptable, the Allahabad high court has dismissed a petition filed by an interfaith couple seeking directions to police and the girl’s father not to interfere in their married life.
04-12-25 05:36 pm
HK News Desk
Bagalakote Accident, Four Killed: ಬಾಗಲಕೋಟೆ ;...
03-12-25 03:01 pm
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
04-12-25 05:39 pm
HK News Desk
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
05-12-25 12:24 pm
Mangalore Correspondent
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
ಅಜ್ಜನ ಕೈಹಿಡಿದು ಹೆದ್ದಾರಿ ದಾಟಿ ತಿಂಡಿಗೆ ಹೋಗಿದ್ದ...
04-12-25 12:38 pm
04-12-25 11:15 pm
Mangalore Correspondent
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm
ಬೆಂಗಳೂರು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ; ರಕ್ತಚ...
04-12-25 04:18 pm
ಹೊಸ ವರ್ಷದ ಸಂಭ್ರಮಾಚರಣೆಗೆ ಡ್ರಗ್ಸ್ ಮಾರಾಟ ಮಾಡಲು ಸ...
03-12-25 01:41 pm
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm