ಬ್ರೇಕಿಂಗ್ ನ್ಯೂಸ್
06-11-20 01:34 pm Headline Karnataka News Network ದೇಶ - ವಿದೇಶ
ನವದೆಹಲಿ, ನವೆಂಬರ್ 06: ಕೊರೊನಾ ವೈರಸ್ ಪುನುಗು ಬೆಕ್ಕಿನ ಜಾತಿಯ ಪ್ರಾಣಿಗಳಿಂದ ಹರಡುತ್ತಿದೆ ಎನ್ನುವ ಗುಮಾನಿ ವಿಜ್ಞಾನಿಗಳಲ್ಲಿದೆ. ಈಗಾಗ್ಲೇ ಸ್ಪೇನ್, ನೆದರ್ಲೇಂಡ್ ದೇಶಗಳಲ್ಲಿ ಲಕ್ಷಾಂತರ ಮುಂಗುಸಿ ಅಥವಾ ಪುನುಗು ಜಾತಿಯ ಅಲ್ಲಿನ ಜನ ಇಂಗ್ಲಿಷ್ ಭಾಷೆಯಲ್ಲಿ ಮಿಂಕ್ ಎಂದು ಕರೆಯುವ ಪ್ರಾಣಿಗಳನ್ನು ಕೊಂದು ಹಾಕಿದ್ದಾರೆ.
ಇದೇ ವೇಳೆ, ಯುರೋಪ್ ರಾಷ್ಟ್ರಗಳಲ್ಲೇ ಅತಿ ಹೆಚ್ಚು ಮಿಂಕ್ ಪ್ರಾಣಿಗಳನ್ನು ಹೊಂದಿರುವ ಡೆನ್ಮಾರ್ಕ್ ತನ್ನ ದೇಶದಲ್ಲಿರುವ ಎಲ್ಲ ಪ್ರಾಣಿಗಳನ್ನು ಕೊಲ್ಲುವಂತೆ ಆದೇಶ ಮಾಡಿದೆ. ಅಲ್ಲಿ ಸರಿಸುಮಾರು 17 ಮಿಲಿಯನ್ ಮುಂಗುಸಿ ಜಾತಿಯ ಮಿಂಕ್ ಪ್ರಾಣಿಗಳಿದ್ದು ಅವುಗಳನ್ನು ಪೂರ್ತಿ ಕೊಂದು ಹಾಕುವುದೇ ಅಲ್ಲಿನ ಸರಕಾರಕ್ಕೆ ಚಿಂತೆಯಾಗಿದೆ.
17 ಮಿಲಿಯನ್ ಅಂದರೆ, ಸಾಮಾನ್ಯ ಲೆಕ್ಕದಲ್ಲಿ ಲೆಕ್ಕ ಹಾಕುವುದಾದರೆ 1.70 ಕೋಟಿ ಮಿಂಕ್ ಪ್ರಾಣಿಗಳಿದ್ದು, ಅವುಗಳೆಲ್ಲವನ್ನೂ ಕೊಲ್ಲಲು ಡೆನ್ಮಾರ್ಕ್ ಪ್ರಧಾನಿ ಮೀಟ್ ಪ್ರೆಡರಿಕ್ಸನ್ ಆದೇಶ ಮಾಡಿದ್ದಾರೆ. ಪ್ರತಿ ದಿನವೂ ಮಿಂಕ್ ಫಾರ್ಮ್ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಅದರ ಮಾಲೀಕರಿಗೆ ಕೊರೊನಾ ಸೋಂಕು ಕಂಡುಬರುತ್ತಿರುವುದನ್ನು ಅಲ್ಲಿನ ಸರಕಾರ ಪತ್ತೆ ಮಾಡಿದೆ. ಆದರೆ, ಸೋಂಕು ಮಾನವನಿಂದ ಪ್ರಾಣಿಗಳಿಗೆ ಹರಡಿದೆಯೇ ಅಥವಾ ಪ್ರಾಣಿಗಳ ಮೂಲಕ ಮಾನವನಿಗೆ ಹರಡುತ್ತಿದೆಯೇ ಎನ್ನುವುದು ದೃಢಪಟ್ಟಿಲ್ಲ.
ಪ್ರಾಣಿಗಳನ್ನು ತಪಾಸಣೆ ಮಾಡುವಾಗ ಅದರಲ್ಲೂ ಕೊರೊನಾ ವೈರಸ್ ಇರುವುದು ಕಂಡುಬಂದಿದೆ. ಹೀಗಾಗಿ ನಮ್ಮ ಜನರ ಹಿತವನ್ನು ಕಾಪಾಡುವುದು ಮುಖ್ಯ. ಆದ್ದರಿಂದ ಈ ಪ್ರಾಣಿಗಳನ್ನು ಕೊಂದು ಇನ್ನಿಲ್ಲವಾಗಿಸುವುದೇ ಸದ್ಯದ ದೊಡ್ಡ ಜವಾಬ್ದಾರಿ ಎಂದಿದ್ದಾರೆ ಅಲ್ಲಿನ ಪ್ರಧಾನಿ.
ಈ ನಡುವೆ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಪ್ಯಾರಿಸ್ ಮೂಲದ ವಿಜ್ಞಾನಿಗಳು ಮಿಂಕ್ ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಸೋಂಕು ಹರಡುತ್ತಿದೆಯೇ ಅನ್ನುವ ಬಗ್ಗೆ ಅಧ್ಯಯನ ಕೈಗೊಂಡಿದ್ದಾರೆ.
The world’s largest mink producer, Denmark, says it plans to cull more than 15 million of the animals, due to fears that a Covid-19 mutation moving from mink to humans could jeopardise future vaccines.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm