ಬ್ರೇಕಿಂಗ್ ನ್ಯೂಸ್
25-11-23 01:16 pm HK News Desk ದೇಶ - ವಿದೇಶ
ಲಕ್ನೋ, ನ.25: ಹಲಾಲ್ ಪ್ರಮಾಣಪತ್ರ, ಏಜನ್ಸಿಗಳಿಗೆ ಮತ್ತು ಅಂತಹ ಆಹಾರ ಪದಾರ್ಥಗಳಿಗೆ ಉತ್ತರ ಪ್ರದೇಶ ಸರ್ಕಾರ ನಿಷೇಧ ವಿಧಿಸಿದ ಕ್ರಮವನ್ನು ಮುಸ್ಲಿಂ ಧಾರ್ಮಿಕ ಮುಖಂಡರು ಸ್ವಾಗತಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಬರೇಲಿ ನಗರದಲ್ಲಿ ಇರುವ ಆಲಾ ಹಜರತ್ ದರ್ಗಾದ ಮೌಲಾನಾ ಶಹಾಬುದ್ದೀನ್ ಉತ್ತರ ಪ್ರದೇಶ ಸರ್ಕಾರದ ನಿಷೇಧ ಕ್ರಮ ಸರಿ ಎಂದಿದ್ದಾರೆ. ಆಲಾ ಹಜರತ್ ದರ್ಗಾಗೆ ಉತ್ತರ ಪ್ರದೇಶ ಮಾತ್ರವಲ್ಲ, ದೇಶಾದ್ಯಂತ ಅಪಾರ ಸಂಖ್ಯೆಯ ಅನುಯಾಯಿಗಳಿದ್ದು ದರ್ಗಾದ ಮುಖ್ಯಸ್ಥರೇ ಸರ್ಕಾರದ ಕ್ರಮವನ್ನು ಸಮರ್ಥಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಹಲಾಲ್ ಪ್ರಮಾಣ ಪತ್ರದ ಮುದ್ರೆಯೊಂದಿಗೆ ಆಹಾರ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟದ ಮೇಲೆ ನಿರ್ಬಂಧ ವಿಧಿಸಿ ಆದೇಶ ಮಾಡಿದೆ. ಸರಕಾರದ ಕ್ರಮವನ್ನು ಮೌಲಾನಾ ಅವರು ಸಮರ್ಥಿಸಿಕೊಂಡಿದ್ದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಹಲಾಲ್ ಪ್ರಮಾಣ ಪತ್ರವು ಷರಿಯಾ ನಿಯಮಾವಳಿಗಳನ್ನು ಪೂರ್ಣಗೊಳಿಸೋದಿಲ್ಲ ಎಂದು ಮೌಲಾನಾ ಶಹಾಬುದ್ದೀನ್ ಅವರು ಹೇಳಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಮೌಲಾನಾ ಅವರು, ಹಲಾಲ್ ಪ್ರಮಾಣ ಪತ್ರ ಅನ್ನೋದು ಕೇವಲ ಮಾರುಕಟ್ಟೆ ತಂತ್ರಗಾರಿಕೆ. ಹಲಾಲ್ ಪ್ರಮಾಣ ಪತ್ರ ಮುಂದಿಟ್ಟು ತಮ್ಮ ಉತ್ಪನ್ನಗಳ ಮಾರಾಟ ಹೆಚ್ಚಿಸಿಕೊಳ್ಳುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಲಾಲ್ ಪ್ರಮಾಣ ಪತ್ರವನ್ನು ಉತ್ಪನ್ನಗಳ ಮೇಲೆ ಮುದ್ರಿಸಿ ದಂಧೆಕೋರರು ಹಣ ಮಾಡುತ್ತಿದ್ದಾರೆ. ಈ ತಂತ್ರಗಾರಿಕೆ ಮೂಲಕ ಅಲ್ಪಸಂಖ್ಯಾತರ ಭಾವನೆಗಳ ಜೊತೆ ಆಟವಾಡಿ ಅವರಿಗೆ ಮೋಸ ಮಾಡಲಾಗುತ್ತಿದೆ ಎಂದು ಮೌಲಾನಾ ಶಹಾಬುದ್ದೀನ್ ಮುಸ್ಲಿಮರಿಗೆ ಎಚ್ಚರಿಕೆ ನೀಡಿದ್ದಾರೆ. ಹಲಾಲ್ ಪ್ರಮಾಣ ಪತ್ರವನ್ನು ಸಾಮಾನ್ಯವಾಗಿ ಮಾಂಸಹಾರ ಉತ್ಪನ್ನಗಳಿಗೆ ನೀಡಲಾಗುತ್ತದೆ. ಆದರೆ ಕೆಲವರು ಹಲಾಲ್ ಚಿಹ್ನೆಯನ್ನು ಜೇನು ತುಪ್ಪ, ಬಿಸ್ಕೇಟ್, ತರಕಾರಿ ಹಾಗೂ ಇನ್ನಿತರ ವಸ್ತುಗಳ ಮೇಲೂ ಮುದ್ರಿಸುತ್ತಿದ್ದಾರೆ. ಇದು ಖಡಾ ಖಂಡಿತವಾಗಿ ತಪ್ಪು ಎಂದು ಮೌಲಾನಾ ಅವರು ಹೇಳಿದ್ದಾರೆ.
Maulana Shahabuddin welcomed Yogi Adityanath government’s decision to ban halal products in Uttar Pradesh. Maulana Shahabuddin is the head priest of Ala Hazrat Dargah in Bareilly, UP. Maulana Shahabuddin says that Halar certification is a business trick and it is not in compliance with Sharia law.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:33 pm
HK News Desk
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
09-05-25 03:24 pm
Mangalore Correspondent
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm