ಬ್ರೇಕಿಂಗ್ ನ್ಯೂಸ್
06-12-23 06:27 pm HK News Desk ದೇಶ - ವಿದೇಶ
ನವದೆಹಲಿ, ಡಿ.6: ಪಾಕಿಸ್ತಾನದಲ್ಲಿ ಮತ್ತೊಬ್ಬ ನಟೋರಿಯಸ್ ಉಗ್ರನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಸಾಯಿಸಿದ್ದಾರೆ. 2015ರ ಜಮ್ಮು ಕಾಶ್ಮೀರದ ಉಧಂಪುರ್ ದಾಳಿಯ ರೂವಾರಿ, ಲಷ್ಕರ್ ಇ- ತೈಬಾ ಸಂಘಟನೆಯ ಉಗ್ರ ಹನ್ಝ್ಲಾ ಅದ್ನಾನ್ ಎಂಬಾತ ಅಪರಿಚಿತರ ಗುಂಡೇಟು ಬಿದ್ದು ಕೊಲೆಯಾಗಿದ್ದಾನೆ.
ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ನಿಕಟವರ್ತಿಯಾಗಿದ್ದ ಅದ್ನಾನ್ ಡಿ.2 ಮತ್ತು 3ರ ನಡುವಿನ ರಾತ್ರಿ ವೇಳೆ ತನ್ನ ಮನೆಯಲ್ಲಿದ್ದಾಗಲೇ ಬಂದೂಕುಧಾರಿಗಳ ಗುಂಡೇಟಿಗೆ ಒಳಗಾಗಿದ್ದಾನೆ, ನಾಲ್ಕು ಗುಂಡುಗಳು ಆತನ ದೇಹ ಸೇರಿದ್ದವು. ಗಂಭೀರ ಸ್ಥಿತಿಯಲ್ಲಿದ್ದ ಹನ್ಝ್ಲಾನನ್ನು ಪಾಕಿಸ್ತಾನದ ಮಿಲಿಟರಿ ರಹಸ್ಯವಾಗಿ ಆಸ್ಪತ್ರೆಗೆ ಸೇರಿಸಿತ್ತು. ಡಿ.5ರಂದು ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಇತ್ತೀಚೆಗೆ ರಾವಲ್ಪಿಂಡಿಯಿಂದ ಕರಾಚಿಯನ್ನು ಕಾರಸ್ಥಾನ ಮಾಡಿಕೊಂಡು ಲಷ್ಕರ್ ಉಗ್ರವಾದಿ ಕಾರ್ಯಾಚರಣೆಯನ್ನು ಅದ್ನಾನ್ ಮುಂದುವರಿಸಿದ್ದ.

2015ರ ಉಧಂಪುರ್ ದಾಳಿಯಲ್ಲಿ ಇಬ್ಬರು ಬಿಎಸ್ಎಫ್ ಯೋಧರು ಮೃತಪಟ್ಟು 12 ಮಂದಿ ಯೋಧರು ಗಾಯಗೊಂಡಿದ್ದರು. 2016ರಲ್ಲಿ ಜಮ್ಮು ಕಾಶ್ಮೀರದ ಪಾಂಪೋರ್ ಏರಿಯಾದಲ್ಲಿ ಲಷ್ಕರ್ ಉಗ್ರರ ದಾಳಿಗೆ ಎಂಟು ಸಿಆರ್ ಪಿಎಫ್ ಯೋಧರು ಬಲಿಯಾಗಿದ್ದರು. ಇವರೆಡೂ ಕೃತ್ಯದ ಹಿಂದೆ ಉಗ್ರ ಹನ್ಝ್ಲಾ ಅದ್ನಾನ್ ಮಾಸ್ಟರ್ ಮೈಂಡ್ ಆಗಿದ್ದ ಅನ್ನುವುದನ್ನು ಎನ್ಐಎ ಅಧಿಕಾರಿಗಳ ತನಿಖೆಯಲ್ಲಿ ಪತ್ತೆ ಮಾಡಿದ್ದರು. ಡಿ.2ರಂದು ಐಎಸ್ಐ ಪರವಾಗಿ ಕೆಲಸ ಮಾಡುತ್ತಿದ್ದ ಖಲೀಸ್ತಾನಿ ಉಗ್ರನೊಬ್ಬ ಕರಾಚಿಯಲ್ಲಿ ಅಪರಿಚಿತರ ಗುಂಡಿಗೆ ಬಲಿಯಾಗಿದ್ದ.

ಮತ್ತೊಬ್ಬ ಉಗ್ರವಾದಿಗೆ ಗುಂಡೇಟು
ಅಹ್ಲೇ ಸುನ್ನತ್ ವಾಲೇ ಜಮಾತ್ ಎನ್ನುವ ನಿಷೇಧಿತ ಸಂಘಟನೆಯ ಸ್ಥಳೀಯ ನಾಯಕನಾಗಿದ್ದ ಬಿಲಾಲ್ ಮುರ್ಶಿದ್ ಎಂಬಾತನಿಗೆ ಡಿ.6ರಂದು ಬೈಕಿನಲ್ಲಿ ಬಂದಿದ್ದ ಇಬ್ಬರು ಗುಂಡು ಹಾರಿಸಿದ್ದಾರೆ. ಬಿಲಾಲ್ ಮುರ್ಶಿದ್ ದೇಹಕ್ಕೆ ಐದಾರು ಗುಂಡುಗಳು ಹೊಕ್ಕಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ. ಬಂದೂಕುಧಾರಿಗಳು ಬೈಕಿನಲ್ಲಿ ಬಂದು ಬಿಲಾಲನ್ನೇ ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆಂದು ಪತ್ರಿಕೆ ಬರೆದಿದೆ.
Adnan Ahmed, considered to be a close aide of Lashkar-e-Taiba (LeT) founder and 26/11 Mumbai terror attacks mastermind Hafiz Saeed, was shot dead in Pakistan’s Karachi city.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm