ಬ್ರೇಕಿಂಗ್ ನ್ಯೂಸ್
15-02-24 11:27 am HK News Desk ದೇಶ - ವಿದೇಶ
ಅಬುಧಾಬಿ, ಫೆ.15: ಏಶ್ಯಾದ ಅತಿದೊಡ್ಡ ಮತ್ತು ವಿಶ್ವದ ಮೂರನೇ ಅತಿದೊಡ್ಡ ಹಿಂದು ದೇಗುಲ ಎಂದೆನಿಸಿರುವ, ಅರಬ್ ಸಂಯುಕ್ತ ಸಂಸ್ಥಾನದ(ಯುಎಇ) ಅಬುಧಾಬಿಯಲ್ಲಿ ನಿರ್ಮಾಣಗೊಂಡ ಮೊಟ್ಟಮೊದಲ ಬೃಹತ್ ಹಿಂದು ಮಂದಿರ, ಸ್ವಾಮಿ ನಾರಾಯಣ ದೇಗುಲವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ.
ಭಾರತದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆಗೊಂಡ ಕೆಲವೇ ದಿನಗಳಲ್ಲಿ ಜಗತ್ತಿನ ಮತ್ತೊಂದು ಭವ್ಯ ದೇಗುಲವನ್ನು ಸ್ವತಃ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿರುವುದು ವಿಶೇಷ. ಬೋಚಾಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ಸಂಸ್ಥಾ ಎಂದು ಕರೆಯಲ್ಪಡುವ ಸಂಸ್ಥೆ (ಬಿಎಪಿಎಸ್) ಈ ಮಂದಿರವನ್ನು ಸ್ಥಾಪಿಸಿದ್ದು, ಸುಮಾರು 27 ಎಕರೆ ವ್ಯಾಪ್ತಿಯನ್ನು ಹೊಂದಿದೆ. ದೇಗುಲ ಸಂಕೀರ್ಣವೇ 14 ಎಕರೆಯಲ್ಲಿದ್ದರೆ, ಇನ್ನಿತರ ವಸತಿ, ಸಭಾಂಗಣ ಕಟ್ಟಡಗಳು 14 ಎಕರೆಯಲ್ಲಿದೆ. ಮದ್ಯಪ್ರಾಚ್ಯದಲ್ಲಿ ಕಲ್ಲುಗಳಿಂದ ನಿರ್ಮಿಸಿದ ಮೊದಲ ಹಿಂದು ಮಂದಿರ ಇದೆನಿಸಿದೆ.
ಅಬುಧಾಬಿ- ದುಬೈ ಹೆದ್ದಾರಿಯ ರಹ್ಬಾ ಪ್ರದೇಶದ ಅಬು ಮುರೇಖಾದಲ್ಲಿರುವ ಮಂದಿರವು ಹಿಂದು- ಮುಸ್ಲಿಂ ಭಾವೈಕ್ಯತೆ, ಸಾಮರಸ್ಯದ ಕೊಂಡಿಯಾಗಿ ಜಗತ್ತಿಗೆ ಕಾಣಿಸಿಕೊಳ್ಳಲಿದೆ. 2019ರಲ್ಲಿ ಮಂದಿರ ನಿರ್ಮಾಣದ ಕೆಲಸ ಆರಂಭಗೊಂಡಿದ್ದು 2024ರಲ್ಲಿ ದೇಗುಲ ಸಂಕೀರ್ಣದ ಕಾಮಗಾರಿ ಪೂರ್ಣಗೊಂಡಿದೆ. ಏಕಕಾಲದಲ್ಲಿ ಹತ್ತು ಸಾವಿರ ಜನರು ದೇಗುಲ ದರ್ಶನ ಮಾಡುವಷ್ಟು ವ್ಯವಸ್ಥೆ ಇದೆ. ದೇವಸ್ಥಾನದಲ್ಲಿ ಸ್ವಾಮಿ ನಾರಾಯಣ, ಪುರುಷೋತ್ತಮ, ರಾಧಾಕೃಷ್ಣ, ರಾಮಸೀತೆ, ಲಕ್ಷ್ಮಣ, ಹನುಮಂತ, ಶಿವ ಪಾರ್ವತಿ, ಗಣೇಶ ಕಾರ್ತಿಕೇಯ, ಪದ್ಮಾವತಿ ವೆಂಕಟೇಶ್ವರ, ಜಗನ್ನಾಥ, ಅಯ್ಯಪ್ಪ ಸ್ವಾಮಿ ಸೇರಿದಂತೆ ಭಾರತದಲ್ಲಿ ಪೂಜೆಗೊಳ್ಳುವ ಪ್ರಮುಖ 27 ದೇವರುಗಳ ಮೂರ್ತಿಗಳನ್ನು ಪ್ರತಿಷ್ಠೆ ಮಾಡಲಾಗಿದೆ. ಆಮೂಲಕ ಅರಬ್ಬರ ನಾಡಿನಲ್ಲಿ ಭಾರತೀಯ ಪ್ರಣೀತ ಹಿಂದು ದೈವೀ ಪರಂಪರೆಗಳಿಗೆ ಪೂಜಿಸಲು ಆಸ್ಪದ ಸಿಕ್ಕಂತಾಗಿದೆ.
ಇದಲ್ಲದೆ, ದೇಗುಲ ವ್ಯಾಪ್ತಿಯಲ್ಲಿ ಏಳು ಗೋಪುರಗಳನ್ನು ನಿರ್ಮಿಸಿದ್ದು, ಅರು ಯುಎಇ ರಾಜವಂಶಸ್ಥರ ಮನೆತನಗಳನ್ನು ಬಿಂಬಿಸಲಿದೆ ಎನ್ನಲಾಗುತ್ತಿದೆ. ಹಿಂದು ವಾಸ್ತುಶಿಲ್ಪ ಮತ್ತು ಅರಬ್ ಶೈಲಿ ಎರಡೂ ಮೇಳೈಸಿದ್ದು ಒಳಾಂಗಣದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳು ಸೇರಿ ರಾಮಾಯಣ, ಮಹಾಭಾರತ, ಪುರಾಣ ಗ್ರಂಥಗಳ ಕಥೆಗಳನ್ನು ಕೆತ್ತನೆ ಮೂಲಕ ತೋರಿಸಿದ್ದಾರೆ. ವಿಶೇಷ ಅಂದ್ರೆ, ದೇಗುಲ ನಿರ್ಮಾಣದಲ್ಲಿ ಯಾವುದೇ ಕಡೆ ಕಬ್ಬಿಣ ಅಥವಾ ಸಿಮೆಂಟ್ ಬಳಸಿಕೊಂಡಿಲ್ಲ. ಬದಲಿಗೆ, ಅಮೃತಶಿಲೆ, ಇಟ್ಟಿಗೆಯನ್ನಷ್ಟೇ ಬಳಸಿದ್ದಾರೆ. ಹಳೆಕಾಲದಲ್ಲಿ ಭಾರತದಲ್ಲಿ ನಿರ್ಮಿಸಲಾಗುತ್ತಿದ್ದ ದೇಗುಲ ರಚನೆಯ ಪರಿಕಲ್ಪನೆ ಆಧಾರವಾಗಿಟ್ಟು ಈ ದೇವಸ್ಥಾನವನ್ನು ಅಪೂರ್ವ ರೀತಿಯಲ್ಲಿ ನಿರ್ಮಿಸಲಾಗಿದೆ.
With Prime Minister Narendra Modi inaugurating the first Hindu temple in Abu Dhabi on Wednesday, India joined the United Arab Emirates (UAE) to call the shrine a celebration of the friendship between the two nations. “This temple will be a symbol of unity and harmony,” Modi said after inaugurating the temple built by Bochasanwasi Shri Akshar Purushottam Swaminarayan Sanstha (BAPS) headquartered in Gujarat.
03-05-24 05:15 pm
HK News Desk
Revanna kidnap, rape, Prajwal: ಮಾಜಿ ಸಚಿವ ಎಚ್....
03-05-24 04:29 pm
Bengalore rain, Karnataka: ಬಿಸಿಲ ಝಳಕ್ಕೆ ‘ಬೆಂದ...
03-05-24 04:24 pm
Madhu Bangarappa, Rahul Gandhi: ರಾಹುಲ್ ಗಾಂಧಿ...
03-05-24 03:58 pm
Prajwal Revanna, Rape case: ಪ್ರಜ್ವಲ್ ರೇವಣ್ಣ ವ...
03-05-24 10:34 am
03-05-24 10:28 am
HK News Desk
Dubai Rain: ದುಬೈನಲ್ಲಿ ಮತ್ತೆ ಭಾರಿ ಮಳೆ ; ಶಾಲೆ,...
03-05-24 10:20 am
Narendra Modi, Rahul Gandhi: ರಾಹುಲ್ ಬಗ್ಗೆ ಪಾಕ...
02-05-24 10:07 pm
Hindu Marriage, Supreme court: ಹಿಂದು ವಿವಾಹ ಎನ...
02-05-24 09:25 pm
Senator Danesh Kumar Palyani ; ಪಾಕಿಸ್ತಾನದಲ್ಲಿ...
01-05-24 10:25 pm
03-05-24 06:31 pm
Mangalore Correspondent
Lakshadweep to Mangalore Speed boat ship: ಲಕ್...
02-05-24 07:52 pm
Mangalore Yesuraj, AEO, Kukke Subrahmanya Tem...
02-05-24 02:24 pm
Mangalore News, Konaje, Baby: ಐದು ತಿಂಗಳ ಹಸುಗೂ...
01-05-24 08:55 pm
Hot sun heat, Mangalore temperature; ಕರಾವಳಿಯಲ...
01-05-24 11:43 am
03-05-24 03:21 pm
Bangalore Correspondent
Mumbai crime, Minor pregnant: ಮದುವೆ ಮುನ್ನವೇ 2...
03-05-24 10:24 am
Mangalore Crime, Drugs Arrest; ಕೋಟೆಕಾರ್ ಬೀರಿಯ...
01-05-24 10:18 pm
Mangalore crime, Court: ಮೆಲ್ಕಾರ್ ಬಳಿ ಕೋಮು ದ್ವ...
01-05-24 06:44 pm
Cyber Fraud, Online Crime: ಹೀಗೂ ಮೋಸ ಮಾಡ್ತಾರೆ,...
30-04-24 10:16 pm