ಬ್ರೇಕಿಂಗ್ ನ್ಯೂಸ್
12-04-24 08:16 pm HK NEWS ದೇಶ - ವಿದೇಶ
ನವದೆಹಲಿ, ಎ.12: ಇಸ್ರೇಲ್ ಮೇಲೆ ಇನ್ನೆರಡು ದಿನದಲ್ಲಿ ಇರಾನ್ ಭಾರೀ ದೊಡ್ಡ ಪ್ರಮಾಣದಲ್ಲಿ ವೈಮಾನಿಕ ದಾಳಿ ನಡೆಸಲು ಸಜ್ಜಾಗಿದೆ ಎಂದು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಇದರ ಬೆನ್ನಲ್ಲೆ ಅಮೆರಿಕ, ಭಾರತ ಸೇರಿದಂತೆ ತನ್ನ ಪ್ರಜೆಗಳನ್ನು ಇಸ್ರೇಲ್ ಮತ್ತು ಇರಾನ್ ದೇಶಕ್ಕೆ ತೆರಳದಂತೆ ಸೂಚನೆ ನೀಡಿದೆ.
ಇರಾನ್ ದೇಶದ ಸುಪ್ರೀಂ ನಾಯಕ ಅಯಾತೊಲ್ಲಾ ಅಲಿ ಖೊಮೇನಿ ನೇರ ಉಸ್ತುವಾರಿಯಲ್ಲೇ ಆ ದೇಶ ಯುದ್ಧಕ್ಕೆ ರೆಡಿಯಾಗುತ್ತಿದೆ ಎನ್ನಲಾಗುತ್ತಿದ್ದು, ಜಾಗತಿಕ ರಾಷ್ಟ್ರಗಳ ಒತ್ತಡ. ಅದರಿಂದಾಗುವ ಅಪಾಯದ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಅಯಾತೊಲ್ಲಾ ಖೊಮೇನಿ ಅವರ ಸಲಹೆಗಾರರ ಆಪ್ತ ವ್ಯಕ್ತಿಯೊಬ್ಬರು ಹೇಳಿದ್ದಾರೆ ಎಂಬ ಮಾಹಿತಿ ಆಧರಿಸಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಇಸ್ರೇಲ್, ಗಾಜಾ ಪಟ್ಟಿ ಮತ್ತು ಹಮಾಸ್ ಉಗ್ರರ ಮೇಲೆ ನಿರಂತರ ದಾಳಿ ನಡೆಸುತ್ತಿರುವುದರಿಂದ ಇರಾನ್ ದೇಶವು ಪದೇ ಪದೇ ಎಚ್ಚರಿಕೆ ಕೊಡುತ್ತಲೇ ಬಂದಿತ್ತು. ಇತ್ತೀಚೆಗೆ ಇರಾನ್ ದೇಶದ ವ್ಯಾಪ್ತಿಯ ಸಿರಿಯಾ ಭಾಗದ ಡಮಾಸ್ಕಸ್ ನಗರದ ಕಾನ್ಸುಲೇಟ್ ಒಂದಕ್ಕೆ ದಾಳಿ ನಡೆಸಲಾಗಿತ್ತು. ಅದರಲ್ಲಿ ಇರಾನ್ ದೇಶದ ಪ್ರಮುಖ ನಾಯಕ ಮತ್ತು ಆರು ಮಂದಿ ಮಿಲಿಟರಿ ವ್ಯಕ್ತಿಗಳು ಸಾವನ್ನಪ್ಪಿದ್ದರು.
ಡಮಾಸ್ಕಸ್ ಮೇಲಿನ ದಾಳಿಯನ್ನು ಇಸ್ರೇಲ್ ಮಾಡಿದೆ ಎಂದು ಇರಾನ್ ಆರೋಪ ಮಾಡಿತ್ತು. ಆದರೆ ಇಸ್ರೇಲ್ ಆ ದಾಳಿಯನ್ನು ನಿರಾಕರಿಸಿದ್ದೂ ಇಲ್ಲ, ಒಪ್ಪಿಕೊಂಡಿದ್ದೂ ಇಲ್ಲ. ಹೀಗಾಗಿ ಇಸ್ರೇಲ್ ಆ ದಾಳಿಯ ಹಿಂದೆ ಇದೆ ಎನ್ನುವ ಮಾತು ಮುಸ್ಲಿಂ ರಾಷ್ಟ್ರಗಳಿಂದ ಕೇಳಿಬಂದಿತ್ತು. ಇಸ್ರೇಲಿಗೆ ತಕ್ಕ ಶಿಕ್ಷೆ ಆಗಲೇಬೇಕು. ಅದು ಆಗಿಯೇ ತೀರುತ್ತೆ ಎಂದು ಡಮಾಸ್ಕಸ್ ದಾಳಿಯ ಬಳಿಕ ಇರಾನ್ ನಾಯಕ ಅಯೊತೊಲ್ಲಾ ಖೊಮೇನಿ ಹೇಳಿದ್ದರು.
ಇದೇ ವೇಳೆ, ಬಿಬಿಸಿ ಸಂಸ್ಥೆಯ ಯುಎಸ್ ಪಾಲುದಾರ ಸಿಬಿಎಸ್ ನ್ಯೂಸ್, ಇರಾನ್ ದಾಳಿ ಬಹುತೇಕ ಶುಕ್ರವಾರದ ಹೊತ್ತಿಗೆ ಆಗುವ ಸಾಧ್ಯತೆ ಇದೆಯೆಂದು ವರದಿ ಮಾಡಿದೆ. ನೂರಕ್ಕೂ ಹೆಚ್ಚು ಡ್ರೋಣ್, ಡಜನ್ ಗೂ ಹೆಚ್ಚು ಕ್ರೂಸ್ ಮಿಸೈಲ್ ಮತ್ತು ಬ್ಯಾಲಿಸ್ಟಿಕ್ ಮಿಸೈಲ್ ಇಸ್ರೇಲ್ ಮೇಲೆ ಟಾರ್ಗೆಟ್ ಮಾಡಲಿದೆ ಎಂದು ಅಮೆರಿಕದ ಇಬ್ಬರು ಸೇನಾಧಿಕಾರಿಗಳ ಹೇಳಿಕೆ ಅಧರಿಸಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
Iran is likely to launch a direct attack on Israel within the next 48 hours and the Jewish nation is preparing for it, according to a report. The Wall Street Journal reported on Friday, citing a person who had been briefed by the Iranian leadership.
12-09-25 03:04 pm
HK News Desk
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 05:34 pm
Mangalore Correspondent
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm