ಬ್ರೇಕಿಂಗ್ ನ್ಯೂಸ್
13-04-24 09:17 pm HK NEWS ದೇಶ - ವಿದೇಶ
ನವದೆಹಲಿ, ಎ.13: ಪಾಕಿಸ್ಥಾನ- ಅಫ್ಘಾನಿಸ್ತಾನ ಗಡಿಭಾಗದ ಖೈಬರ್ ಪಂಕ್ತುಖ್ವಾ ಪ್ರಾಂತ್ಯದಲ್ಲಿದ್ದ ಅತಿ ಪುರಾತನ ಬೃಹತ್ ಹಿಂದು ದೇವಾಲಯವನ್ನು ನೆಲಸಮ ಮಾಡಲಾಗಿದೆ.
ಕೇದಾರನಾಥ ದೇವಾಲಯ ಮಾದರಿಯ ಗೋಪುರವುಳ್ಳ ಬೃಹತ್ ದೇವಸ್ಥಾನ 1947ರಿಂದಲೇ ಪಾಳು ಬಿದ್ದ ಸ್ಥಿತಿಯಲ್ಲಿತ್ತು. ಸ್ವಾತಂತ್ರ್ಯ ಕಾಲದಲ್ಲಿ ಭಾರತ- ಪಾಕಿಸ್ಥಾನ ವಿಂಗಡಣೆಯಾದಾಗ ಎರಡೂ ರಾಷ್ಟ್ರಗಳಿಂದ ಬಹಳಷ್ಟು ಹಿಂದು- ಮುಸ್ಲಿಮರು ಅತ್ತಿತ್ತ ವಲಸೆ ಹೋಗಿದ್ದರು. ಈ ದೇವಸ್ಥಾನಕ್ಕೆ ಸಂಬಂಧಪಟ್ಟ ಹಿಂದುಗಳೂ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದರು. ದೇವಸ್ಥಾನ ಮತ್ತು ಗೋಪುರ ಮಾತ್ರ ಹಾಗೆಯೇ ಉಳಿದುಕೊಂಡಿತ್ತು. ಸ್ಥಳೀಯ ಕಿಡಿಗೇಡಿಗಳು ಗೋಪುರದ ಇಟ್ಟಿಗೆ, ಕಲ್ಲುಗಳನ್ನು ಒಂದೊಂದಾಗಿಯೇ ಒಡೆದು ವಿಘ್ನಗೊಳಿಸಿದ್ದರೂ ಬೃಹತ್ ದೇವಸ್ಥಾನದ ಮಾದರಿ ಉಳಿದಿತ್ತು.
ಲಾಂಡಿ ಕೋಟಾಲ್ ಬಾಝಾರ್ ಎನ್ನುವ ಪ್ರದೇಶದಲ್ಲಿದ್ದ ದೇವಸ್ಥಾನವನ್ನು ಇದೀಗ ಪೂರ್ತಿ ನೆಲಸಮ ಮಾಡಲಾಗಿದ್ದು, ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸ್ಥಳೀಯರು ಮುಂದಾಗಿದ್ದಾರೆ. 1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನೆಲಸಮ ಮಾಡಿದ್ದಕ್ಕೆ ಪ್ರತಿಯಾಗಿ ಈ ದೇವಸ್ಥಾನವನ್ನೂ ಕೆಡವಿ ಹಾಕಲು ಕಿಡಿಗೇಡಿಗಳು ಮುಂದಾಗಿದ್ದರು. ಕಲ್ಲಿನ ಬೃಹತ್ ಶಿಲಾಮಂದಿರ ಆಗಿದ್ದರಿಂದ ಅರೆಬರೆಯಾಗಿ ದೇವಸ್ಥಾನದ ಗೋಪುರ ಉಳಿದುಕೊಂಡಿತ್ತು. ಸ್ಥಳೀಯರು ಖೈಬರ್ ಟೆಂಪಲ್ ಎಂದೇ ಉಲ್ಲೇಖ ಮಾಡುತ್ತಿದ್ದರು.
ಪ್ರಾಚ್ಯವಸ್ತು ಇಲಾಖೆಗೆ ಸಂಬಂಧಪಟ್ಟ ಸ್ಮಾರಕಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ಪಾಕಿಸ್ತಾನದಲ್ಲಿಯೂ ಕಾನೂನು ಇದ್ದರೂ ಅದನ್ನು ಪಾಲನೆ ಮಾಡುತ್ತಿಲ್ಲ ಎಂದು ಪಾಕಿಸ್ತಾನ್ ಹಿಂದು ಮಂದಿರ ಮ್ಯಾನೇಜ್ಮೆಂಟಿನ ಹಾರೂನ್ ಸಾರಬ್ದಿಯಾಲ್ ಹೇಳಿದ್ದಾರೆ. ಸ್ಥಳೀಯ ಜಿಲ್ಲಾಡಳಿತ ದಾಖಲೆಯಲ್ಲಿ ಇಂದು ಮಂದಿರವೆಂದು ಉಲ್ಲೇಖ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪಾಕಿಸ್ತಾನದ ಡಾನ್ ಪತ್ರಿಕೆ ಮತ್ತು ಭಾರತದ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
A historical Hindu temple near the Pakistan-Afghanistan border has been demolished and construction for a commercial complex has started at the site in the Khyber Pakhtunkhwa province that was closed since 1947 when the original occupants migrated to India.
05-05-24 10:54 pm
HK News Desk
Sex Scandal, H D Revanna: ಷಡ್ಯಂತ್ರ ಮಾಡಿ ನನ್ನನ...
05-05-24 09:54 pm
Blue corner notice, Prajwal Revanna: ಪ್ರಜ್ವಲ್...
05-05-24 08:46 pm
Prajwal Revannas, Sexual Assault Video, Harsh...
05-05-24 04:17 pm
Annamalai, Prajwal Revanna: ಎಸ್ಐಟಿ ಮೊದಲು ಈ ವಿ...
04-05-24 10:13 pm
05-05-24 11:51 am
HK News Desk
Priyanka Gandhi, Narendra modi, Rahul Gandi:...
04-05-24 03:41 pm
Puri Lok Sabha: ಸೂರತ್, ಇಂದೋರ್ ಬಳಿಕ ಒಡಿಶಾದ ಪುರ...
04-05-24 03:27 pm
ಒಂದೇ ರೀತಿಯ ಹೆಸರಿನ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ...
04-05-24 01:50 pm
C V Ananda Bose, West Bengal governor: ಪಶ್ಚಿಮ...
03-05-24 10:58 pm
05-05-24 08:53 pm
Mangalore Correspondent
Moodabidri Alvas college, Suicide: ಮೂಡುಬಿದ್ರೆ...
05-05-24 06:43 pm
Mangalore accident, Thokottu: ನಿಯಂತ್ರಣ ತಪ್ಪಿದ...
05-05-24 01:26 pm
Highest temperature in Mangalore: ಕರಾವಳಿಯ ಉಪ್...
04-05-24 09:50 pm
Puttur news, Ramchandra officer: ವರ್ಗಾವಣೆ ಆದೇ...
04-05-24 08:45 pm
05-05-24 02:44 pm
HK News Desk
K P K Jeyakumar Dhanasingh: ತಿರುನಲ್ವೇಲಿ ಜಿಲ್ಲ...
04-05-24 11:03 pm
Hubballi Crime Rape Minor, Arrest; ಹುಬ್ಬಳ್ಳಿ...
04-05-24 12:23 pm
Mangalore Fake CBI Call, Crime, Online fraud:...
03-05-24 09:57 pm
House fire, Lover: ಮೂವರು ಮಕ್ಕಳ ತಾಯಿಯನ್ನ ಮದುವ...
03-05-24 03:21 pm