ಬ್ರೇಕಿಂಗ್ ನ್ಯೂಸ್
17-07-24 10:31 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 17: ಮುಸ್ಲಿಮರಲ್ಲಿ ಪುರುಷರದ್ದೇ ಅಧಿಪತ್ಯ. ಪತ್ನಿಯ ಮೇಲೆ ತಲಾಖ್ ಹೇಳಿಯೂ ಸಂಬಂಧವನ್ನು ಕಡಿದುಕೊಳ್ಳಬಹುದು. ಹಿಂದೆಲ್ಲಾ ತ್ರಿಬಲ್ ತಲಾಖ್ ಎನ್ನುವುದು ಮುಸ್ಲಿಮ್ ಮಹಿಳೆಯರ ಮೇಲಿನ ಶೋಷಣೆಯ ಅಸ್ತ್ರವೇ ಆಗಿತ್ತು. ಇದೀಗ ದುಬೈ ರಾಜನ ಮಗಳು, ಅರ್ಥಾತ್ ರಾಜಕುಮಾರಿ ತನ್ನ ಗಂಡ ಬೇರೊಬ್ಬಾಕೆಯನ್ನು ಕಟ್ಟಿಕೊಂಡಿದ್ದಾಳೆಂದು ತಿಳಿಯುತ್ತಲೇ ಸೋಶಿಯಲ್ ಮೀಡಿಯಾದಲ್ಲೇ ಗಂಡನಿಗೆ ತ್ರಿಬಲ್ ತಲಾಖ್ ಹೇಳಿ ಸುದ್ದಿಯಾಗಿದ್ದಾರೆ.
ದುಬೈ ರಾಜ ಮಹಮ್ಮದ್ ರಶೀದ್ ಅಲ್ ಮಕ್ತುಮ್ ಅವರ ಪುತ್ರಿಯಾಗಿರುವ ಶೈಖಾ ಮಹ್ರಾ ಅಲ್ ಮಕ್ತುಮ್ ಅವರು ತನ್ನ ಗಂಡ ಮಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮಕ್ತುಮ್ ವಿರುದ್ಧ ಇನ್ ಸ್ಟಾ ಗ್ರಾಮ್ ಪೇಜಿನಲ್ಲೇ ಡೈವರ್ಸ್ ಮಾಡಿರುವುದನ್ನು ಹೇಳಿಕೊಂಡಿದ್ದಾರೆ. ಜುಲೈ 16ರಂದು ಆಕೆ ಈ ಪೋಸ್ಟ್ ಹಾಕಿದ್ದು ಬರೆದಿರುವ ರೀತಿ ಹೀಗಿದೆ. ಪ್ರೀತಿಯ ಪತಿಯೇ, ನೀವು ಬೇರೊಬ್ಬ ಸಂಗಾತಿಯನ್ನು ಕಟ್ಟಿಕೊಂಡಿದ್ದೀರಾ.. ಹೀಗಾಗಿ ನಾನು ಈ ಮೂಲಕ ಸಂಬಂಧ ಕಡಿಕೊಳ್ಳುವ ವಿಚ್ಛೇದನ ಘೋಷಣೆ ಮಾಡುತ್ತಿದ್ದೇನೆ. ಡೈವರ್ಸ್ ಮಾಡುತ್ತೇನೆ, ಡೈವರ್ಸ್ ಮಾಡುತ್ತೇನೆ, ಡೈವರ್ಸ್ ಮಾಡುತ್ತೇನೆ. ನಿಮ್ಮ ಹಳೆ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಪುರುಷರು ತಲಾಖ್ ಹೇಳಿದ ರೀತಿಯಲ್ಲೇ ಮೂರು ಬಾರಿ ಡೈವರ್ಸ್ ಘೋಷಣೆ ಮಾಡಿಕೊಂಡು ಪೋಸ್ಟ್ ಮಾಡಿದ್ದಾರೆ.


ಇಸ್ಲಾಮಿಕ್ ಪದ್ಧತಿಯಲ್ಲಿ ಪುರುಷನು ತನ್ನ ಪತ್ನಿಗೆ ಮೂರು ಬಾರಿ ತಲಾಖ್ ಘೋಷಣೆ ಮಾಡಿ, ಸಂಬಂಧವನ್ನೇ ಕಡಿದುಕೊಳ್ಳಲು ಅವಕಾಶ ಇದೆ. ಈ ರೀತಿಯ ತ್ರಿಬಲ್ ತಲಾಖ್ ಮುಸ್ಲಿಮರಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಭಾರತದಲ್ಲಿ ಮಾತ್ರ ಈ ಪದ್ಧತಿಯನ್ನು ಇತ್ತೀಚೆಗೆ ನಿಷೇಧಿಸಲಾಗಿದೆ. ಇಸ್ಲಾಮಿನಲ್ಲಿ ಮಹಿಳೆಯರಿಗೆ ಡೈವರ್ಸ್ ಮಾಡಿಕೊಳ್ಳುವ ಅವಕಾಶ ಇದ್ದರೂ, ಅದರಲ್ಲಿ ಪುರುಷನಷ್ಟು ಸ್ವಾತಂತ್ರ್ಯ ಇಲ್ಲ. ಮಹಿಳೆ ವಿಚ್ಛೇದನ ಬಯಸುವುದನ್ನು ಖುಲಾ ಎಂದು ಕರೆಯುತ್ತಾರೆ. ಆದರೆ, ತನಗೆ ಡೈವರ್ಸ್ ಬೇಕೆಂದು ಕೋರ್ಟಿನಲ್ಲಿ ಅಥವಾ ಆತನಲ್ಲಿ ವಿನಂತಿ ಮಾಡಿಕೊಳ್ಳಬೇಕು.
ದುಬೈ ರಾಜ ಮಹಮ್ಮದ್ ಬಿನ್ ರಶೀದ್ ಅವರ ಪುತ್ರಿ ಶೈಖಾ ಮಹ್ರಾಗೆ 2023ರ ಮೇ ತಿಂಗಳಲ್ಲಿ ಮದುವೆಯಾಗಿತ್ತು. ಒಂದು ವರ್ಷದ ನಂತರ ಅಂದರೆ, ಇದೇ ಜೂನ್ ತಿಂಗಳ ಆರಂಭದಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಳು. ತನಗೆ ಮಗುವಾಗಿದ್ದನ್ನೂ ಆಕೆ ಇನ್ ಸ್ಟಾ ಪೇಜಿನಲ್ಲಿ ಹಾಕ್ಕೊಂಡಿದ್ದಳು. ಇದೀಗ ಒಂದೇ ತಿಂಗಳಲ್ಲಿ ಆಕೆಯೇ ವಿಚ್ಛೇದನ ಘೋಷಣೆ ಮಾಡಿಕೊಂಡಿದ್ದಾರೆ. ದುಬೈನಲ್ಲಿ ಅರಬ್ಬಿಗಳದ್ದೇ ಸಾಮ್ರಾಜ್ಯ ಆಗಿದ್ದರೂ, ರಾಜಕುಮಾರಿ ಆಗಿರುವ ಶೈಖಾ ಮಹ್ರಾ ಅವರು ವಿಚ್ಛೇದನ ಘೋಷಣೆ ಮಾಡಿ ಸುದ್ದಿಯಾಗಿದ್ದಾಳೆ.
Dubai princess Shaikha Mahra Mohammed Rashed Al Maktoum gave 'instant divorce' to her husband Sheikh Mana bin Mohammed bin Rashid bin Mana Al Maktoum on Instagram, two months after the couple welcomed their first child.
19-02-26 09:29 pm
mangalore
ಪರಮೇಶ್ವರ್ ಅಥವಾ ಡಿಕೆಶಿ ಯಾರಾಗ್ತಾರೆ ಮುಂದಿನ ಮುಖ್ಯ...
19-02-26 03:11 pm
ವಿಧಾನಸೌಧ ಒಳಗಡೆ ಮಾಧ್ಯಮಗಳಿಗೆ ಲಕ್ಷ್ಮಣ ರೇಖೆ ; ಭದ್...
18-02-26 09:02 pm
ಮಹಾರಾಷ್ಟ್ರದಿಂದ ಬೈಕ್ ನಲ್ಲಿ ಬಾಗಲಕೋಟಗೆ ಬರುತ್ತಿದ...
18-02-26 06:03 pm
ಊಟಕ್ಕೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ ; ಬೈಕ್...
17-02-26 10:33 pm
19-02-26 11:04 pm
mangalore
'ಉಚಿತ' ಕೊಡುಗೆಗಳು ದೇಶದ ಅಭಿವೃದ್ಧಿಗೆ ಅಡ್ಡಿ ; ಆದಾ...
19-02-26 10:10 pm
ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಶೋಚನೀಯ ಸ್ಥಿತಿ ; ಕ...
17-02-26 08:50 pm
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
19-02-26 10:37 pm
mangalore
2013ರಲ್ಲಿ ಶಿಲಾನ್ಯಾಸಗೊಂಡಿದ್ದ ಅಬ್ಬಕ್ಕ ಭವನ ನಿರ್ಮ...
19-02-26 09:50 pm
ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹ, ಹೋರಾಟ...
19-02-26 06:08 pm
ನೇತ್ರಾವತಿ ಸೇತುವೆ ಆವರಣ ಗೋಡೆಗೆ ಅಪ್ಪಳಿಸಿದ ಮಿನಿ ಟ...
19-02-26 05:38 pm
ಬೆಳ್ತಂಗಡಿ : ಮಕ್ಕಳು ಕ್ರಿಕೆಟ್ ಆಡುತ್ತಿದ್ದಾಗ ನಿಗೂ...
19-02-26 04:09 pm
18-02-26 09:16 pm
Mangaluru Staffer
Mangalore Shivabagh Suicide: ಕೈ ಕೊಯ್ದುಕೊಂಡು ರ...
18-02-26 07:42 pm
Hassan Murder: ಆಸ್ತಿ ವಿಚಾರಕ್ಕೆ ತಕರಾರು, ಕೋರ್ಟ್...
18-02-26 07:10 pm
ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆ, ಹಡಗುಗಳ ರಹಸ್ಯ ಮಾ...
18-02-26 01:52 pm
ಬೆಚ್ಚಿಬೀಳಿಸಿದ ಎಂಬಿಎ ವಿದ್ಯಾರ್ಥಿನಿ ಹತ್ಯೆ ಪ್ರಕರಣ...
17-02-26 03:03 pm