ಬ್ರೇಕಿಂಗ್ ನ್ಯೂಸ್
15-09-24 06:55 pm HK News Desk ದೇಶ - ವಿದೇಶ
ನವದೆಹಲಿ, ಸೆ.15: ಆರು ತಿಂಗಳ ಜೈಲು ವಾಸದ ಬಳಿಕ ಎರಡು ದಿನಗಳ ಹಿಂದೆ ತಿಹಾರ್ ಜೈಲಿನಿಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೊರಬಂದಿದ್ದರು. ಅಬಕಾರಿ ಹಗರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ, ಸಿಎಂ ಕಚೇರಿಗೆ ಹೋಗಬಾರದು ಎಂದು ಕೋರ್ಟ್ ಷರತ್ತು ವಿಧಿಸಿದ್ದರಿಂದ ಕೇಜ್ರಿವಾಲ್ ಕಡೆಗೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ.
ಇನ್ನೆರಡು ದಿನದಲ್ಲಿ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದೇನೆ. ಇದರ ಜೊತೆಗೆ, ನಾನು ಜನತಾ ನ್ಯಾಯಾಲಯದಿಂದ ಮತ್ತೆ ಜನಾದೇಶ ಪಡೆಯಲು ಮುಂದಾಗಿದ್ದೇನೆ. ನ್ಯಾಯಾಲಯ ಮತ್ತು ಜನರ ತೀರ್ಪನ್ನು ಪಡೆದು ಆರೋಪ ಮುಕ್ತನಾಗುತ್ತೇನೆ. ನನ್ನ ವಿರುದ್ಧ ಕೇಂದ್ರ ಸರಕಾರ ಪಿತೂರಿ ಮಾಡಿದ್ದು ಅದನ್ನು ಜನರ ಮುಂದಿಡುತ್ತೇನೆ ಎಂದು ಹೇಳಿದ್ದಾರೆ. ಇದಲ್ಲದೆ, ಮಹಾರಾಷ್ಟ್ರದ ಜೊತೆಗೆ ಅಕ್ಟೋಬರ್ ನಲ್ಲಿ ದೆಹಲಿಗೂ ಚುನಾವಣೆ ನಡೆಯಲಿ. ಮುಂದಿನ ಫೆಬ್ರವರಿ ವರೆಗೆ ಅವಧಿ ಇದ್ದರೂ, ನಾವು ಜನರ ಬಳಿ ಹೋಗಲು ನಿರ್ಧರಿಸಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ. ಆಮೂಲಕ ದೆಹಲಿ ಸರ್ಕಾರವನ್ನು ವಿಸರ್ಜಿಸುವ ಸುಳಿವನ್ನು ನೀಡಿದ್ದಾರೆ.
ಮಾರ್ಚ್ ತಿಂಗಳಲ್ಲಿ ಮೊದಲು ಬಂಧಿಸಲ್ಪಟ್ಟಿದ್ದ ಕೇಜ್ರಿವಾಲ್ ಗೆ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಪೆರೋಲ್ ಮೇಲೆ ಹೊರಬರಲು ಅವಕಾಶ ನೀಡಲಾಗಿತ್ತು. ಆನಂತರ, ಜೂನ್ 2ರಂದು ಮತ್ತೆ ತಿಹಾರ್ ಜೈಲಿಗೆ ಹೋಗಿದ್ದ ಕೇಜ್ರಿವಾಲ್ ಬರೋಬ್ಬರಿ ಆರು ತಿಂಗಳ ಬಳಿಕ ಜಾಮೀನು ಪಡೆದು ಹೊರಬಂದಿದ್ದಾರೆ. ಆದರೆ ಸಿಎಂ ಕಚೇರಿಗೆ ಹೋಗಬಾರದು, ಯಾವುದೇ ಕಡತಕ್ಕೆ ಸಹಿ ಹಾಕುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಷರತ್ತು ಹಾಕಿದ್ದು ಕೇಜ್ರಿವಾಲ್ ಅವರನ್ನು ಅಧೀರರನ್ನಾಗಿಸಿದೆ. ಹೀಗಾಗಿ ಜೈಲಿನಲ್ಲಿದ್ದರೂ, ಸೀಟು ಬಿಟ್ಟುಕೊಟ್ಟಿರದ ಕೇಜ್ರಿವಾಲ್ ಈಗ ದಿಢೀರ್ ಆಗಿ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಲ್ಲದೆ, ಜನರ ಬಳಿ ಹೋಗುತ್ತೇನೆಂದು ಹೇಳಿ ಹೊಸ ಡ್ರಾಮಾ ಶುರು ಮಾಡಿದ್ದಾರೆ.
Arvind Kejriwal's decision to resign is seen as a strategic move, and he aims to position the Aam Aadmi Party (AAP) in a fresh light ahead of the upcoming Assembly elections. By deciding to step down, he could seek to paint himself as a martyr and fight against a corrupt system.
18-09-24 07:16 pm
HK News Desk
Parameshwar, drugs, Bangalore crime: ರಾಜ್ಯದಲ್...
18-09-24 04:46 pm
Palestinian Flag: ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀ...
16-09-24 07:49 pm
P Murthy, Ambedkar Sena, MLA Munirathna: ದಲಿತ...
15-09-24 05:33 pm
BJP, RSS: ರಾಜ್ಯ ಬಿಜೆಪಿಗೆ ಮತ್ತೆ ಸಂಘಟನಾ ಕಾರ್ಯದರ...
15-09-24 01:53 pm
18-09-24 02:52 pm
HK News Desk
ಹೆದ್ದಾರಿ ವೆಚ್ಚಕ್ಕಿಂತ ಹೆಚ್ಚು ಟೋಲ್ ವಸೂಲಿ ಯಾಕೆ ?...
18-09-24 02:46 pm
ಜಿಂಬಾಬ್ವೆಯಲ್ಲಿ ಭೀಕರ ಬರ ; ಜನರ ಹಸಿವು ನೀಗಿಸಲು ನ...
18-09-24 11:03 am
ಬುಲ್ಡೋಜರ್ ನ್ಯಾಯವನ್ನು ವೈಭವೀಕರಿಸುವುದು ತಪ್ಪು, ಅತ...
17-09-24 07:28 pm
Arvind Kejriwal, Atishi New CM Delhi; ದೆಹಲಿ ಸ...
17-09-24 07:08 pm
18-09-24 10:45 pm
Mangalore Correspondent
Mangalore, Lawrence D’Souza, congress Labour...
18-09-24 10:29 pm
Satish Kumpala, Mangalore: ಉಸ್ತುವಾರಿ ಸಚಿವರು ಎ...
17-09-24 10:11 pm
Brijesh Chowta, Msez, JBF: ಎಂಎಸ್ಇಝೆಡ್ ಗೆ ಭೂಮ...
17-09-24 09:56 pm
Udupi, Sunil Kumar, Kota srinivas, CM: ರಾಜ್ಯ...
17-09-24 09:34 pm
18-09-24 10:08 pm
Mangalore Correspondent
Bangalore fraud, Siddalingaiah Hiremath, Scam...
15-09-24 01:21 pm
MLA Munirathna Arrest: ತಿಂಗಳಿಗೆ 30 ಲಕ್ಷ ಲಂಚಕ್...
14-09-24 06:54 pm
Srimathi Shetty murder case, Mangalore Court...
14-09-24 11:52 am
Kristina Joksimovic, Miss Switzerland finalis...
13-09-24 10:50 pm