ಬ್ರೇಕಿಂಗ್ ನ್ಯೂಸ್
28-10-24 08:38 pm HK News Desk ದೇಶ - ವಿದೇಶ
ಎರ್ನಾಕುಲಂ, ಅ.28: ಕೇರಳದಲ್ಲಿ ಅಡುಗೆ ಸಂಬಂಧಿತ ಯೂಟ್ಯೂಬರ್ ಆಗಿ ಹೆಸರು ಮಾಡಿದ್ದ ದಂಪತಿ ದಿಢೀರ್ ಸಾವಿಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಎರ್ನಾಕುಲಂ ಜಿಲ್ಲೆಯ ಪರಶ್ಶಲಾ ಗ್ರಾಮದಲ್ಲಿ ನಡೆದಿದೆ. ಸೆಲ್ಲು ಫ್ಯಾಮಿಲಿ ಹೆಸರಿನ ಯೂಟ್ಯೂಬ್ ನಡೆಸುತ್ತಿದ್ದ ಪ್ರಿಯಾ (38) ಮತ್ತು ಆಕೆಯ ಪತಿ ಸೆಲ್ವರಾಜ್ (45) ಮೃತರು.
ದಂಪತಿಯ ಮಗ ಎರ್ನಾಕುಲಂನಲ್ಲಿ ನರ್ಸಿಂಗ್ ಓದುತ್ತಿದ್ದು, ಶುಕ್ರವಾರ ರಾತ್ರಿ ಫೋನಲ್ಲಿ ಮಾತನಾಡಿದ್ದ. ಮರುದಿನ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಹೀಗಾಗಿ ಶನಿವಾರ ಸಂಜೆಯ ವೇಳೆಗೆ ಮಗ ಮನೆಗೆ ಆಗಮಿಸಿದ್ದು, ತಾಯಿ ಪ್ರಿಯಾ ಬೆಡ್ ನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿದ್ದರೆ, ತಂದೆ ನೇಣಿಗೆ ಶರಣಾಗಿರುವ ರೀತಿ ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸೆಲ್ಲು ಫ್ಯಾಮಿಲಿ ಹೆಸರಿನ ಯೂಟ್ಯೂಬ್ ನಲ್ಲಿ ದಿನವೂ ಇವರು ವಿಡಿಯೋ ಅಪ್ಲೋಡ್ ಮಾಡುತ್ತಿದ್ದರು. ಶುಕ್ರವಾರ ರಾತ್ರಿ 9 ಗಂಟೆಗೆ 55 ಸೆಕೆಂಡಿನ ವಿಡಿಯೋ ಹಾಕಿದ್ದು, ಅದರಲ್ಲಿ ಸಾವಿನ ಕಡೆಗೆ ಅಂತಿಮ ಯಾತ್ರೆ ಎನ್ನುವ ಅರ್ಥವುಳ್ಳ ಸಾಲುಗಳ ಸಾಂಗ್ ಬಳಸಿದ್ದರು. ಹೀಗಾಗಿ ಇವರು ಮೊದಲೇ ಸಾವಿಗೆ ಶರಣಾಗುವ ಬಗ್ಗೆ ಪ್ಲಾನ್ ಮಾಡಿಕೊಂಡಿದ್ದರೇ ಅನ್ನುವ ಅನುಮಾನ ಬಂದಿದೆ. ಪರಿಸರದ ನಿವಾಸಿಗಳು ಇವರ ದಿಢೀರ್ ಸಾವಿನ ಬಗ್ಗೆ ಅಚ್ಚರಿಗೊಂಡಿದ್ದಾರೆ. ಮನೆಗೆ ಮಕ್ಕಳು ಬಿಟ್ಟರೆ, ಪ್ರಿಯಾ ತಾಯಿ ಮಾತ್ರ ಬರುತ್ತಿದ್ದರು. ವರ್ಷದ ಹಿಂದೆ ಮಗಳಿಗೆ ಮದುವೆಯಾಗಿತ್ತು. ಮನೆಯಲ್ಲಿ ಇಬ್ಬರೇ ಹೆಚ್ಚಾಗಿ ಇರುತ್ತಿದ್ದರು. ಮನೆ ಕಟ್ಟುವುದಕ್ಕಾಗಿ ಜಾಗ ಖರೀದಿಯನ್ನೂ ಮಾಡಿದ್ದರು ಎಂದು ಸ್ಥಳೀಯರು ಮನೋರಮಾ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಪ್ರಿಯಾ ಹಿಂದೆ ಕುಟುಂಬಶ್ರೀಯಲ್ಲಿ ಸಕ್ರಿಯವಾಗಿದ್ದರು. ಆನಂತರ, ಅದನ್ನು ಬಿಟ್ಟು ಯೂಟ್ಯೂಬಲ್ಲಿ ಮಾತ್ರ ಸಕ್ರಿಯವಾಗಿದ್ದರು. ಸಾಮಾಜಿಕವಾಗಿ ಹೆಚ್ಚು ಬೆರೆಯುತ್ತಿರಲಿಲ್ಲ. ಈಕೆಯ ಪತಿ ಸೆಲ್ವರಾಜ್ ಮೇಸ್ತ್ರಿಯಾಗಿದ್ದು, ಸ್ಥಳೀಯರ ಜೊತೆಗೆ ಮಾತ್ರ ಬೆರೆಯುತ್ತಿದ್ದರು. ಸಂಬಂಧಿಕರ ಜೊತೆಗೆ ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
A couple, who ran a YouTube channel, was found dead at their residence in Kerala's Parassala town on Sunday, with the police suspecting it as a case of death by suicide. The incident came to light after their neighbours, who noticed an unusual absence, alerted the police.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 02:10 pm
Mangalore Correspondent
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
"ಅಮೃತ ಸೋಮೇಶ್ವರ ರಸ್ತೆ" ನಾಮಕರಣಕ್ಕೆ ಸೋಮೇಶ್ವರ ಪುರ...
09-09-25 10:47 pm
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm