ಬ್ರೇಕಿಂಗ್ ನ್ಯೂಸ್
29-10-24 12:01 pm HK News Desk ದೇಶ - ವಿದೇಶ
ಕಾಸರಗೋಡು, ಅ.29: ಕಾಞಂಗಾಡ್ ಬಳಿಯ ನೀಲೇಶ್ವರದಲ್ಲಿ ತೈಯ್ಯಂ ಉತ್ಸವ ನಡೆಯುತ್ತಿದ್ದಾಗ ಭಾರೀ ಪ್ರಮಾಣದಲ್ಲಿ ಶೇಖರಿಸಿಟ್ಟಿದ್ದ ಪಟಾಕಿ ದಾಸ್ತಾನು ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಿನ್ನೆ ಮಧ್ಯರಾತ್ರಿ ನೀಲೇಶ್ವರದ ಅಂಜುತ್ತಂಬಲಂ ವೀರೇರ್ಕಾವು ದೇವಸ್ಥಾನದಲ್ಲಿ ದುರಂತ ಸಂಭವಿಸಿದ್ದು, ಮಂಗಳೂರು, ಕಣ್ಣೂರು, ಕಾಸರಗೋಡಿನ ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ದಾಖಲಿಸಲಾಗಿದೆ.
ಒಟ್ಟು 154 ಮಂದಿಯಲ್ಲಿ 97 ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ. ಈ ಪೈಕಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದ್ದು, 80 ಶೇಕಡಕ್ಕೂ ಹೆಚ್ಚು ಸುಟ್ಟ ಗಾಯಗೊಂಡಿದ್ದಾರೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಇಂಬಾಸೇಕರ್ ಮಾಹಿತಿ ನೀಡಿದ್ದಾರೆ. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ 18, ಕಣ್ಣೂರು ಎಂಐಎಂ ಆಸ್ಪತ್ರೆಯಲ್ಲಿ 18, ಕಾಞಂಗಾಡಿನ ಐಶಾಲ್ ಆಸ್ಪತ್ರೆಯಲ್ಲಿ 17, ಕಾಞಂಗಾಡು ಜಿಲ್ಲಾಸ್ಪತ್ರೆಯಲ್ಲಿ 16, ಸಂಜೀವಿನಿ ಆಸ್ಪತ್ರೆಯಲ್ಲಿ 10 ಮಂದಿ ಸೇರಿದಂತೆ ಹಲವಾರು ಕಡೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.



ಉತ್ತರ ಮಲಬಾರ್ ಭಾಗದಲ್ಲಿ ತೈಯ್ಯಂ ಉತ್ಸವ ವಿಶೇಷವಾಗಿದ್ದು, ಚಾಮುಂಡಿ ದೈವಕ್ಕೆ ಉತ್ಸವ ನಡೆಯುತ್ತದೆ. ಈಗ ಉತ್ಸವದ ಸೀಸನ್ ಆರಂಭವಾಗುತ್ತಿದ್ದು, ಮೊದಲ ಬಾರಿಗೆ ನೀಲೇಶ್ವರದಲ್ಲಿ ನಿನ್ನೆ ರಾತ್ರಿ ತೈಯ್ಯಂ ಉತ್ಸವಕ್ಕೆ ಏರ್ಪಾಡು ನಡೆದಿತ್ತು. ಅದಕ್ಕೂ ಮುನ್ನ ಉತ್ಸವದ ನಿಮಿತ್ತ ಸಿಡಿಮದ್ದು ಉರಿಸಲಾಗಿತ್ತು. ಆದರೆ, ಪಟಾಕಿ ದಾಸ್ತಾನು ಮಾಡಿದ್ದ ಕಟ್ಟಡದ ಬಳಿಯಲ್ಲೇ ಪಟಾಕಿಯನ್ನು ಉರಿಸಲು ಆರಂಭಿಸಿದ್ದರಿಂದ ಅದರ ಕಿಡಿ ಹಾರಿ, ದಾಸ್ತಾನಿಟ್ಟಿದ್ದ ಪಟಾಕಿ ಕಟ್ಟಡಕ್ಕೆ ಬಿದ್ದಿದೆ. ಇದರಿಂದಾಗಿ ಅಲ್ಲಿದ್ದ ಪಟಾಕಿ ರಾಶಿ ಏಕಕಾಲದಲ್ಲಿ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದೆ.
ಉತ್ಸವ ನೋಡುವುದಕ್ಕೆ ಸಾವಿರಾರು ಮಂದಿ ಸ್ಥಳದಲ್ಲಿ ಸೇರಿದ್ದರು. ಸಿಡಿಮದ್ದು ಉರಿಸುತ್ತಿದ್ದಾಗ ಸಾಕಷ್ಟು ಜನರು ಕುತೂಹಲದಿಂದ ನೋಡುತ್ತ ಮೊಬೈಲಿನಲ್ಲಿ ವಿಡಿಯೋ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲೇ ಪಟಾಕಿ ದಾಸ್ತಾನಿರಿಸಿದ್ದ ಕಟ್ಟಡಕ್ಕೆ ಬೆಂಕಿ ಬಿದ್ದು ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗಿದ್ದು, ಸ್ಥಳದಲ್ಲಿ ಸೇರಿದ್ದ ನೂರಾರು ಜನರು ಗಾಯಗೊಂಡಿದ್ದಾರೆ. ಉತ್ಸವ ನೋಡುವುದಕ್ಕೆ ಮಕ್ಕಳು, ಮಹಿಳೆಯರು ಎಲ್ಲರೂ ಸೇರಿದ್ದರಿಂದ ಗಾಯಾಳುಗಳಲ್ಲಿ ಎಲ್ಲ ವಯೋಮಾನದವರೂ ಇದ್ದಾರೆ.
ದುರಂತ ಘಟನೆ ಬಗ್ಗೆ ನೀಲೇಶ್ವರ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ದೇವಸ್ಥಾನ ಕಮಿಟಿ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಪಟಾಕಿಯನ್ನು ಪರವಾನಗಿ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಶೇಖರಣೆ ಮಾಡಲಾಗಿತ್ತು. ಅಲ್ಲದೆ, ಜನರು ಮತ್ತು ಪಟಾಕಿ ದಾಸ್ತಾನಿಟ್ಟ ಜಾಗದಿಂದ ನೂರಿನ್ನೂರು ಮೀಟರ್ ದೂರದಲ್ಲಿ ಸಿಡಿಮದ್ದು ಉರಿಸಬೇಕಿದ್ದರೆ, ಇಲ್ಲಿ ಪಟಾಕಿ ದಾಸ್ತಾನಿದ್ದ ಕಟ್ಟಡದ ಬಳಿಯಲ್ಲೇ ಸಿಡಿಮದ್ದು ಉರಿಸಲಾಗಿತ್ತು ಎನ್ನಲಾಗುತ್ತಿದೆ. ಘಟನೆಯಲ್ಲಿ ಕಟ್ಟಡದ ಒಂದು ಭಾಗ ಪೂರ್ತಿ ಕುಸಿದು ಹೋಗಿದ್ದು, ಸ್ಥಳದಲ್ಲಿ ಸೇರಿದ್ದ ಜನರು ತೀವ್ರ ಸುಟ್ಟ ಗಾಯಗೊಂಡಿದ್ದಾರೆ.
ಉತ್ಸವಕ್ಕಾಗಿ ತೆಂಗಿನ ಗರಿಗಳಿಂದ ಮಾಡಲ್ಪಟ್ಟ ರಚನೆಗಳಿಂದ ಕಟ್ಟಡಕ್ಕೆ ಮತ್ತು ಮೇಲ್ಭಾಗಕ್ಕೆ ಹಾಸಲಾಗಿತ್ತು. ಬೆಂಕಿ ಹತ್ತಿಕೊಳ್ಳುವ ಸಂದರ್ಭದಲ್ಲಿ ಒಣಗಿದ ತೆಂಗಿನ ಗರಿಗಳು ಸುಲಭದಲ್ಲಿ ಉರಿದಿವೆ. ಹೆಚ್ಚು ಸಾಮರ್ಥ್ಯದ ಸಿಡಿಮದ್ದುಗಳು ಇರಲಿಲ್ಲ. ಸಣ್ಣ ಸಣ್ಣ ಪ್ರಮಾಣದ ಪಟಾಕಿಯಷ್ಟೇ ದಾಸ್ತಾನಿತ್ತು ಎಂದು ದೇವಸ್ಥಾನ ಸಿಬಂದಿ ಹೇಳುತ್ತಾರೆ. ಆದರೆ, ದೇವಸ್ಥಾನ ಪರಿಸರವನ್ನು ಪೊಲೀಸರು ಲಾಕ್ ಮಾಡಿದ್ದು, ಉತ್ಸವ ನಿಲ್ಲಿಸಿ ತೀವ್ರ ತನಿಖೆ ಕೈಗೊಂಡಿದ್ದಾರೆ. ದುರಂತಕ್ಕೆ ನಿರ್ಲಕ್ಷ್ಯ ಕಾರಣ ಎನ್ನುವ ನೆಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಕಾಸರಗೋಡು ಜಿಲ್ಲಾಧಿಕಾರಿ ಮತ್ತು ಎಸ್ಪಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
#WATCH कासरगोड (केरल) सोमवार देर रात नीलेश्वरम के निकट एक मंदिर उत्सव के दौरान आतिशबाजी दुर्घटना में 150 से अधिक लोग घायल हो गए #BigBreaking #FireworkAccident #Explosion #Kasaragod #IsraelIranWaR Annamalai Ronaldo लॉरेंस बिश्नोई #ViralVideos pic.twitter.com/VJom24o1pM
— Rahul (@Rahularodia) October 29, 2024
More than 150 people were injured, including eight seriously, in a fireworks accident during a temple festival near Neeleswaram in Kerala's Kasaragod late on Monday, news agency PTI reported citing police.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm