ಬ್ರೇಕಿಂಗ್ ನ್ಯೂಸ್
08-11-24 10:49 pm HK News Desk ದೇಶ - ವಿದೇಶ
ಮುಂಬೈ, ನ.8: ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ, ದಾವೂದ್ ಇಬ್ರಾಹಿಂ ಅವರ ಭಾವಚಿತ್ರವುಳ್ಳ ಟೀ ಶರ್ಟ್ ಮಾರಾಟಕ್ಕಿಟ್ಟಿರುವ ಆನ್ಲೈನ್ ಕಂಪನಿಗಳ ವಿರುದ್ಧ ಮುಂಬೈನಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳ ಟೀ ಶರ್ಟ್ ಸೇಲ್ ಮಾಡುವ ಮೂಲಕ ಸಮಾಜಕ್ಕೆ ನೆಗೆಟಿವ್ ಸಂದೇಶ ನೀಡಲಾಗುತ್ತಿದೆ ಎಂದು ಆರೋಪಿಸಿ ಪ್ರಕರಣ ದಾಖಲು ಮಾಡಲಾಗಿದೆ.
ಇ-ಕಾಮರ್ಸ್ ಪ್ಲಾಟ್ ಫಾರಂಗಳಾದ ಫ್ಲಿಪ್ ಕಾರ್ಟ್, ಆಲಿ ಎಕ್ಸ್ ಪ್ರೆಸ್, ಟೀ ಶಾಪರ್, ಇಟ್ಸಿ ಎನ್ನುವ ಆನ್ಲೈನ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ಪೆಷಲ್ ಐಜಿಪಿ ಕಚೇರಿಯ ಅಧಿಕಾರಿಗಳು ಮಹಾರಾಷ್ಟ್ರ ಸ್ಟೇಟ್ ಸೈಬರ್ ವಿಭಾಗದಲ್ಲಿ ಕೇಸು ದಾಖಲಿಸಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯ ಜಾಲತಾಣ ಪೋಸ್ಟ್, ಆನ್ಲೈನ್ ಕಂಟೆಂಟ್ ಬಗ್ಗೆ ಸೈಬರ್ ಅಪರಾಧ ವಿಭಾಗದವರು ನಿಗಾ ಇಡುತ್ತಾರೆ. ಎರಡು ದಿನಗಳ ಹಿಂದೆ ಲಾರೆನ್ಸ್ ಬಿಷ್ಣೋಯಿ ಟೀ ಶರ್ಟ್ ಮಾರುಕಟ್ಟೆಗೆ ಬಂದ ಬೆನ್ನಲ್ಲೇ ದಾವೂದ್ ಇಬ್ರಾಹಿಂ ಚಿತ್ರವುಳ್ಳ ಟೀಶರ್ಟ್ ಕೂಡ ಮಾರುಕಟ್ಟೆಗೆ ಬಂದಿದ್ದವು.
ಜನಪ್ರಿಯ ಆನ್ಲೈನ್ ಮಾರುಕಟ್ಟೆಯಲ್ಲಿ ಇಂತಹ ಟೀಶರ್ಟ್ ಗಳನ್ನು ಮಾರಾಟಕ್ಕಿಡುವ ಮೂಲಕ ಯುವಕರ ಮನಸ್ಸು ಕೆಡಿಸಿ, ಅಪರಾಧ ಲೋಕದತ್ತ ಸೆಳೆಯುತ್ತದೆ. ಅಪರಾಧ ಲೋಕದವರನ್ನು ತಮ್ಮ ಐಕಾನ್ ಆಗುವಂತೆ ಪ್ರೇರೇಪಣೆ ನೀಡುತ್ತದೆ. ಅಲ್ಲದೆ, ದಾವೂದ್ ಇಬ್ರಾಹಿಂ ಮತ್ತು ಲಾರೆನ್ಸ್ ಬಿಷ್ಣೋಯಿ ಅವರಂಥ ಕ್ರಿಮಿನಲ್ ಗಳು ಮಾಡಿರುವ ಅಪರಾಧಗಳನ್ನು ಸಮಾಜಕಂಟಕ ಅಲ್ಲ ಎನ್ನುವ ಭಾವನೆ ಜನರಲ್ಲಿ ಮೂಡಿಸುತ್ತದೆ. ಈ ರೀತಿಯ ನಡೆಗಳು ಯುವಕರಲ್ಲಿ ಅಪಾಯಕಾರಿ ಸಂದೇಶವನ್ನು ನೀಡುತ್ತದೆ ಎಂದು ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳು ಪ್ರಕರಣ ದಾಖಲು ಮಾಡಿದ್ದಾರೆ.
ಟೀ ಶರ್ಟ್ ಉತ್ಪಾದಕರು ಮತ್ತು ಅದನ್ನು ಮಾರಾಟಕ್ಕಿಟ್ಟವರು ಇದರ ಹೊಣೆ ಹೊರಬೇಕಾಗುತ್ತದೆ ಎಂದು ಅವರಿಬ್ಬರ ಮೇಲೂ ಐಟಿ ಏಕ್ಟ್ 67 ಸೇರಿದಂತೆ ಸೈಬರ್ ಅಪರಾಧ ಸೆಕ್ಷನ್ ಗಳಾದ 192, 196, 353 ಅಡಿ ಕೇಸು ದಾಖಲಿಸಲಾಗಿದೆ.
The Maharashtra cyber police Wednesday registered a First Information Report (FIR) against several e-commerce platforms and sellers for selling t-shirts that glorify gangsters, including Lawrence Bishnoi and Dawood Ibrahim.
07-06-25 08:04 pm
HK News Desk
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
07-06-25 11:02 pm
Mangalore Correspondent
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
Mangalore Fire Accident, Derlakatte: ದೇರಳಕಟ್ಟ...
07-06-25 12:08 pm
07-06-25 10:39 pm
Mangalore Correspondent
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm