ಬ್ರೇಕಿಂಗ್ ನ್ಯೂಸ್
22-06-25 04:57 pm HK News Desk ದೇಶ - ವಿದೇಶ
ಲಕ್ನೋ, ಜೂನ್ 22: ನಾವು ಯೋಗ ಮಾಡುವುದನ್ನು ಒಪ್ಪುತ್ತೇವೆ, ಎಲ್ಲ ಪುರುಷ, ಮಹಿಳೆಯರೂ ಯೋಗವನ್ನು ಮಾಡಬೇಕು. ಮದ್ರಸಾ, ಮಸೀದಿಗಳಲ್ಲೂ ಯೋಗವನ್ನು ಮಾಡಬೇಕು. ಆದರೆ ಸೂರ್ಯ ನಮಸ್ಕಾರ ಯೋಗವನ್ನು ಮಾತ್ರ ವಿರೋಧಿಸುತ್ತೇವೆ. ಇಸ್ಲಾಮ್ ಪ್ರಕಾರ, ಸೂರ್ಯನಿಗೆ ನಮಸ್ಕರಿಸುವ ಯೋಗ ಹರಾಮ್ ಇದ್ದಂತೆ, ನಮಗೆ ನಿಷಿದ್ಧವಾಗಿದೆ. ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಬಾರದು. ಹೀಗೆಂದು ಉತ್ತರ ಪ್ರದೇಶದ ಬರೇಲ್ವಿ ಮೂಲದ ಮೌಲಾನಾ ಶಹಾಬುದ್ದೀನ್ ರಜ್ವಿ ಎಂಬವರು ಹೊಸ ವಾದ ಮುಂದಿಟ್ಟಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಬರೇಲ್ವಿ ಜಿಲ್ಲೆಯ ದರ್ಗಾ ಇ-ಅಲಾ- ಹಜ್ರತ್ ನಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಈ ಮಾತು ಹೇಳಿದ್ದಾರೆ. ಸೂರ್ಯನಿಗೆ ನಮಿಸುವುದು ಇಸ್ಲಾಮಿಗೆ ವಿರುದ್ಧ. ಹಾಗಾಗಿ ಸೂರ್ಯ ನಮಸ್ಕಾರ ಮಾಡುವ ಯೋಗ ಮಾಡಬಾರದೆಂದು ಮುಸ್ಲಿಮರಿಗೆ ಹೇಳುತ್ತೇನೆ. ಇಸ್ಲಾಮಿನಲ್ಲೂ ಯೋಗ ಇದೆ, ಯೋಗ ಯಾವುದೇ ಧರ್ಮಕ್ಕೆ ಸಂಬಂಧಪಟ್ಟದ್ದು ಅಲ್ಲ. ಯಾರು ಕೂಡ ಯೋಗವನ್ನು ತಮ್ಮ ಧರ್ಮದ್ದೆಂದು ಹೇಳಬಾರದು. ಸೂರ್ಯ ನಮಸ್ಕಾರ ಎನ್ನುವುದು ಸನಾತನ ಧರ್ಮದಲ್ಲಿ ಇರುವಂಥದ್ದು. ಆದರೆ ಮುಸ್ಲಿಮರಿಗೆ ಸೂರ್ಯ ನಮಸ್ಕಾರ ಹರಾಮ್ ಎಂದು ಹೇಳಿದ್ದಾರೆ.

ಸೂರ್ಯನಿಗೆ ಉಗಿದರೆ ಮುಖಕ್ಕೇ ಬೀಳುತ್ತದೆs
ಆಲ್ ಇಂಡಿಯಾ ಮುಸ್ಲಿಮ್ ಜಮಾತ್ ಕಮಿಟಿಯ ಅಧ್ಯಕ್ಷರೂ ಆಗಿರುವ ರಜ್ವಿ ಮಾತಿಗೆ ಉತ್ತರ ಪ್ರದೇಶದ ಸಚಿವ ಜೆಪಿಎಸ್ ರಾಥೋಡ್ ಪ್ರಬಲ ತಿರುಗೇಟು ನೀಡಿದ್ದು, ಸೂರ್ಯ ಎಷ್ಟು ಸತ್ಯವೋ, ಸೂರ್ಯ ನಮಸ್ಕಾರವೂ ಅಷ್ಟೇ ಸತ್ಯ. ಸೂರ್ಯ ಉದಯಿಸುವುದು ಹೇಗೆಯೋ ಸೂರ್ಯ ನಮಸ್ಕಾರ ಯೋಗವೂ ಹಾಗೇ ಮುಂದುವರಿಯುತ್ತದೆ ಎಂದಿದ್ದಾರೆ. ಸೂರ್ಯನಿಗೆ ಮೇಲೆ ನೋಡಿ ಉಗಿದರೆ ಅದು ಉಗುಳಿದವನ ಮುಖಕ್ಕೇ ಬಂದು ಬೀಳುತ್ತದೆ. ಸೂರ್ಯ ನಮಸ್ಕಾರ ವಿರೋಧಿಸುವವರಿಗೂ ಇದು ಅನ್ವಯ ಆಗುತ್ತದೆ. ಯೋಗ ಅಭ್ಯಾಸ ಅನ್ನುವುದು ಪ್ರಾಚೀನ ಕಾಲದಿಂದ ಬಂದಿರುವಂಥದ್ದು. ಅದನ್ನು ಎಲ್ಲರೂ ಸ್ವೀಕರಿಸಿ ಪಾಲಿಸಬೇಕು. ಅದನ್ನು ತನ್ನ ಮೂಗಿನ ನೇರಕ್ಕೆ ನೋಡಿ ವಿರೋಧಿಸುವುದರಲ್ಲಿ ಅರ್ಥ ಇಲ್ಲ ಎಂದು ಹೇಳಿದ್ದಾರೆ.
A fresh controversy has erupted after a prominent cleric from Uttar Pradesh stated that while Muslims can accept yoga as a form of physical exercise, the practice of Surya Namaskar remains haram (forbidden) under Islamic teachings.
18-02-26 09:02 pm
HK Desk
ಮಹಾರಾಷ್ಟ್ರದಿಂದ ಬೈಕ್ ನಲ್ಲಿ ಬಾಗಲಕೋಟಗೆ ಬರುತ್ತಿದ...
18-02-26 06:03 pm
ಊಟಕ್ಕೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ ; ಬೈಕ್...
17-02-26 10:33 pm
Mohan Das Pai: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾ...
17-02-26 09:12 pm
ಫೇಲಾದವರನ್ನು ಪಾಸು ಮಾಡುವುದೇ ತಪ್ಪು ; ಕೇರಳದಲ್ಲಿ ಶ...
17-02-26 08:56 pm
17-02-26 08:50 pm
HK Desk
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
18-02-26 11:19 am
Mangaluru Staffer
Parameshwara in Mangalore: ಶಾಸಕರು ವಿದೇಶಕ್ಕೆ ತ...
17-02-26 12:42 pm
Mangalore Ullal Accident: ಉಳ್ಳಾಲ ; ಅತಿ ವೇಗದಿಂ...
16-02-26 11:13 pm
ಬಿಕರ್ನಕಟ್ಟೆ ಸರ್ಕಾರಿ ಶಾಲೆಯಲ್ಲಿ ರಂಗಮಂಟಪ ಲೋಕಾರ್ಪ...
16-02-26 11:06 pm
ಹಂಪಿಯ ಮರ್ಯಾದೆ ಹರಾಜು ಹಾಕಿದ್ದ ಪ್ರಕರಣ ; ಪ್ರವಾಸಿ...
16-02-26 11:02 pm
18-02-26 09:16 pm
Mangaluru Staffer
Mangalore Shivabagh Suicide: ಕೈ ಕೊಯ್ದುಕೊಂಡು ರ...
18-02-26 07:42 pm
Hassan Murder: ಆಸ್ತಿ ವಿಚಾರಕ್ಕೆ ತಕರಾರು, ಕೋರ್ಟ್...
18-02-26 07:10 pm
ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆ, ಹಡಗುಗಳ ರಹಸ್ಯ ಮಾ...
18-02-26 01:52 pm
ಬೆಚ್ಚಿಬೀಳಿಸಿದ ಎಂಬಿಎ ವಿದ್ಯಾರ್ಥಿನಿ ಹತ್ಯೆ ಪ್ರಕರಣ...
17-02-26 03:03 pm