ಬ್ರೇಕಿಂಗ್ ನ್ಯೂಸ್
24-06-25 12:03 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 24 : ಪಶ್ಚಿಮ ಏಶ್ಯಾದಲ್ಲಿರುವ ಅಮೆರಿಕದ ಅತಿ ದೊಡ್ಡ ಸೇನಾ ನೆಲೆ ಕತಾರಿನ ಅಲ್ ಉದೀದ್ ವಾಯು ನೆಲೆಗೆ ಇರಾನ್ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆತ್ತಗಾಗಿದ್ದಾರೆ. ಇರಾನ್- ಇಸ್ರೇಲ್ ಕದನ ವಿರಾಮ ಘೋಷಿಸಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ಇಸ್ರೇಲ್ ಆಗಲೀ, ಇರಾನ್ ಆಗಲೀ ಯಾವುದೇ ಹೇಳಿಕೆ ನೀಡಿಲ್ಲ.
ಇದು ಶಾಂತಿಯ ಕಾಲ, ಜಗತ್ತಿಗೆ ಅಭಿನಂದನೆ ಹೇಳುತ್ತಿದ್ದೇನೆ. ಇನ್ನು 12 ಗಂಟೆಗಳಲ್ಲಿ ಇಸ್ರೇಲ್ ಮತ್ತು ಇರಾನ್ ಕದನ ವಿರಾಮಕ್ಕೆ ಬರಲಿವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಇರಾನ್ ಮಂಗಳವಾರ ನಸುಕಿನಲ್ಲಿ ಮತ್ತೆ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದ್ದು, ಈಗ ನಾವು ಕದನ ವಿರಾಮಕ್ಕೆ ಒಪ್ಪುತ್ತೇವೆ, ಆ ಕಡೆಯಿಂದ ಇಸ್ರೇಲ್ ಕೂಡ ಈ ಬಗ್ಗೆ ಅಧಿಕೃತವಾಗಿ ಹೇಳಲಿ ಎಂದು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ಹೇಳಿದ್ದಾರೆ. ಯಾವುದೇ ಅಧಿಕೃತ ಅಗ್ರಿಮೆಂಟ್ ಆಗಿಲ್ಲ. ಇಸ್ರೇಲ್ ಕಡೆಯಿಂದ ಹೇಳಿಕೆ ಬಂದಿಲ್ಲ ಎಂದೂ ಅವರು ಹೇಳಿದ್ದಾರೆ.
ಇದೇ ವೇಳೆ, ಇರಾನ್ ರೆವಲ್ಯೂಶನರಿ ಗಾರ್ಡ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮೂರ್ಖ ಎಂದು ಟೀಕಿಸಿದ್ದು, ಪವಿತ್ರ ಇಸ್ಲಾಮಿಕ್ ರಿಪಬ್ಲಿಕ್ ಮೇಲೆ ಈ ರೀತಿಯ ದಾಳಿ ಮರುಕಳಿಸಿದರೆ ನಾವು ಅವರಿಗೆ ಮರೆಯಲಾರದ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದೆ. ಮಂಗಳವಾರ ಮುಂಜಾನೆ ನಾಲ್ಕು ಗಂಟೆಗೆ ಇಸ್ರೇಲಿನ ಟೆಲ್ ಅವೀವ್ ಮೇಲೆ ಹಲವಾರು ಮಿಸೈಲ್ ದಾಳಿ ನಡೆಸಿದ ಬಳಿಕ ಈಗ ನಾವು ಕದನ ವಿರಾಮ ಮಾಡಿಕೊಳ್ಳುತ್ತೇವೆ ಎನ್ನುವ ಮೂಲಕ ಇರಾನ್ ಮುಯ್ಯಿಗೆ ಮುಯ್ಯಿ ತೀರಿಸಿದ್ದೇವೆ ಎನ್ನುವ ರೀತಿ ವರ್ತಿಸಿದೆ.
ಇರಾನ್ ನಲ್ಲಿನ ಮೂರು ಅಣು ಸ್ಥಾವರಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ ಎರಡು ದಿನಗಳ ನಂತರ ಇರಾನ್, ಕತಾರಿನಲ್ಲಿರುವ ಅಮೆರಿಕ ಏರ್ ಬೇಸ್ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿತ್ತು. ಆದರೆ ಈ ದಾಳಿಯಿಂದ ಹೆಚ್ಚಿನ ನಾಶ- ನಷ್ಟ ಆಗಿಲ್ಲ ಎಂದು ಕತಾರ್ ಸೇನಾಪಡೆ ಹೇಳಿಕೊಂಡಿದೆ. ಆದರೆ ಪಕ್ಕದ ರಾಷ್ಟ್ರದ ಮೇಲಿನ ದಾಳಿಯನ್ನು ಗಲ್ಫ್ ರಾಷ್ಟ್ರಗಳು ಖಂಡಿಸಿದ್ದು, ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಿವೆ. ಸೌದಿ ಅರೇಬಿಯಾ ಕೂಡ ಇರಾನ್ ನಡೆಗೆ ಆಕ್ಷೇಪ ಸೂಚಿಸಿದೆ.
Amid escalating tensions in West Asia, former U.S. President Donald Trump has announced a ceasefire between Iran and Israel through a post on his social media platform. This statement comes just hours after Iran launched a fresh missile attack on Tel Aviv early Tuesday morning, contradicting the idea of a truce.
19-10-25 07:00 pm
HK News Desk
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
MLA K.N. Rajanna: ರಸ್ತೆಯಲ್ಲಿ ನಮಾಜ್ ಮಾಡಲು ಮುಸ್...
18-10-25 09:11 pm
ಎಂಟು ದಿನಗಳಿಂದ ಲವರ್ ಜೊತೆಗೆ ರೂಮ್ ಮಾಡಿದ್ದ ಪುತ್ತೂ...
18-10-25 08:50 pm
ಅಳಂದ ಮತಗಳವು ಪ್ರಕರಣ ; ಬಿಜೆಪಿ ಮಾಜಿ ಶಾಸಕ ಗುತ್ತೇದ...
17-10-25 08:39 pm
18-10-25 07:34 pm
HK News Desk
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
19-10-25 07:19 pm
Mangalore Correspondent
ದಿನೇಶ್ ಮಟ್ಟುಗೆ ಕಾಂಗ್ರೆಸ್ ಸಿದ್ಧಾಂತ ಗೊತ್ತಿಲ್ಲ,...
18-10-25 11:01 pm
Kantara Controversy, Mangalore: ದೈವದ ಹೆಸರಲ್ಲಿ...
18-10-25 07:26 pm
Ullal, Someshwara, Pillar: ಸೋಮೇಶ್ವರ ಪಿಲಾರಿನಲ್...
17-10-25 09:36 pm
1971ರ ಭಾರತ - ಪಾಕ್ ಯುದ್ಧದಲ್ಲಿ ಹೆಲಿಕಾಪ್ಟರ್ ನಿಂದ...
16-10-25 10:37 pm
19-10-25 01:26 pm
Bangalore Correspondent
MSME Fraud, SBI Malikatte, Mangalore': ಕೇಂದ್ರ...
18-10-25 10:49 pm
Auto Driver Assaulted, Traffic Police in Putt...
18-10-25 03:48 pm
Fake Gold Scam, Belthangady Anugraha Society:...
18-10-25 03:27 pm
Illegal Arms Case, Mahesh Shetty Timarodi: ಅಕ...
18-10-25 01:52 pm