ಬ್ರೇಕಿಂಗ್ ನ್ಯೂಸ್
23-12-20 08:51 pm Headline Karnataka News Network ದೇಶ - ವಿದೇಶ
ಇಸ್ಲಮಾಬಾದ್, ಡಿ.23: ಪಾಕಿಸ್ತಾನದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಜೊತೆಗೆ ಹಣದುಬ್ಬರವೂ ಏರಿಕೆಯಾಗಿದ್ದು, ಅಲ್ಲಿ ನಿತ್ಯವಸ್ತುಗಳ ಬೆಲೆ ಗಗನಕ್ಕೇರಿದೆ.
ಅಲ್ಲಿನ ಪರಿಸ್ಥಿತಿ ಎಲ್ಲಿಗೆ ಮುಟ್ಟಿದೆ ಅಂದ್ರೆ, ಕೋಳಿ ಮೊಟ್ಟೆಯ ದರ 30 ರೂಪಾಯಿ ಆಗಿದೆ. ಮೊಟ್ಟೆ ಸಾಮಾನ್ಯವಾಗಿ ಅತಿ ಹೆಚ್ಚು ಬಳಕೆಯಾಗುವ ವಸ್ತು. ಆದರೆ, ಜನಸಾಮಾನ್ಯರು ಅಲ್ಲೀಗ ಮೊಟ್ಟೆ ಕೊಂಡು ತಿನ್ನುವ ಹಾಗಿಲ್ಲ. ಡಜನ್ ಮೊಟ್ಟೆಯನ್ನು ಕೊಳ್ಳುವುದಾದರೆ 240 ರೂ.ಗೆ ನೀಡಲಾಗುತ್ತದೆ. ಒಂದು ಮೊಟ್ಟೆ ಖರೀದಿಸಲು ಬಂದರೆ 30 ರೂಪಾಯಿ ನೀಡಬೇಕಾಗುತ್ತದೆ.
ಇನ್ನು ಕೋಳಿ ಮಾಂಸದ ದರವೂ ವಿಪರೀತವಾಗಿ ಏರಿಕೆಯಾಗಿದೆ. ಕೋಳಿ ಮಾಂಸ ಕೇಜಿಗೆ 300 ರೂ.ಗೆ ಏರಿದ್ದು ಚಳಿಗಾಲದಲ್ಲಿ ಮಾಂಸ ಪ್ರಿಯರು ಕೈಸುಟ್ಟುಕೊಂಡಿದ್ದಾರೆ. ಇದರ ಜೊತೆ ಶುಂಠಿಯ ದರವೂ ಭಾರೀ ಏರಿಕೆ ಕಂಡಿದೆ. ಶುಂಠಿಗೆ ಕೇಜಿಗೆ ಒಂದು ಸಾವಿರಕ್ಕಿಂತಲೂ ಹೆಚ್ಚು ಬೆಲೆಯಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಪಾಕಿಸ್ತಾನದ ಜನರು ಮೊಟ್ಟೆ ಮತ್ತು ಶುಂಠಿಯನ್ನು ಹೆಚ್ಚಾಗಿ ಬಳಸುತ್ತಾರೆ. ಇದಲ್ಲದೆ ದಿನವಹಿ ಬಳಸುವ ಬಹುತೇಕ ವಸ್ತುಗಳ ದರವೂ ದುಪ್ಪಟ್ಟಾಗಿದೆ. ಸಕ್ಕರೆ ಬೆಲೆ ಕೇಜಿಗೆ 100 ರೂ. ಗಡಿ ದಾಟಿದ್ದರೆ, ಗೋಧಿ ಬೆಲೆ ಕೇಜಿಗೆ 60 ರೂ. ಆಗಿದೆ. ಗೋಧಿ ಹಿಟ್ಟಿನ ದರ ಇನ್ನಷ್ಟು ಹೆಚ್ಚಿರುವ ಬಗ್ಗೆ ಅಲ್ಲಿನ ವರದಿಗಳು ಹೇಳುತ್ತವೆ. ಪಾಕಿಸ್ತಾನದಲ್ಲಿ ಶೇ.25ರಿಂದ 30 ಪರ್ಸೆಂಟ್ ಜನರು ಬಡತನ ರೇಖೆಗಿಂತ ಕೆಳಗಿದ್ದು ಎರಡು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ.
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರಕಾರ ಆಡಳಿತಕ್ಕೆ ಬಂದ ಮೇಲೆ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎನ್ನಲಾಗುತ್ತಿದ್ದು, ದಿನವಹಿ ವಸ್ತುಗಳ ದರ ಗಗನಮುಖಿಯಾಗುತ್ತಿರುವುದು ಬಡಜನರ ಮೇಲೆ ಬರೆ ಎಳೆದಿದೆ. ಪಾಕಿಸ್ತಾನದ ಬಹುತೇಕ ರಾಜ್ಯಗಳಲ್ಲಿ ನಿತ್ಯಸಾಮಗ್ರಿಗಳ ದರ ಏರಿಕೆಯಾಗಿದ್ಯಂತೆ.
Various poultry products are getting dearer by the day. The rate of eggs reached Rs240 per dozen mark on Wednesday, breaking all the previous records of the increase in the price in winters.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
23-08-26 06:17 pm
HK News Staffer
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
ತಾಂತ್ರಿಕ ದೋಷದಿಂದ ದಾಖಲೆ ಸುಟ್ಟ ಆರೋಪ ; ಪುತ್ತೂರಿನ...
23-08-26 05:18 pm
ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್, ನಕಲಿ ಔಷಧ ಜಾಲ ಹಿ...
22-08-26 01:37 pm
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
23-08-26 05:20 pm
HK News Staffer
ಹೆತ್ತವರನ್ನು ಕೊಲ್ತೇನೆಂದು ಹೇಳಿ ಒಂಬತ್ತನೇ ಕ್ಲಾಸ್...
22-08-26 12:43 pm
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm