ಬ್ರೇಕಿಂಗ್ ನ್ಯೂಸ್
26-12-20 05:12 pm Headline Karnataka News Network ದೇಶ - ವಿದೇಶ
ನವದೆಹಲಿ, ಡಿ.26: ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೊಂಡು ಒಂದು ತಿಂಗಳು ಪೂರ್ತಿಯಾಗುತ್ತಿದ್ದು, 35ಕ್ಕೂ ಹೆಚ್ಚು ಮಂದಿಯನ್ನು ಹೊಸ ಕಾನೂನಿನಡಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಸರಕಾರ ಬಲವಂತದ ಮತಾಂತರದ ಹೆಸರಲ್ಲಿ ಲವ್ ಜಿಹಾದ್ ವಿರುದ್ಧ ನ.27ರಂದು ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತಂದಿತ್ತು. ಕಾನೂನು ಜಾರಿಯಾದ ಒಂದೇ ದಿನದಲ್ಲಿ ಬರೇಲಿ ಜಿಲ್ಲೆಯಲ್ಲಿ ಮೊದಲ ಕೇಸು ದಾಖಲಾಗಿತ್ತು. ಆನಂತರ ಸರಣಿಯಂತೆ ಕೇಸುಗಳು ದಾಖಲಾಗುತ್ತಿದ್ದು ಈವರೆಗೆ ಡಜನ್ ಗಿಂತಲೂ ಹೆಚ್ಚು ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ತಿಳಿದುಬರುತ್ತಿದೆ. ಇದೇ ವೇಳೆ, ಬಲವಂತದ ಮತಾಂತರದ ಪ್ರಕರಣಗಳಿಗೆ ಸಂಬಂಧಿಸಿ 35ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪೈಕಿ ಇಟಾ ಜಿಲ್ಲೆಯಲ್ಲಿ ಎಂಟು ಮಂದಿ ಬಂಧನ ಆಗಿದ್ದರೆ, ಸೀತಾಪುರ್ ಜಿಲ್ಲೆಯಲ್ಲಿ ಏಳು, ಗ್ರೇಟರ್ ನೋಯ್ಡಾದಲ್ಲಿ ನಾಲ್ಕು, ಶಹಜಾನ್ ಪುರ್ ಮತ್ತು ಆಜಂಘಡ್ ನಲ್ಲಿ ತಲಾ ಮೂರು, ಮೊರಾದಬಾದ್, ಬಿಜ್ನೋರ್, ಮುಜಾಫರ್ ನಗರ, ಕನ್ನೋಜ್ ಜಿಲ್ಲೆಯಲ್ಲಿ ತಲಾ ಎರಡು ಹಾಗೂ ಬರೇಲಿ ಮತ್ತು ಬರ್ದೋಯಿ ಜಿಲ್ಲೆಯಲ್ಲಿ ಒಬ್ಬೊಬ್ಬರನ್ನು ಬಂಧಿಸಲಾಗಿದೆ.
ಬರೇಲಿ ಜಿಲ್ಲೆಯ ಶರೀಫ್ ನಗರದಲ್ಲಿ ನಡೆದ ಮೊದಲ ಪ್ರಕರಣದಲ್ಲಿ 20 ವರ್ಷದ ಹಿಂದು ಯುವತಿಯನ್ನು 22 ವರ್ಷದ ಉವಾಷ್ ಅಹ್ಮದ್ ಎಂಬಾತ ಬಲವಂತದಿಂದ ಮದುವೆಯಾಗಿ, ಮತಾಂತರಿಸಿದ್ದ. ಗೆಳೆಯನಂತೆ ನಟಿಸಿ ತನ್ನ ಮಗಳನ್ನು ವಂಚಿಸಿದ್ದಾನೆ ಎಂದು ಆಕೆಯ ತಂದೆ ತುಕಾರಾಮ್ ರಾಥೋರ್ ದೂರು ನೀಡಿದ್ದರು. ಪೊಲೀಸರು ಡಿ.3ರಂದು ಹೊಸ ಕಾನೂನಿನಡಿ ಆರೋಪಿಯನ್ನು ಬಂಧಿಸಿದ್ದರು.
Going full steam, the Uttar Pradesh police have made more than one arrest a day since the controversial anti-conversion ordinance came into effect a month ago, having apprehended about 35 people so far.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 11:50 am
HK News Desk
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
14-11-25 11:16 am
Mangalore Correspondent
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm