ಬ್ರೇಕಿಂಗ್ ನ್ಯೂಸ್
26-12-20 06:10 pm Headline Karnataka News Network ದೇಶ - ವಿದೇಶ
ಭುವನೇಶ್ವರ್, ಡಿ.26: ನಿವೃತ್ತಿ ಅಂದರೆ ಕೆಲವರಿಗೆ ಹೊಸತನದ ಆರಂಭ ಎನ್ನುತ್ತಾರೆ. ಸುದೀರ್ಘ ಒಂದೇ ವೃತ್ತಿಯಲ್ಲಿದ್ದು ಆಬಳಿಕ ಹೊಸ ವೃತ್ತಿ ಕೈಗೊಳ್ಳಲು ಸಕಾಲ ಎನ್ನುವ ಮಾತನ್ನು ಕೆಲವರು ಹೇಳುತ್ತಾರೆ. ಒಡಿಶಾ ರಾಜ್ಯದ ಜಯಕಿಶೋರ್ ಪ್ರಧಾನ್ ಇದೇ ಧಾಟಿಗೆ ಸೇರಿದವರು. ತಮ್ಮ 64ರ ಹರೆಯದಲ್ಲಿ ಎಂಬಿಬಿಎಸ್ ಕಲಿಯಲು ಆರಂಭಿಸಿದ್ದಾರೆ.
ಹೌದು.. ಒಡಿಶಾ ರಾಜ್ಯದ ಬಾರ್ಘಾ ಜಿಲ್ಲೆಯ ನಿವಾಸಿ ಜಯಕಿಶೋರ್ ಪ್ರಧಾನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದಾರೆ. ಆದರೆ, ಸುದೀರ್ಘ ಬ್ಯಾಂಕ್ ಉದ್ಯೋಗದಲ್ಲಿದ್ದು ಅವರಿಗೆ ತಮ್ಮ ಕನಸು ಈಡೇರಿಸಲು ಆಗಿಲ್ಲವಂತೆ. ಹಾಗಾಗಿ ವೈದ್ಯನಾಗುವ ಕನಸು ಹೊತ್ತು ಎಂಬಿಬಿಎಸ್ ಕಲಿಯಲು ಮೆಡಿಕಲ್ ಕಾಲೇಜು ಸೇರಿದ್ದಾರೆ. ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಜಯಕಿಶೋರ್ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಪಡೆದಿದ್ದಾರೆ. ಬುರ್ಲಾದಲ್ಲಿರುವ ಸರಕಾರಿ ಅಧೀನದ ವೀರ್ ಸುರೇಂದರ್ ಸಾಯಿ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರೀಸರ್ಚ್ (ವಿಮ್ಸಾರ್) ಕಾಲೇಜಿನಲ್ಲಿ ಪ್ರಧಾನ್ ಮೆಡಿಕಲ್ ಸೀಟು ಪಡೆದಿದ್ದಾರೆ.
ನನಗೆ ಸಣ್ಣಂದಿನಲ್ಲೇ ವೈದ್ಯನಾಗುವ ಕನಸಿತ್ತು. ಇಂಟರ್ ಮೀಡಿಯೆಟ್ ಸೈನ್ಸ್ ಪೂರೈಸಿದ ಬಳಿಕ ಮೆಡಿಕೆಲ್ ಎಂಟ್ರೆನ್ಸ್ ಪರೀಕ್ಷೆ ಬರೆದಿದ್ದು ಅದರಲ್ಲಿ ಫೈಲ್ ಆಗಿದ್ದೆ. ಬಳಿಕ ಬಿಎಸ್ಸಿ ಪದವಿ ಗಳಿಸಿ, ಸ್ಥಳೀಯ ಶಾಲೆ ಒಂದರಲ್ಲಿ ಶಿಕ್ಷಕನಾಗಿ ಸೇರಿಕೊಂಡಿದ್ದೆ. ನಂತರ ಇಂಡಿಯನ್ ಬ್ಯಾಂಕಿನಲ್ಲಿ ಉದ್ಯೋಗ ಪಡೆದಿದ್ದೆ. 1983ರಲ್ಲಿ ಎಸ್ ಬಿಐನಲ್ಲಿ ನೌಕರಿ ಪಡೆದು ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ. ಆದರೆ, ಮೆಡಿಕಲ್ ಕಲಿಯಬೇಕೆಂಬ ಆಸೆ ಈಡೇರಿರಲಿಲ್ಲ.

2016ರಲ್ಲಿ ಬ್ಯಾಂಕಿನಿಂದ ರಿಟೈರ್ ಆದ ಕೂಡಲೇ ಮೆಡಿಕಲ್ ಎಕ್ಸಾಂ ಬರೆಯಲು ಸಿದ್ಧತೆ ನಡೆಸಿದ್ದೆ. ಈ ಬಾರಿ ಮೆಡಿಕಲ್ ಎಕ್ಸಾಂ ಬರೆದು ಪಾಸಾಗಿದ್ದೇನೆ. ನಾನು ಡಾಕ್ಟರ್ ಕಲಿತು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕೆಂಬ ಕನಸು ಹೊಂದಿದ್ದೇನೆ ಎಂದು ಜಯಕಿಶೋರ್ ಹೇಳಿದ್ದಾರೆ.
2018ರಲ್ಲಿ 25 ವರ್ಷಕ್ಕಿಂತ ಮೇಲ್ಪಟ್ಟವರು ಕೂಡ ನೀಟ್ ಪರೀಕ್ಷೆ ಬರೆಯಬಹುದು ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿತ್ತು. ಅದರಂತೆ ಜಯಕಿಶೋರ್ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ. ಅಂದಹಾಗೆ, 64 ವರ್ಷದ ಜಯಕಿಶೋರ್ ಪ್ರಧಾನ್ ಅವರಿಗೆ ಮೂವರು ಮಕ್ಕಳು. ಇಬ್ಬರು ಅವಳಿ ಹುಡುಗಿಯರು ಮತ್ತು ಒಬ್ಬ ಮಗ. ಒಬ್ಬಳು ಮಗಳು ಈಗ ಬಿಡಿಎಸ್ ಓದುತ್ತಿದ್ದರೆ, ಮತ್ತೊಬ್ಬಳು ಹುಡುಗಿ ಬಿಡಿಎಸ್ ಓದುತ್ತಿದ್ದಾಗಲೇ ಕಳೆದ ನವೆಂಬರ್ ನಲ್ಲಿ ಅನಾರೋಗ್ಯದಿಂದ ತೀರಿಕೊಂಡಿದ್ದಳು. ಇನ್ನೊಬ್ಬ ಮಗ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ.
64 ವರ್ಷದಲ್ಲಿ ಎಂಬಿಬಿಎಸ್ ಕಲಿಯಲು ತೊಡಗುತ್ತಿರುವುದು ಅಪರೂಪದಲ್ಲಿ ಅಪರೂಪ. ಇಂಥ ನಿದರ್ಶನ ದೇಶದಲ್ಲಿ ಇದೇ ಮೊದಲು ಎಂದು ಅನಿಸ್ತಾ ಇದೆ ಎಂದು ಸರ್ಜರಿ ಸ್ಪೆಷಲಿಸ್ಟ್ ಆಗಿ ರಿಟೈರ್ ಆಗಿರುವ ಬಿಕಾಸ್ ಹೋತಾ ಹೇಳುತ್ತಾರೆ.
After 40 years of gruelling job and raising children, a sexagenarian is probably more inclined to spend times with grandchildren, play cards, get immersed in gardening or visit close relatives more frequently than before. However, a 64-year-old retired banker from Odisha has a different idea.
04-12-25 05:36 pm
HK News Desk
Bagalakote Accident, Four Killed: ಬಾಗಲಕೋಟೆ ;...
03-12-25 03:01 pm
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
04-12-25 05:39 pm
HK News Desk
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
05-12-25 12:24 pm
Mangalore Correspondent
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
ಎಐಸಿಸಿ ಸೆಕ್ರಟರಿ ವೇಣುಗೋಪಾಲ್ ಎದುರಲ್ಲಿ ಡಿಕೆ ಘೋಷಣ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
ಅಜ್ಜನ ಕೈಹಿಡಿದು ಹೆದ್ದಾರಿ ದಾಟಿ ತಿಂಡಿಗೆ ಹೋಗಿದ್ದ...
04-12-25 12:38 pm
04-12-25 11:15 pm
Mangalore Correspondent
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm
ಬೆಂಗಳೂರು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ; ರಕ್ತಚ...
04-12-25 04:18 pm
ಹೊಸ ವರ್ಷದ ಸಂಭ್ರಮಾಚರಣೆಗೆ ಡ್ರಗ್ಸ್ ಮಾರಾಟ ಮಾಡಲು ಸ...
03-12-25 01:41 pm
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm