ಬ್ರೇಕಿಂಗ್ ನ್ಯೂಸ್
 
            
                        31-10-25 12:55 pm HK News Desk ಕ್ರೈಂ
 
            ಮುಂಬೈ, ಅ.31 : ದೇಶದ ವಾಣಿಜ್ಯ ನಗರಿ ಮುಂಬೈನ ಪೊವಾಯಿ ಪಪ್ರದೇಶದಲ್ಲಿರುವ 'ಆರ್ಎ ಸ್ಪುಡಿಯೊ'ದಲ್ಲಿ ವ್ಯಕ್ತಿಯೊಬ್ಬ ಒತ್ತೆಯಾಗಿರಿಸಿದ್ದ 17 ಮಕ್ಕಳು ಹಾಗೂ ಇಬ್ಬರು ವಯಸ್ಕರನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಪಾರು ಮಾಡಿಸಿದ್ದಾರೆ. ಕ್ವಿಕ್ ರೆಸ್ಪಾನ್ಸ್ ಟೀಮ್ ಮತ್ತು ಇತರ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿ ರೋಹಿತ್ ಆರ್ಯ (50) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ. ರೋಹಿತ್ ಆರ್ಯ, ವೆಬ್ ಸಿರೀಸ್ ಗೆ ಆಡಿಷನ್ ನಡೆಸುವುದಾಗಿ ಹೇಳಿ ನಾಲ್ಕು ದಿನಗಳಲ್ಲಿ ಸುಮಾರು 100 ಮಕ್ಕಳನ್ನು ಸ್ಪುಡಿಯೋಗೆ ಕರೆಸಿಕೊಂಡಿದ್ದ. ಅದರಲ್ಲಿ 83 ಮಕ್ಕಳನ್ನು ಮನೆಗೆ ಕಳುಹಿಸಿ, ಉಳಿದ 17 ಮಕ್ಕಳು ಹಾಗೂ ಇತರ ಇಬ್ಬರು ವಯಸ್ಕರನ್ನು ಒತ್ತೆಯಾಗಿರಿಸಿಕೊಂಡಿದ್ದ. ಈತನ ವಶದಲ್ಲಿದ್ದ ಮಕ್ಕಳು 8 ರಿಂದ 15 ವರ್ಷದೊಳಗಿನವರಾಗಿದ್ದು ಅವರೆಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಿ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಕಾರ್ಯಾಚರಣೆ ನಡೆಸಿದ್ದು ಹೇಗೆ?
ಗುರುವಾರ ಮಧ್ಯಾಹ್ನ 1.45 ಗಂಟೆ ಸುಮಾರಿಗೆ ಪೊವೈ ಪೊಲೀಸ್ ಠಾಣೆಗೆ ಫೋನ್ ಕರೆ ಬಂದಿತ್ತು. ''ವ್ಯಕ್ತಿಯೊಬ್ಬ ಮಹಾವೀರ್ ಕ್ಲಾಸಿಕ್ ಬಿಲ್ಡಿಂಗ್ ನಲ್ಲಿರುವ ಆರ್ಎ ಸ್ಟುಡಿಯೊದಲ್ಲಿ ಮಕ್ಕಳನ್ನು ಒತ್ತೆಯಾಗಿಸಿದ್ದಾನೆ" ಎಂದು ಕರೆ ಮಾಡಿದ್ದ ವ್ಯಕ್ತಿ ನೀಡಿದ್ದ. ತಕ್ಷಣವೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಪೊಲೀಸರು ಸಂಧಾನ ನಡೆಸಿದರೂ ಮಕ್ಕಳ ಬಿಡುಗಡೆಗೆ ರೋಹಿತ್ ಒಪ್ಪಲಿಲ್ಲ, ಆಗ ಪೊಲೀಸರು ಅಗ್ನಿಶಾಮಕ ದಳದ ಏಣಿ ಮೂಲಕ ಮೊದಲ ಮಹಡಿಯಲ್ಲಿದ್ದ ಸ್ಪುಡಿಯೋವನ್ನು ಬಾತ್ ರೂಮ್ ಮೂಲಕ ಪ್ರವೇಶಿಸಿದ್ದಾರೆ. ಈ ವೇಳೆ ರೋಹಿತ್ ಆರ್ಯ ತನ್ನ ಕೈಲಿದ್ದ ಗನ್ ಮೂಲಕ ಪೊಲೀಸರತ್ತ ಗುಂಡು ಹಾರಿಸಿದ್ದಾನೆ. ಪೊಲೀಸರು ಪ್ರತಿ ದಾಳಿ ನಡೆಸಿದಾಗ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬಳಿಕ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನ್ನಪ್ಪಿದ್ದಾನೆ.
 
            
            
            A tense drama unfolded in Mumbai’s Powai area on Thursday when police rescued 17 children and two adults who had been held hostage inside the RA Studio by a man claiming to be a casting director for a web series. The suspect was shot by police during a rescue operation and later died in the hospital.
 
    
            
             31-10-25 06:02 pm
                        
            
                  
                Bangalore Correspondent    
            
                    
 
    ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    ಸಿದ್ದರಾಮಯ್ಯ ಅವರೇ ಐದು ವರ್ಷಗಳಿಗೆ ಮುಖ್ಯಮಂತ್ರಿಯೆಂ...
30-10-25 04:34 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             31-10-25 03:05 pm
                        
            
                  
                Mangalore Correspondent    
            
                    
 
    ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
 
    ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
 
    ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
 
    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮದುವೆಗೆ ಬರುತ್ತಿದ್ದ ಟೆ...
30-10-25 03:23 pm
 
    
            
             31-10-25 12:55 pm
                        
            
                  
                HK News Desk    
            
                    
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
 
    ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm