ಬ್ರೇಕಿಂಗ್ ನ್ಯೂಸ್
29-10-25 02:33 pm Mangalore Correspondent ಕ್ರೈಂ
ಪುತ್ತೂರು, ಅ.29 : ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ವಂಚನೆ ನಡೆಸಿರುವ ವ್ಯಕ್ತಿಯೊಬ್ಬನ ವಿರುದ್ಧ ಮೂರ್ತೆದಾರರ ಸಹಕಾರಿ ಸಂಘ, ಪಡೀಲ್ ಪುತ್ತೂರು ಇದರ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಸವಿತಾ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ವಿವಿಧ ದಿನಗಳಲ್ಲಿ ಒಟ್ಟು 101 ಗ್ರಾಮ್ ನಕಲಿ ಚಿನ್ನವನ್ನು ಅಡವಿಟ್ಟು 6 ಲಕ್ಷಕ್ಕೂ ಅಧಿಕ ಸಾಲ ಪಡೆದು ವಂಚಿಸಿದ್ದಾಗಿ ತಿಳಿಸಿದ್ದಾರೆ.
ಆಗಸ್ಟ್ 5ರಂದು ವಿನೋದ್ ಎಂಬಾತ 32 ಗ್ರಾಮ್ ಚಿನ್ನದ ಸರವನ್ನು ತಂದಿದ್ದು ಸರಾಫ ಶ್ರೀನಿವಾಸ ಆಚಾರ್ಯ ಪರಿಶೀಲಿಸಿದ ಬಳಿಕ ಎರಡು ಲಕ್ಷ ರೂ. ಸಾಲ ನೀಡಲಾಗಿತ್ತು. ಆನಂತರ, ಮರುದಿನ ಆಗಸ್ಟ್ 6ರಂದು 17 ಗ್ರಾಮ್ ತೂಕದ ಚಿನ್ನದ ನೆಕ್ಲೆಸ್ ತಂದಿದ್ದು, ಸರಾಫರ ಪರಿಶೀಲನೆ ಬಳಿಕ 1.10 ಲಕ್ಷ ರೂ. ಸಾಲ ನೀಡಲಾಗಿತ್ತು.
ಆಗಸ್ಟ್ 26ರಂದು ಇದೇ ವ್ಯಕ್ತಿ ಒಂದು ಚೈನ್ ಮತ್ತು ಎರಡು ಬ್ರಾಸ್ಲೇಟ್ ಸೇರಿ 52 ಗ್ರಾಮ್ ತೂಕದ ಚಿನ್ನವನ್ನು ಅಡಮಾನ ಇರಿಸಲು ಬಂದಿದ್ದು ಸರಾಫ ಶ್ರೀನಿವಾಸ ಆಚಾರ್ಯ ಪರಿಶೀಲನೆ ಬಳಿಕ ಸೊಸೈಟಿಯಿಂದ 1.10 ಲಕ್ಷ ರೂ. ಸಾಲ ನೀಡಲಾಗಿತ್ತು. ಸೆ.4ರಂದು ಆರೋಪಿ ವಿನೋದ್ ಶಾಖೆಗೆ ಬಂದಿದ್ದು, ಆಗಸ್ಟ್ 5ರಂದು ಇಟ್ಟಿದ್ದ ಬಂಗಾರವನ್ನು ಬಿಡಿಸಲು ಎರಡು ಲಕ್ಷ ಅಸಲಿ ಮೊತ್ತ ಮತ್ತು ಬಡ್ಡಿ ಮೊತ್ತವನ್ನು ಪಾವತಿಸಿದ್ದಾನೆ. ಆನಂತರ, ಅದೇ ಬಂಗಾರವನ್ನು ಮರಳಿ ಅಡವಿಟ್ಟು 2.10 ಲಕ್ಷ ಸಾಲ ಪಡೆದಿದ್ದಾನೆ.
ಈ ನಡುವೆ, ಅ.17ರಂದು ಆರೋಪಿ ವಿನೋದ್ ಬೇರೆ ಸಹಕಾರಿ ಬ್ಯಾಂಕುಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ತೆಗೆದಿರುವ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಬಂದಿರುವುದನ್ನು ನೋಡಿ, ನಮ್ಮ ಶಾಖೆಯಲ್ಲಿ ಇಟ್ಟಿರುವ ಚಿನ್ನವನ್ನು ಪುತ್ತೂರಿನ ಬಾಲಾಜಿ ಎಂಟರ್ ಪ್ರೈಸಸ್ ನಲ್ಲಿ ಪರಿಶೀಲನೆ ನಡೆಸಿದಾಗ ವಿವಿಧ ದಿನಗಳಲ್ಲಿ ಅಡಮಾನ ಇರಿಸಿರುವ 101.580 ಗ್ರಾಮ್ ತೂಕದ ಚಿನ್ನ ನಕಲಿ ಎಂದು ತಿಳಿದುಬಂದಿರುತ್ತದೆ ಎಂದು ದೂರು ನೀಡಿದ್ದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A case has been registered against a man who allegedly pledged fake gold ornaments to obtain loans from the Murthydarara Co-operative Society, Padil, Puttur. The society’s acting manager, Savitha, has lodged a formal complaint at the Puttur City Police Station.
10-12-25 09:40 pm
HK News Desk
ಬೆಂಗಳೂರಿನಲ್ಲಿ ರಸ್ತೆ ಅಪಘಾತ ; ಆರು ತಿಂಗಳ ಹಿಂದಷ್ಟ...
10-12-25 05:37 pm
ಅಧಿಕಾರ ಹಂಚಿಕೆ ಬಗ್ಗೆ ಗೊಂದಲ ; ಯಾರೂ ಆ ಬಗ್ಗೆ ಮಾತನ...
10-12-25 12:58 pm
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ; ಹೊಟೇಲುಗಳ ಸಂಘ...
09-12-25 08:56 pm
ಶಾಲಾ ಬಸ್ಸಿನಡಿಗೆ ಬಿದ್ದು ಎಂಟು ವರ್ಷದ ಬಾಲಕಿ ದುರಂತ...
09-12-25 08:53 pm
10-12-25 11:13 pm
HK News Desk
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
ಭಾರತೀಯರಿಗೆ ಸಂತಸದ ಸುದ್ದಿ ; ಯುನೆಸ್ಕೋ ಪಟ್ಟಿಗೆ ದೀ...
10-12-25 01:17 pm
ಮಾಜಿ ಸಿಜೆಐ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿ...
09-12-25 11:03 pm
Goa Fire Accident, 23 dead: ಗೋವಾದ ನೈಟ್ಕ್ಲಬ್...
07-12-25 02:04 pm
10-12-25 11:04 pm
Mangalore Correspondent
ಮಂಗಳೂರಿನಲ್ಲಿ ಆರು ತಿಂಗಳಿನಿಂದ ಡ್ರಗ್ಸ್ ಬೇಟೆ ; ಕಾ...
10-12-25 10:51 pm
Bharath Kumdel, Instagram, Target Group: ಭರತ್...
10-12-25 08:45 pm
“Board Exams Made Easier: AI Shikshak Breaks...
10-12-25 06:01 pm
Mangalore Accident, Gowjee Events owner Death...
10-12-25 04:00 pm
10-12-25 10:14 pm
Udupi Correspondent
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am
ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರ...
08-12-25 09:29 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm