ಬ್ರೇಕಿಂಗ್ ನ್ಯೂಸ್
07-11-25 05:21 pm HK News Desk ದೇಶ - ವಿದೇಶ
ತಿರುವನಂತಪುರಂ, ನ.7 : ಎರಡನೇ ಮದುವೆಯನ್ನು ರಿಜಿಸ್ಟರ್ ಮಾಡಲು ನಿರಾಕರಿಸಿದ ಸ್ಥಳೀಯಾಡಳಿತದ ನಿರ್ಧಾರವನ್ನು ಎತ್ತಿಹಿಡಿದಿರುವ ಕೇರಳ ಹೈಕೋರ್ಟ್, ಮುಸ್ಲಿಂ ವ್ಯಕ್ತಿಯೊಬ್ಬರನ್ನು ಉದ್ದೇಶಿಸಿ ಧರ್ಮದ ಪ್ರಾಶಸ್ತ್ಯ ಎರಡನೇಯದ್ದು. ಈ ದೇಶದಲ್ಲಿ ಸಂವಿಧಾನಕ್ಕೇ ಮೊದಲ ಪ್ರಾಶಸ್ತ್ಯ ಎಂದು ಹೇಳಿದೆ.
ಕಣ್ಣೂರಿನ 44 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮೊದಲ ಮದುವೆಯನ್ನು ರಿಜಿಸ್ಟರ್ ಮಾಡಿದ್ದು 2017ರಲ್ಲಿ ಎರಡನೇ ಮದುವೆಯಾಗಿದ್ದ. ಎರಡನೇ ಪತ್ನಿಗೆ ಮತ್ತೆರಡು ಮಕ್ಕಳಾಗಿತ್ತು. ಗಂಡನ ಆಸ್ತಿಯಲ್ಲಿ ಪತ್ನಿ ಮತ್ತು ಮಕ್ಕಳಿಗೆ ಸಮಾನ ಹಕ್ಕು ಪಡೆಯುವುದಕ್ಕಾಗಿ ಕಾನೂನು ಪ್ರಕಾರ, ಮದುವೆ ರಿಜಿಸ್ಟರ್ ಆಗಿರಬೇಕಾಗುತ್ತದೆ. ಇದರಂತೆ, ಸ್ಥಳೀಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಎರಡನೇ ಮದುವೆಯನ್ನು ನೋಂದಣಿ ಮಾಡಲು ಅರ್ಜಿ ಸಲ್ಲಿಸಿದ್ದರು. ಆದರೆ ನೋಂದಣಾಧಿಕಾರಿ ಎರಡನೇ ಮದುವೆಯ ನೋಂದಣಿಗೆ ಕಾನೂನು ಪ್ರಕಾರ ನಿರಾಕರಿಸಿದ್ದರು.
ನಿರಾಕರಣೆಯನ್ನು ಪ್ರಶ್ನಿಸಿ ದಂಪತಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಧೀಶ ಪಿ.ವಿ.ಕುಂಞಕೃಷ್ಣನ್ ಅರ್ಜಿಯನ್ನು ವಜಾ ಮಾಡಿದ್ದಲ್ಲದೆ, ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಎರಡನೇ ಮದುವೆಗೆ ಅವಕಾಶ ಇರಬಹುದು. ಆದರೆ ಎರಡನೇ ಮದುವೆಯನ್ನು ನೋಂದಣಿ ಮಾಡಬೇಕೆಂದಿದ್ದರೆ ಅದಕ್ಕೆ ಈ ನೆಲದ ಕಾನೂನು ಒಪ್ಪಬೇಕು. ಆಗ ಮೊದಲ ಪತ್ನಿಯ ಅವಶ್ಯಕತೆ ಪ್ರಶ್ನೆ ಬರುತ್ತದೆ.
ಇಂತಹ ಸಂದರ್ಭದಲ್ಲಿ ಧರ್ಮದ ಪ್ರಾಶಸ್ತ್ಯ ಸೆಕಂಡರಿಯಾಗುತ್ತದೆ, ಸಂವಿಧಾನ ಕೊಟ್ಟಿರುವ ಕಾನೂನೇ ಧರ್ಮಕ್ಕಿಂತ ಮಿಗಿಲಾಗುತ್ತದೆ. ಇದೊಂದು ರೀತಿಯಲ್ಲಿ ನೈಸರ್ಗಿಕ ನ್ಯಾಯದ ಮೂಲಭೂತ ತತ್ವವಾಗಿರುತ್ತದೆ. ನ್ಯಾಯಾಲಯ ಯಾವುದೇ ವ್ಯಕ್ತಿಯ ಭಾವನೆಯನ್ನು ತಳ್ಳಿಹಾಕಲಾಗದು. ಇಲ್ಲಿ ಎರಡನೇ ಮದುವೆಯನ್ನು ನೋಂದಣಿ ಮಾಡುವ ಸಂದರ್ಭದಲ್ಲಿ ಮೊದಲ ಪತ್ನಿಯ ಭಾವನೆಯು ಮುಖ್ಯವಾಗುತ್ತದೆ.
ಧರ್ಮ ಗ್ರಂಥ ಕುರಾನ್ ಅಥವಾ ವೈಯಕ್ತಿಕ ಕಾನೂನು ಮಂಡಳಿ ಮೊದಲ ಪತ್ನಿ ಇರುವಾಗ ಇನ್ನೊಬ್ಬಳ ಜೊತೆಗೆ ಸಂಬಂಧ ಹೊಂದುವುದನ್ನು, ಎರಡನೇ ಪತ್ನಿಯನ್ನು ಇರಿಸಿಕೊಳ್ಳುವುದನ್ನು ಒಪ್ಪುತ್ತದೆಯೇ ಎಂದು ನಂಗನಿಸುತ್ತಿಲ್ಲ. ಎಲ್ಲರಿಗೂ ನ್ಯಾಯ ದೊರಕಿಸುವುದು, ವೈವಾಹಿಕ ಸಂಬಂಧಗಳಲ್ಲಿ ಸಮಾನತೆ ಕಾಯ್ದುಕೊಳ್ಳುವುದನ್ನು ಕುರಾನ್ ಹೇಳುತ್ತದೆ ಎನ್ನುವುದು ನನ್ನ ಭಾವನೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಇದಲ್ಲದೆ, ಇಂತಹ ಪ್ರಕರಣಗಳಲ್ಲಿ ಮೊದಲ ಪತ್ನಿ ಕೇವಲ ಮೂಕಪ್ರೇಕ್ಷಕನಾಗಿ ಇರಬೇಕೆಂದು ಹೇಳುವುದಿಲ್ಲ. ಗಂಡ ಎರಡನೇ ಮದುವೆಯನ್ನು ನೋಂದಣಿ ಮಾಡುವ ಸಂದರ್ಭದಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶ ಇರುತ್ತದೆ. ನೋಂದಣಿಗೆ ಅರ್ಜಿ ಹಾಕುವಾಗಲೇ ನೋಂದಣಾಧಿಕಾರಿ, ಮೊದಲ ಪತ್ನಿ ಜೀವಂತ ಇದ್ದರೆ ಆಕೆಗೆ ನೋಟೀಸ್ ಮಾಡಿ ಅಹವಾಲು ಕೇಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
The Kerala High Court has upheld a local authority’s decision to refuse registration of a Muslim man’s second marriage, emphasizing that in India, the Constitution holds primacy over religion.
17-02-26 10:33 pm
HK News Desk
Mohan Das Pai: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾ...
17-02-26 09:12 pm
ಫೇಲಾದವರನ್ನು ಪಾಸು ಮಾಡುವುದೇ ತಪ್ಪು ; ಕೇರಳದಲ್ಲಿ ಶ...
17-02-26 08:56 pm
ಕಾಪಿರೈಟ್ ಕದನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ...
17-02-26 02:53 pm
ದಂಪತಿಗೆ ಎರಡನೇ ಪ್ರೆಗ್ನೆನ್ಸಿ ಫೋಟೋಶೂಟ್ ಸಡಗರ ; ಮೂ...
15-02-26 10:38 pm
17-02-26 08:50 pm
HK Desk
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
17-02-26 12:42 pm
Mangaluru Staffer
Mangalore Ullal Accident: ಉಳ್ಳಾಲ ; ಅತಿ ವೇಗದಿಂ...
16-02-26 11:13 pm
ಬಿಕರ್ನಕಟ್ಟೆ ಸರ್ಕಾರಿ ಶಾಲೆಯಲ್ಲಿ ರಂಗಮಂಟಪ ಲೋಕಾರ್ಪ...
16-02-26 11:06 pm
ಹಂಪಿಯ ಮರ್ಯಾದೆ ಹರಾಜು ಹಾಕಿದ್ದ ಪ್ರಕರಣ ; ಪ್ರವಾಸಿ...
16-02-26 11:02 pm
Thokottu Accident, Mangalore: ಖಾಸಗಿ ಶಾಲಾ ಬಸ್ಸ...
16-02-26 09:33 am
17-02-26 03:03 pm
HK News Desk
ದಾವಣಗೆರೆ ಬೆನ್ನಲ್ಲೇ ಮಂಗಳೂರು ಕೋರ್ಟಿಗೂ ಬೆದರಿಕೆ ಸ...
16-02-26 04:01 pm
Manish kottary, Marriage Fraud, Mangalore: ಮ್...
15-02-26 05:08 pm
ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗ...
14-02-26 10:47 pm
Indian Bank Gold Robbery, Bangalore: ಬೆಂಗಳೂರು...
14-02-26 07:37 pm