ಬ್ರೇಕಿಂಗ್ ನ್ಯೂಸ್
07-11-25 05:21 pm HK News Desk ದೇಶ - ವಿದೇಶ
ತಿರುವನಂತಪುರಂ, ನ.7 : ಎರಡನೇ ಮದುವೆಯನ್ನು ರಿಜಿಸ್ಟರ್ ಮಾಡಲು ನಿರಾಕರಿಸಿದ ಸ್ಥಳೀಯಾಡಳಿತದ ನಿರ್ಧಾರವನ್ನು ಎತ್ತಿಹಿಡಿದಿರುವ ಕೇರಳ ಹೈಕೋರ್ಟ್, ಮುಸ್ಲಿಂ ವ್ಯಕ್ತಿಯೊಬ್ಬರನ್ನು ಉದ್ದೇಶಿಸಿ ಧರ್ಮದ ಪ್ರಾಶಸ್ತ್ಯ ಎರಡನೇಯದ್ದು. ಈ ದೇಶದಲ್ಲಿ ಸಂವಿಧಾನಕ್ಕೇ ಮೊದಲ ಪ್ರಾಶಸ್ತ್ಯ ಎಂದು ಹೇಳಿದೆ.
ಕಣ್ಣೂರಿನ 44 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮೊದಲ ಮದುವೆಯನ್ನು ರಿಜಿಸ್ಟರ್ ಮಾಡಿದ್ದು 2017ರಲ್ಲಿ ಎರಡನೇ ಮದುವೆಯಾಗಿದ್ದ. ಎರಡನೇ ಪತ್ನಿಗೆ ಮತ್ತೆರಡು ಮಕ್ಕಳಾಗಿತ್ತು. ಗಂಡನ ಆಸ್ತಿಯಲ್ಲಿ ಪತ್ನಿ ಮತ್ತು ಮಕ್ಕಳಿಗೆ ಸಮಾನ ಹಕ್ಕು ಪಡೆಯುವುದಕ್ಕಾಗಿ ಕಾನೂನು ಪ್ರಕಾರ, ಮದುವೆ ರಿಜಿಸ್ಟರ್ ಆಗಿರಬೇಕಾಗುತ್ತದೆ. ಇದರಂತೆ, ಸ್ಥಳೀಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಎರಡನೇ ಮದುವೆಯನ್ನು ನೋಂದಣಿ ಮಾಡಲು ಅರ್ಜಿ ಸಲ್ಲಿಸಿದ್ದರು. ಆದರೆ ನೋಂದಣಾಧಿಕಾರಿ ಎರಡನೇ ಮದುವೆಯ ನೋಂದಣಿಗೆ ಕಾನೂನು ಪ್ರಕಾರ ನಿರಾಕರಿಸಿದ್ದರು.
ನಿರಾಕರಣೆಯನ್ನು ಪ್ರಶ್ನಿಸಿ ದಂಪತಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಧೀಶ ಪಿ.ವಿ.ಕುಂಞಕೃಷ್ಣನ್ ಅರ್ಜಿಯನ್ನು ವಜಾ ಮಾಡಿದ್ದಲ್ಲದೆ, ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಎರಡನೇ ಮದುವೆಗೆ ಅವಕಾಶ ಇರಬಹುದು. ಆದರೆ ಎರಡನೇ ಮದುವೆಯನ್ನು ನೋಂದಣಿ ಮಾಡಬೇಕೆಂದಿದ್ದರೆ ಅದಕ್ಕೆ ಈ ನೆಲದ ಕಾನೂನು ಒಪ್ಪಬೇಕು. ಆಗ ಮೊದಲ ಪತ್ನಿಯ ಅವಶ್ಯಕತೆ ಪ್ರಶ್ನೆ ಬರುತ್ತದೆ.
ಇಂತಹ ಸಂದರ್ಭದಲ್ಲಿ ಧರ್ಮದ ಪ್ರಾಶಸ್ತ್ಯ ಸೆಕಂಡರಿಯಾಗುತ್ತದೆ, ಸಂವಿಧಾನ ಕೊಟ್ಟಿರುವ ಕಾನೂನೇ ಧರ್ಮಕ್ಕಿಂತ ಮಿಗಿಲಾಗುತ್ತದೆ. ಇದೊಂದು ರೀತಿಯಲ್ಲಿ ನೈಸರ್ಗಿಕ ನ್ಯಾಯದ ಮೂಲಭೂತ ತತ್ವವಾಗಿರುತ್ತದೆ. ನ್ಯಾಯಾಲಯ ಯಾವುದೇ ವ್ಯಕ್ತಿಯ ಭಾವನೆಯನ್ನು ತಳ್ಳಿಹಾಕಲಾಗದು. ಇಲ್ಲಿ ಎರಡನೇ ಮದುವೆಯನ್ನು ನೋಂದಣಿ ಮಾಡುವ ಸಂದರ್ಭದಲ್ಲಿ ಮೊದಲ ಪತ್ನಿಯ ಭಾವನೆಯು ಮುಖ್ಯವಾಗುತ್ತದೆ.
ಧರ್ಮ ಗ್ರಂಥ ಕುರಾನ್ ಅಥವಾ ವೈಯಕ್ತಿಕ ಕಾನೂನು ಮಂಡಳಿ ಮೊದಲ ಪತ್ನಿ ಇರುವಾಗ ಇನ್ನೊಬ್ಬಳ ಜೊತೆಗೆ ಸಂಬಂಧ ಹೊಂದುವುದನ್ನು, ಎರಡನೇ ಪತ್ನಿಯನ್ನು ಇರಿಸಿಕೊಳ್ಳುವುದನ್ನು ಒಪ್ಪುತ್ತದೆಯೇ ಎಂದು ನಂಗನಿಸುತ್ತಿಲ್ಲ. ಎಲ್ಲರಿಗೂ ನ್ಯಾಯ ದೊರಕಿಸುವುದು, ವೈವಾಹಿಕ ಸಂಬಂಧಗಳಲ್ಲಿ ಸಮಾನತೆ ಕಾಯ್ದುಕೊಳ್ಳುವುದನ್ನು ಕುರಾನ್ ಹೇಳುತ್ತದೆ ಎನ್ನುವುದು ನನ್ನ ಭಾವನೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಇದಲ್ಲದೆ, ಇಂತಹ ಪ್ರಕರಣಗಳಲ್ಲಿ ಮೊದಲ ಪತ್ನಿ ಕೇವಲ ಮೂಕಪ್ರೇಕ್ಷಕನಾಗಿ ಇರಬೇಕೆಂದು ಹೇಳುವುದಿಲ್ಲ. ಗಂಡ ಎರಡನೇ ಮದುವೆಯನ್ನು ನೋಂದಣಿ ಮಾಡುವ ಸಂದರ್ಭದಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶ ಇರುತ್ತದೆ. ನೋಂದಣಿಗೆ ಅರ್ಜಿ ಹಾಕುವಾಗಲೇ ನೋಂದಣಾಧಿಕಾರಿ, ಮೊದಲ ಪತ್ನಿ ಜೀವಂತ ಇದ್ದರೆ ಆಕೆಗೆ ನೋಟೀಸ್ ಮಾಡಿ ಅಹವಾಲು ಕೇಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
The Kerala High Court has upheld a local authority’s decision to refuse registration of a Muslim man’s second marriage, emphasizing that in India, the Constitution holds primacy over religion.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm