ರಾಮೇಶ್ವರ ; ಒಂಬತ್ತು ಮೀನುಗಾರರನ್ನು ಬಂಧಿಸಿದ ಶ್ರೀಲಂಕಾದ ನೌಕಾಪಡೆ

10-01-21 03:58 pm       Headline Karnataka News Network   ದೇಶ - ವಿದೇಶ

ಶ್ರೀಲಂಕಾದ ನೌಕಾಪಡೆಯು ರಾಮೇಶ್ವರದ 9 ಮಂದಿ ತಮಿಳು ಮೀನುಗಾರರನ್ನು ಬಂಧಿಸಿದೆ.

ರಾಮೇಶ್ವರಂ, ಜ.10 : ಶ್ರೀಲಂಕಾದ ನೌಕಾಪಡೆಯು ರಾಮೇಶ್ವರದ 9 ಮಂದಿ ತಮಿಳು ಮೀನುಗಾರರನ್ನು ಬಂಧಿಸಿದೆ.

ಅಂತರರಾಷ್ಟ್ರೀಯ ಕಡಲ ಗಡಿರೇಖೆಯನ್ನು ಅತಿಕ್ರಮಣ ಮಾಡಿದ್ದಕ್ಕಾಗಿ ರಾಮೇಶ್ವರಂನ ಒಂಬತ್ತು ಮೀನುಗಾರರನ್ನು ಶನಿವಾರ ರಾತ್ರಿ ಶ್ರೀಲಂಕಾ ನೌಕಾಪಡೆ ಬಂಧಿಸಿದೆ. 

ಮೀನುಗಾರರ ಬಂಧನವನ್ನು ಖಂಡಿಸಿ ಮೀನುಗಾರರು ಅನಿರ್ಧಿಷ್ಟಾವಧಿ ಮುಷ್ಕರ ಘೋಷಿಸಿದ್ದಾರೆ. ಯಾಂತ್ರಿಕೃತ ದೋಣಿಯ ಮಾಲೀಕರಾದ ಎ ಕಿರುಬಾಯಿ (37), ಎಸ್ ವಾಲನ್ ಕೌಶಿಕ್ (24), ಮೈಕಿಯಾಸ್ (30), ಎ ಕೆನ್ನಿಂಗ್ಸ್ಟನ್ (28), ಆರ್. ಸ್ಯಾಮ್ ಸ್ಟಿಲ್ಲರ್ (20), ನಿಜಾನ್ (30), ಬ್ರೈಟನ್ (20), ಆರ್. ಕಿಶೋರ್ (27) ಮತ್ತು ಮಾರಿ (45) ಅವರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಡಿಸೆಂಬರ್ 15 ರಂದು 27 ಮಂದಿ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಬಂಧಿಸಿತ್ತು.

The Sri Lankan Navy has arrested nine Indian fishermen and seized one boat for allegedly fishing in that country's waters, besides damaging fishing nets in a separate incident, officials said here on Sunday.