ಬ್ರೇಕಿಂಗ್ ನ್ಯೂಸ್
24-01-21 12:41 pm Headline Karnataka News Network ದೇಶ - ವಿದೇಶ
ನವದೆಹಲಿ, ಜ.23: ರೂ. ನೂರರ ಹಳೆ ನೋಟನ್ನು ಹಂತ ಹಂತವಾಗಿ ಹಿಂಪಡೆಯುವುದಾಗಿ ಆರ್ ಬಿಐ ಈಗಾಗ್ಲೇ ಹೇಳಿದೆ. ಆದರೆ, ಇದೇ ವೇಳೆಗೆ ಹತ್ತು ಮತ್ತು ಐದು ರುಪಾಯಿಯ ಹಳೆ ನೋಟನ್ನೂ ಹಿಂಪಡೆಯಲು ಆರ್ ಬಿಐ ನಿರ್ಧರಿಸಿದೆ ಎನ್ನಲಾಗುತ್ತಿದೆ. ಆರ್ ಬಿಐ ಈ ಬಗ್ಗೆ ಅಧಿಕೃತವಾಗಿ ಹೇಳದಿದ್ದರೂ, ಮಾರ್ಚ್, ಎಪ್ರಿಲ್ ವೇಳೆಗೆ ಈ ಹಳೆಯ ನೋಟುಗಳು ಪೂರ್ತಿಯಾಗಿ ಚಲಾವಣೆಯಿಂದ ಮಾಯವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಹಳೆಯ ನೋಟುಗಳನ್ನೆಲ್ಲ ಶಾಶ್ವತವಾಗಿ ಚಲಾವಣೆಯಿಂದ ಹಿಂಪಡೆಯಲು ಆರ್ ಬಿಐ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ. ಈಗಾಗ್ಲೇ 100, 10 ಮತ್ತು 5ರ ಹೊಸ ನೋಟುಗಳು ಚಲಾವಣೆಗೆ ಬಂದಿದ್ದು ಈ ಕಾರಣದಿಂದ ಹಳೆ ನೋಟನ್ನು ಮಾರ್ಚ್, ಎಪ್ರಿಲ್ ವೇಳೆಗೆ ಸಂಪೂರ್ಣ ಹಿಂದಕ್ಕೆ ಪಡೆಯಲು ಮುಂದಾಗಿದೆ ಎನ್ನುವ ಸೂಚನೆ ಬ್ಯಾಂಕುಗಳಿಗೆ ಬಂದಿದೆ.

2019ರಲ್ಲಿ ರೂ. 100 ರ ಹೊಸ ನೋಟು ಚಲಾವಣೆಗೆ ಬಂದಿತ್ತು. ಹೊಸ ನೋಟು ಚಲಾವಣೆಗೆ ತಂದಿದ್ದಾಗ ಹಳೆ ನೋಟನ್ನು ಹಿಂದಕ್ಕೆ ಪಡೆಯುವ ಬಗ್ಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಅದೇ ವೇಳೆಗೆ ಹೊಸತಾಗಿ ಇನ್ನೂರು ರೂ. ಮೌಲ್ಯದ ಹೊಸ ನೋಟನ್ನು ಚಲಾವಣೆಗೆ ತರಲಾಗಿತ್ತು. ಈ ನಡುವೆ, ಎರಡು ಸಾವಿರದ ನೋಟಿನ ಮುದ್ರಣವನ್ನು ನಿಲ್ಲಿಸಿರುವ ಬಗ್ಗೆ ಆರ್ ಬಿಐ 2019ರಲ್ಲಿ ಮಾಹಿತಿ ನೀಡಿತ್ತು. ಇದೀಗ ಹಳೆ ನೋಟುಗಳನ್ನು ಪೂರ್ತಿಯಾಗಿ ಇನ್ನೆರಡು ತಿಂಗಳಲ್ಲಿ ಚಲಾವಣೆಯಿಂದ ಮುಕ್ತಗೊಳಿಸಲು ಬ್ಯಾಂಕುಗಳು ನಿರ್ಧರಿಸಿದ್ದು ಹೊಸ ಸಮಸ್ಯೆ ತಂದೊಡ್ಡಲಿದೆ ಎನ್ನುವ ಭೀತಿ ಎದುರಾಗಿದೆ. ಆದರೆ, ಮಾರ್ಚ್, ಎಪ್ರಿಲ್ ವರೆಗೂ ಬ್ಯಾಂಕಿನಲ್ಲಿ ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಆರ್ ಬಿಐ ಅವಕಾಶ ನೀಡಿದೆ.
On Friday, Assistant General Manager of the Reserve Bank of India (RBI) B Mahesh said that the Central bank is planning to withdraw the old series of currency notes including Rs 100, Rs 10, and Rs 5 by March or April.
08-04-26 02:09 pm
HK News Staffer
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ; ಬಳ್ಳಾರಿ,...
07-04-26 12:37 pm
ಇನ್ನೆರಡು ವರ್ಷ ಸಿದ್ದರಾಮಯ್ಯ ಅವರೇ ಸಿಎಂ, ಹೈಕಮಾಂಡ್...
06-04-26 08:51 pm
08-04-26 02:39 pm
HK News Staffer
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
Pakistan News, Fuel Crisis: ಇಂಧನ ಬಿಕ್ಕಟ್ಟು ;...
07-04-26 08:01 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 01:06 pm
HK News Staffer
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm
Arif Murder Case, Mangalore: ಟ್ಯಾಬ್ಲೆಟ್ ಆರೀಫ್...
07-04-26 06:18 pm
ಚಿಕ್ಕಮಗಳೂರು ; ಭದ್ರಾ ನದಿಗೆ ಹಾರಿ ಶಿವಮೊಗ್ಗದ ನರ್ಸ...
07-04-26 04:04 pm
ಪೊಲೀಸ್ ಕಸ್ಟಡಿಯಲ್ಲಿದ್ದ ತಂದೆ-ಮಗನಿಗೆ ಚಿತ್ರಹಿಂಸೆ...
07-04-26 10:08 am