ತಿರುಚಿದ ಸುದ್ದಿ ; ರಾಜದೀಪ್ ಸರ್ದೇಸಾಯಿ, ಶಶಿ ತರೂರ್‌ ಹಾಗೂ ಆರು ಮಂದಿ ವಿರುದ್ದ ಎಫ್‌ಐಆರ್‌

29-01-21 11:44 am       Headline Karnataka News Network   ದೇಶ - ವಿದೇಶ

ಟ್ಯ್ರಾಕ್ಟರ್‌‌ ರ್ಯಾಲಿಯಲ್ಲಿ ಯುವಕ ಸಾವನ್ನಪ್ಪಿದ್ದ ಪ್ರಕರಣ ಸಂಬಂಧಿಸಿ ಟ್ವೀಟ್‌ ಮಾಡಿದ್ದ ಶಶಿ ತರೂರ್‌‌‌ ಸೇರಿ ಹಲವರ ವಿರುದ್ದ ಎಫ್‌‌ಐಆರ್‌ ದಾಖಲಿಸಿದ್ದಾರೆ. 

ನವದೆಹಲಿ, ಜ.29:  ಗಣರಾಜ್ಯೋತ್ಸವ ದಿನ ಟ್ಯ್ರಾಕ್ಟರ್‌‌ ರ್ಯಾಲಿಯಲ್ಲಿ ಯುವಕ ಸಾವನ್ನಪ್ಪಿದ್ದ ಪ್ರಕರಣ ಸಂಬಂಧಿಸಿ ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌ ನಾಯಕ ಶಶಿ ತರೂರ್‌‌‌ ಸೇರಿ ಹಲವರ ವಿರುದ್ದ ಉತ್ತರಪ್ರದೇಶ ಪೊಲೀಸರು ಎಫ್‌‌ಐಆರ್‌ ದಾಖಲಿಸಿದ್ದಾರೆ. 

ಕಾಂಗ್ರೆಸ್‌ ನಾಯಕ ಶಶಿ ತರೂರ್‌‌ ಸೇರಿದಂತೆ ದಿ ಕ್ಯಾರವನ್‌ ಸುದ್ದಿ ಸಮೂಹದ ಅನಂತ್‌ನಾಥ್‌, ನ್ಯಾಷನಲ್‌ ಹೆರಾಲ್ಡ್‌ನ ಮೃಣಾಲ್‌ ಪಾಂಡೆ, ಹಿರಿಯ ಪತ್ರಕರ್ತ ರಾಜ್‌ದೀಪ್‌ ಸರ್ದೇಸಾಯಿ, ವಿನೋದ್‌ ಜೋಶ್‌ ಹಾಗೂ ಕೌಮಿ ಆವಾಜ್‌ನ ಜಾಫರ್ ಆಘಾ ಅವರ ವಿರುದ್ದ ಎಫ್‌‌ಐಆರ್‌ ದಾಖಲಾಗಿದೆ.

ಗಣರಾಜ್ಯೋತ್ಸವದಂದು ಟ್ಯ್ರಾಕ್ಟರ್‌‌ ರ್ಯಾಲಿಯ ಸಂದರ್ಭ ಟ್ಯ್ರಾಕ್ಟರ್‌‌ ಮಗುಚಿ ಬಿದ್ದು ಯುವಕನೋರ್ವ ಸಾವನ್ನಪ್ಪಿದ್ದ. ಆದರೆ, ಈ ಸುದ್ದಿಯನ್ನು ಯುವಕ ಪೊಲೀಸರ ಗುಂಡೇಟಿಗೆ ಸಾವನ್ನಪ್ಪಿದ್ದಾನೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಮಾಧ್ಯಮದ ವರದಿಗಳನ್ನು ಶಶಿ ತರೂರ್‌ ಸೇರಿ ಹಲವು ಪತ್ರಕರ್ತರು ಟ್ವೀಟ್‌ ಮಾಡಿದ್ದರು. ಆದರೆ, ಪೊಲೀಸರ ಗುಂಡೇಟಿಗೆ ಯುವಕ ಸಾವನ್ನಪ್ಪಿಲ್ಲ ಎಂದು ಪೋಸ್ಟ್‌ ಮಾರ್ಟಂ ವರದಿ ಬಂದ ಬಳಿಕ ತಿಳಿದುಬಂದಿದೆ.

The Noida Police have filed a case against eight people, including journalists Rajdeep Sardesai, Mrinal Pandey, Zafar Agha and editors of The Caravan, and Congress leader Shashi Tharoor for allegedly misreporting and spreading disharmony during the clashes between the police and protesting farmers on Republic Day.