ಅಣ್ಣಾಮಲೈಗೆ ಜೀವ ಬೆದರಿಕೆ ; ವೈ ಪ್ಲಸ್ ಭದ್ರತೆ

04-02-21 06:21 pm       Headline Karnataka News Network   ದೇಶ - ವಿದೇಶ

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈಗೆ ಜೀವ ಬೆದರಿಕೆ ಬಂದಿದ್ದು ಸರಕಾರ ವೈ ಪ್ಲಸ್ ಭದ್ರತೆ ನೀಡಿ ಆದೇಶ ಮಾಡಿದೆ.

ಚೆನ್ನೈ, ಫೆ.4: ತಮಿಳುನಾಡು ಬಿಜೆಪಿ ಉಪಾಧ್ಯಕ್ಷರಾಗಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈಗೆ ಜೀವ ಬೆದರಿಕೆ ಬಂದಿದ್ದು ಸರಕಾರ ವೈ ಪ್ಲಸ್ ಭದ್ರತೆ ನೀಡಿ ಆದೇಶ ಮಾಡಿದೆ.

ಸದ್ಯ ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಝಿಯಾಗಿರುವ ಅಣ್ಣಾಮಲೈಗೆ ಹಲವು ಕಡೆಗಳಿಂದ ಕರೆಗಳು ಬರುತ್ತಿದ್ದವು. ಮಾವೋವಾದಿ ಸಂಘಟನೆಗಳು ಮತ್ತು ಪಿಎಫ್ಐ ಗುಂಪಿನಿಂದ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗುತ್ತಿದ್ದು, ಈ ಬಗ್ಗೆ ಗುಪ್ತಚರ ಅಧಿಕಾರಿಗಳು ಸರಕಾರಕ್ಕೆ ಮಾಹಿತಿ ನೀಡಿವೆ. ಹೀಗಾಗಿ ಸರಕಾರ ವೈ ಪ್ಲಸ್ ಭದ್ರತೆ ನೀಡಿದೆ.

ವೈ ಪ್ಲಸ್ ಭದ್ರತೆ ಹಿನ್ನೆಲೆಯಲ್ಲಿ ಅಣ್ಣಾಮಲೈಗೆ ಹನ್ನೊಂದು ಜನ ಕಮಾಂಡೋಗಳು ಮತ್ತು ಒಬ್ಬರು ಗನ್ ಮೆನ್ ಇರಲಿದ್ದಾರೆ. ಜೊತೆಗೆ ಅವರ ನಿವಾಸಕ್ಕೆ ಒಬ್ಬರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಬೆದರಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ನೀಡಿದ್ದಾಗಿ ಅಣ್ಣಾಮಲೈ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಹತ್ತು ವರ್ಷಗಳ ಕಾಲ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ದಕ್ಷ ಅಧಿಕಾರಿಯೆಂದು ಹೆಸರು ಮಾಡಿದ್ದವರುಯ ಈಗ ಅವರು ರಾಜಕೀಯಕ್ಕೆ ಸೇರುತ್ತಿದ್ದಂತೆ ಬೆದರಿಕೆ ಬಂದಿದ್ದು ಭದ್ರತೆಗೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 

Vice-president of BJP’s Tamil Nadu unit K Annamalai has been given Y+ security cover following threat to his life from religious extremists and Maoists.