ಬ್ರೇಕಿಂಗ್ ನ್ಯೂಸ್
23-02-21 12:26 pm Headline Karnataka News Network ದೇಶ - ವಿದೇಶ
ಭೋಪಾಲ್, ಫೆ.23: ನಿಂತಿದ್ದ ಟ್ಯಾಂಕರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 6 ಜನ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ಇಂದೋರ್ನ ತಲವಾಲಿ ಚಾಂದ್ ಬಳಿ ನಡೆದಿದೆ.
ಬೆಳಗಿನ ಜಾವ 2 ಗಂಟೆ ಸುಮಾರಿಗೆ ಘಟನೆ ನಡೆದಿರುವುದಾಗಿ ಅಂದಾಜಿಸಲಾಗಿದ್ದು, ವೇಗವಾಗಿ ಚಲಿಸುತ್ತಿದ್ದ ಕಾರು ಪೆಟ್ರೋಲ್ ಬಂಕ್ ಸಮೀಪದಲ್ಲಿ ನಿಂತಿದ್ದ ತೈಲ ಸಾಗಣೆ ಟ್ಯಾಂಕರ್ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದ 6 ಜನ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತರಾಗಿದ್ದಾರೆ.
ಮೃತ ಯುವಕರೆಲ್ಲರೂ ಇಂದೋರ್ನ ನಿವಾಸಿಗಳಾಗಿದ್ದು, 18 ರಿಂದ 28 ವರ್ಷ ಪ್ರಾಯದವರೆಂದು ತಿಳಿದುಬಂದಿದೆ. ಈ ಯುವಕರ ತಂಡವು ಇಂದೋರ್ನ ಹೊರ ಪ್ರಾಂತ್ಯದಲ್ಲಿರುವ ಮಾಂಗ್ಲಿಯಾದಿಂದ ತಮ್ಮ ನಗರಕ್ಕೆ ಮರಳುತ್ತಿದ್ದರು ಎಂದು ಲಸುದಿಯ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಮೃತರನ್ನು ರಿಶಿ ಪವಾರ್, ಸೂರಜ್, ಚಂದ್ರಭಾನ್ ರಘುವಂಶಿ, ಸೋನು ಜತ್, ಸುಮಿತ್ ಸಿಂಗ್ ಮತ್ತು ದೇವ್ ಎಂದು ಗುರುತಿಸಲಾಗಿದೆ.
ಅಪಘಾತವು ನಸುಕಿನ ವೇಳೆಯಲ್ಲಿ ನಡೆದಿರುವುದರಿಂದ ಚಾಲಕನಿಗೆ ನಿದ್ರೆ ಮಂಪರು ಆವರಿಸಿರುವುದು ಕಾರಣವಾಗಿರಬಹುದು ಎಂದು ಅನುಮಾನಿಸಲಾಗಿದೆ. ಜೊತೆಗೆ, ಅತಿಯಾದ ವೇಗ ಮತ್ತು ಅಜಾಗರೂಕತೆಯೂ ಅಪಘಾತಕ್ಕೆ ದಾರಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿರುವರಾದರೂ ಬದುಕಿ ಬಾಳಬೇಕಿದ್ದ ಆರು ಯುವಕರು ಹೀಗೆ ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿರುವುದು ಅತ್ಯಂತ ಖೇದಕರ ಸಂಗತಿ.
After a Car ramed a parked tanker truck six students in car died on spot in Bhopal, Indore.
07-03-21 10:20 pm
Headline Karnataka News Network
ಚಿನ್ನವಿದೆಯೆಂದು ನಂಬಿ ದುಬಾರಿ ಬೆಲೆಯ ವಾಚ್ ಪುಡಿಗಟ್...
07-03-21 10:07 pm
ತೆಕ್ಕಟ್ಟೆ ; ದೇವಸ್ಥಾನದ ಒಳಗೆ ಯುವಕ ಸಾವಿಗೆ ಶರಣು
07-03-21 08:46 pm
ಜಾರಕಿಹೊಳಿ ಸಿಡಿ ಬ್ಲಾಸ್ಟ್ ಮಾಡಿದ್ದ ಕಲ್ಲಹಳ್ಳಿ ಯು...
07-03-21 04:29 pm
ದಾವಣಗೆರೆಯಲ್ಲಿ ನೋಟು, ನಾಣ್ಯಗಳ ಪ್ರದರ್ಶನ ; 150 ಕ್...
07-03-21 03:02 pm
07-03-21 06:17 pm
Headline Karnataka News Network
ಸಿಎಂ ಪಿಣರಾಯಿ ಕುತ್ತಿಗೆ ಸುತ್ತಿಕೊಂಡ ಗೋಲ್ಡ್ ಸ್ಮಗ...
05-03-21 05:11 pm
‘ಭಾರತೀಯರು ಅಮೆರಿಕನ್ನರನ್ನೂ ಮಿರಿಸುತ್ತಿದ್ದಾರೆ’; ಅ...
05-03-21 11:59 am
ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ಮನೆ ಮೇಲೆ ಐಟಿ ದಾಳ...
05-03-21 09:37 am
ಸಮುದ್ರ ಮಧ್ಯೆ ಬೋಟ್ ಪಲ್ಟಿ ; ನೀರಿಗೆ ಬಿದ್ದು ಎರಡು...
04-03-21 12:01 pm
07-03-21 07:34 pm
Mangaluru correspondent
ಕುಡಿದು ರಂಪಾಟ ; ಬುದ್ಧಿ ಹೇಳಿದ್ದ ತಮ್ಮನ ಕೊಲೆಗೈದಿದ...
07-03-21 12:21 pm
ನಗ್ನ ವಿಡಿಯೋ ತೋರಿಸಿ ಉದ್ಯಮಿಗೆ ಬ್ಲ್ಯಾಕ್ಮೇಲ್ ; ಮ...
07-03-21 10:44 am
ಕಂಬಳದಲ್ಲಿ ಹಿಂಸೆ ಕಂಡಿಲ್ಲ ; ಮಂಗಳೂರು ಕಂಬಳದಲ್ಲಿ ವ...
06-03-21 11:24 pm
ಪ್ರತಾಪ್ ಸಿಂಹ ಒಬ್ಬ ಮೆಂಟಲ್, ಹುಚ್ಚಾಸ್ಪತ್ರೆಗೆ ಸೇ...
06-03-21 11:15 pm
08-03-21 11:42 am
Headline Karnataka News Network
ಪಂಪ್ವೆಲ್ ಲಾಡ್ಜ್ ನಲ್ಲಿ ಅಂದರ್ ಬಾಹರ್ ಜೂಜಾಟ ; 11...
08-03-21 11:14 am
ಪತ್ನಿಗೆ ವಂಚಿಸಿ ಮತ್ತೊಂದು ಮದುವೆ ; ಕಿಲಾಡಿ ಪೊಲೀಸ್...
06-03-21 10:36 pm
ಜೋತಿಷ್ಯ ಹೇಳುವ ನೆಪದಲ್ಲಿ ಪೂಜೆ ; ಮನೆಯಲ್ಲಿದ್ದ ಚಿನ...
06-03-21 12:50 pm
ರಸ್ತೆಯಲ್ಲಿ ಮಂಗಳಮುಖಿಯರ ರೌಡಿಸಂ ; ಯುವಕರಿಗೆ ಭೀಕರ...
06-03-21 11:37 am