ಸಮುದ್ರ ಮಧ್ಯೆ ಬೋಟ್ ಪಲ್ಟಿ ; ನೀರಿಗೆ ಬಿದ್ದು ಎರಡು ಗಂಟೆ ಜೀವನ್ಮರಣ ಹೋರಾಟ !

04-03-21 12:01 pm       Headline Karnataka News Network   ದೇಶ - ವಿದೇಶ

ಅಲೆಗಳ ಅಬ್ಬರಕ್ಕೆ ಸಿಲುಕಿದ ಮೀನುಗಾರಿಕಾ ಬೋಟ್ ದುರಂತಕ್ಕೀಡಾಗಿದ ಘಟನೆ ಬೇಕಲದ ಬಳಿ ನಡೆದಿದೆ.

ಕಾಸರಗೋಡು, ಮಾ.4 : ಅಲೆಗಳ ಅಬ್ಬರಕ್ಕೆ ಸಿಲುಕಿದ ಮೀನುಗಾರಿಕಾ ಬೋಟ್ ದುರಂತಕ್ಕೀಡಾಗಿ ಐವರು ಮೀನುಗಾರರು ಅಪಾಯದಲ್ಲಿ ಸಿಲುಕಿದ ಘಟನೆ ಬೇಕಲದ ಬಳಿ ನಡೆದಿದ್ದು, ಈ ಬಗ್ಗೆ ಮಾಹಿತಿ ಪಡೆದ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಅವರನ್ನು ರಕ್ಷಿಸಿದ್ದಾರೆ.

ಬುಧವಾರ ರಾತ್ರಿ ಘಟನೆ ನಡೆದಿದ್ದು, ಕಾಸರಗೋಡು ತೀರದಿಂದ ಹತ್ತು ನಾಟಿಕಲ್ ಮೈಲ್ ದೂರದಲ್ಲಿ ಸಮುದ್ರ ಮಧ್ಯೆ ಬೋಟ್ ಅಲೆಗಳ ಅಬ್ಬರಕ್ಕೆ ಮಗುಚಿ ಇಬ್ಭಾಗಗೊಂಡಿದ್ದು,  ಬೋಟಿನ ಒಂದು ಭಾಗವನ್ನು ಮೀನುಗಾರರು ಹಿಡಿದುಕೊಂಡು ಜೀವನ್ಮರಣ ಹೋರಾಟ ನಡೆಸಿದ್ದಾರೆ.  

ಈ ಬಗ್ಗೆ  ಕರಾವಳಿ ರಕ್ಷಣಾ ಸಿಬಂದಿ ಮಾಹಿತಿ ಪಡೆದು ದೌಡಾಯಿಸಿದ್ದು ಐವರನ್ನು ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ. ಎರಡು ದಿನಗಳ ಹಿಂದೆ ನೀಲೇಶ್ವರ ಆಯಿತ್ತಲದಿಂದ ಮರಿಯ ಎಂಬ ಹೆಸರಿನ ಈ ಬೋಟ್ ಮೀನುಗಾರಿಕೆಗೆ ತೆರಳಿದ್ದು, ಬೋಟ್ ನಲ್ಲಿದ್ದವರು  ತಿರುವನಂತಪುರ ನಿವಾಸಿಗಳೆಂದು ತಿಳಿದುಬಂದಿದೆ. 

ದುರಂತಕ್ಕೀಡಾದ ಬಳಿಕ ಮೀನುಗಾರರು ಎರಡು ಗಂಟೆಗಳ ಕಾಲ ಸಮುದ್ರ ಮಧ್ಯೆ ಜೀವನ್ಮರಣ ಹೋರಾಟ ನಡೆಸಿದ್ದಾರೆ. ‌ಬೋಟಿನಲ್ಲಿದ್ದ ಶ್ಯಾಮ್ (18), ಜಿಮ್ಮಿ (21), ಕುಮಾರ್ (43), ಈಶ್ವರ್ (58), ದಾಯಿ ರೋಸ್ (37) ಅವರನ್ನು ರಕ್ಷಿಸಿ ತಡರಾತ್ರಿ ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ.

After a fishing boat capsized due to strong waves, five fishermen were facing danger to their lives at deep-sea at Bekal in Kasargod.