ಕೇರಳ ; ಬಿಜೆಪಿಯಿಂದ 115 ಕಡೆ ಸ್ಪರ್ಧೆ, ಎರಡು ಕಡೆ ಕಣಕ್ಕಿಳಿದ ಸುರೇಂದ್ರನ್ ! ಕಾಸರಗೋಡಿಗೆ ಶ್ರೀಕಾಂತ್ 

14-03-21 06:38 pm       Headline Karnataka News Network   ದೇಶ - ವಿದೇಶ

115 ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಮಂಜೇಶ್ವರ ಮತ್ತು ಕೊನ್ನಿ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.

ತಿರುವನಂತಪುರಂ, ಮಾ.14: ಕೇರಳ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. 115 ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಮಂಜೇಶ್ವರ ಮತ್ತು ಕೊನ್ನಿ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಕಾಸರಗೋಡು ಕ್ಷೇತ್ರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಅವರನ್ನು ಕಣಕ್ಕಿಳಿಸಲಾಗಿದೆ. 

ಸುರೇಂದ್ರನ್ ಸ್ಪರ್ಧೆಗೆ ಎರಡೂ ಕಡೆಯ ಕ್ಷೇತ್ರಗಳ ಕಾರ್ಯಕರ್ತರು ತೀವ್ರ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ಸಮಿತಿ ಎರಡು ಕಡೆ ಕಣಕ್ಕಿಳಿಸಲು ತೀರ್ಮಾನಿಸಿದೆ. ಇದೇ ವೇಳೆ, ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ಬಿಜೆಪಿಯ ಏಕೈಕ ಶಾಸಕ ಸ್ಥಾನ ಹೊಂದಿದ್ದ ನೆಮ್ಮಾಮ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. 

ಇತ್ತೀಚೆಗೆ ಬಿಜೆಪಿ ಸೇರಿದ್ದ ಮೆಟ್ರೋ ಮ್ಯಾನ್ ಇ. ಶ್ರೀಧರನ್ ಪಾಲಕ್ಕಾಡ್, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಕೃಷ್ಣದಾಸ್ - ಕಟ್ಟಕಡ, ಸಿ.ಕೆ. ಪದ್ಮನಾಭನ್  - ಧರ್ಮಡಂ, ಚಿತ್ರನಟ ಸುರೇಶ್ ಗೋಪಿ - ತ್ರಿಶ್ಶೂರ್, ಮಾಜಿ ಸಚಿವ ಎಂ.ಪಿ. ಅಲ್ಫೋನ್ಸ್ ಕನ್ನತಾನಮ್ - ಕಂಜಿರಾಪಳ್ಳಿ , ಕ್ಯಾಲಿಕಟ್ ವಿವಿಯ ಮಾಜಿ ಕುಲಪತಿ ಎಂ. ಅಬ್ದುಲ್ ಸಲಾಂ - ತಿರೂರ್, ನಟ ಕೃಷ್ಣ ಕುಮಾರ್ - ತಿರುವನಂತಪುರಂ, ಮಾಜಿ ಐಪಿಎಸ್ ಅಧಿಕಾರಿ ಜೇಕಬ್ ಥಾಮಸ್ - ಇರಿಂಜಾಲಕುಡ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.

BJP will fight on 115 seats in Kerala while the rest of the 25 seats in Kerala will be allotted to its alliance partner.