ಬ್ರೇಕಿಂಗ್ ನ್ಯೂಸ್
23-04-21 05:59 pm Headline Karnataka News Network ದೇಶ - ವಿದೇಶ
ನವದೆಹಲಿ, ಎ.23: ಲೋಕಸಭೆ ಮಾಜಿ ಸ್ಪೀಕರ್, ಬಿಜೆಪಿಯ ಮಾಜಿ ಸಂಸದೆ ಸುಮಿತ್ರಾ ಮಹಾಜನ್ ನಿಧನರಾಗಿರುವರೆಂದು ತಿಳಿದು ಕಾಂಗ್ರೆಸ್ ಸಂಸದ ಶಶಿ ತರೂರ್ ಸಂತಾಪ ಸೂಚಿಸಿ ಟ್ವೀಟ್ ಮಾಡುವ ಮೂಲಕ ಹೊಸ ವಿವಾದಕ್ಕೆ ತುತ್ತಾಗಿದ್ದಾರೆ.
ನಿನ್ನೆ ರಾತ್ರಿ 11.16ಕ್ಕೆ ತಿರುವನಂತಪುರದ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದು, ಸುಮಿತ್ರಾ ಮಹಾಜನ್ ನಿಧನರಾಗಿರುವರೆಂದು ತಿಳಿದು ದುಃಖಿತನಾಗಿದ್ದೇನೆ. ಅವರ ಜೊತೆಗಿನ ದಿನಗಳನ್ನು ನೆನೆದು, ಸುಮಿತ್ರಾ ಮತ್ತು ಸುಷ್ಮಾ ಸ್ವರಾಜ್ ಸೇರಿ ನಮ್ಮನ್ನು ಬ್ರಿಕ್ಸ್ ಸಮ್ಮೇಳನಕ್ಕೆ ಕರೆದೊಯ್ದಿದ್ದು ಸ್ಮರಣಾರ್ಹ. ಅವರನ್ನು ಅಗಲುವಿಕೆಯ ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಹಾರೈಸುತ್ತೇನೆ ಎಂದಿದ್ದರು.

ಕೂಡಲೇ ಶಶಿ ತರೂರ್ ಟ್ವೀಟಿಗೆ ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಟೀಕೆ ಬಂದಿತ್ತು. ಸುಮಿತ್ರಾ ಆರೋಗ್ಯವಾಗಿದ್ದಾರೆ. ಸುಮ್ಮನೆ ಅವರನ್ನೇಕೆ ಕೊಲ್ಲುವಿರಿ ಎಂದು ಕಾಲೆಳೆಯುವ ಕೆಲಸ ಮಾಡಿದ್ದರು. ಪ್ರತಿಕ್ರಿಯಿಸಿದ್ದ ತರೂರ್, ನನಗೆ ಬಂದಿದ್ದ ಮೂಲಗಳಿಂದ ಹಾಗೆ ಬರೆದಿದ್ದೇನೆ. ಇಲ್ಲಾಂದ್ರೆ, ಟ್ವೀಟನ್ನು ಡಿಲೀಟ್ ಮಾಡುತ್ತೇನೆ ಎಂದಿದ್ದರು.
ಆಬಳಿಕ ಬಿಜೆಪಿ ಜನರಲ್ ಸೆಕ್ರಟರಿ ವಿಜಯ್ ವರ್ಗೀಯ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸುಮಿತ್ರಾರವರು ಪೂರ್ತಿ ಆರೋಗ್ಯವಾಗಿದ್ದಾರೆ. ಅವರಿಗೆ ದೇವರು ದೀರ್ಘಾಯುಷ್ಯ ಕೊಟ್ಟಿದ್ದಾರೆ ಎನ್ನುವ ಮೂಲಕ ಸ್ಪಷ್ಟನೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಶಶಿ ತರೂರ್, ತುಂಬಾ ಥ್ಯಾಂಕ್ಸ್ ವಿಜಯ್ ವರ್ಗೀಯ. ಕೆಲವು ಜನ ಸುಮ್ಮನೆ ವದಂತಿ ಹಬ್ಬಿಸುತ್ತಾರೆ. ನಾನು ನನ್ನು ಟ್ವೀಟನ್ನು ಡಿಲೀಟ್ ಮಾಡುತ್ತೇನೆ. ಸುಮಿತ್ರಾರಿಗೆ ದೇವರು ದೀರ್ಘಾಯುಷ್ಯ ನೀಡಲೆಂದು ದೇವರಲ್ಲಿ ಹಾರೈಸುತ್ತೇನೆ ಎಂದು ಮರು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ನಾಯಕಿಯಾಗಿರುವ ಸುಮಿತ್ರಾ ಮಹಾಜನ್ ಮಧ್ಯಪ್ರದೇಶದ ಇಂದೋರ್ ಕ್ಷೇತ್ರದಲ್ಲಿ 1989ರಿಂದ 2019ರ ವರೆಗೆ ಸಂಸದೆಯಾಗಿದ್ದರು. ಸುದೀರ್ಘ ಕಾಲ ಸಂಸತ್ತಿನಲ್ಲಿದ್ದ ಮಹಿಳಾ ಸಂಸದೆ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಅಲ್ಲದೆ, 2014ರಿಂದ 2019ರ ವರೆಗೆ ಲೋಕಸಭಾ ಸ್ವೀಕರ್ ಕೂಡ ಆಗಿದ್ದರು.
I am relieved if that is so. I received this from what I thought was a reliable source: “पूर्व लोकसभा अध्यक्ष श्रीमती सुमित्रा महाजन जी हमारे बीच नहीं रहीं.
— Shashi Tharoor (@ShashiTharoor) April 22, 2021
ईश्वर दिवंगत आत्मा को अपने श्रीचरणों में स्थान दें.🙏” Happy to retract & appalled that anyone would make up such news. https://t.co/3c8pDGaBRv
Former Lok Sabha speaker Sumitra Mahajan is 'absolutely fine', said the BJP after Congress MP Shashi Tharoor mistakenly sent out a condolence message for her family on Thursday night. The Congress legislator from Kerala's Thiruvananthapuram later retracted his tweet and issued an apology.
05-03-26 11:42 pm
HK News Desk
ಸಂಘರ್ಷದಿಂದ ಸಮಸ್ಯೆ ಪರಿಹರಿಸಲಾಗದು, ಪಶ್ಚಿಮ ಏಷ್ಯಾ,...
05-03-26 09:40 pm
Lokayukta Raid: 8 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳ...
05-03-26 08:41 pm
ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ ; ಮಕ್ಕಳೆದುರೇ ಹಾಸ...
04-03-26 06:47 pm
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
06-03-26 09:50 am
HK News Staffer
ಇರಾನಲ್ಲಿ 1230 ಜನರ ಸಾವು ; ಜೆರುಸಲೇಮ್ ಮೇಲೆ ಬಾಂಬ್...
05-03-26 08:51 pm
ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಇರಾನ್...
05-03-26 05:02 pm
ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ; 'ಸುದೀರ್ಘ...
04-03-26 11:13 pm
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
05-03-26 07:38 pm
HK News Staffer
Dr Nagalakshmi Choudhary, Mangalore: ಸಾಕ್ಷಿಗಳ...
05-03-26 04:36 pm
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ; ಹೊರಗೆ...
05-03-26 02:34 pm
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
ತುಳು ಎರಡನೇ ಅಧಿಕೃತ ಭಾಷೆ; ಆಂಧ್ರಪ್ರದೇಶದಲ್ಲಿ ಕೈಗೊ...
04-03-26 09:31 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm