ಬ್ರೇಕಿಂಗ್ ನ್ಯೂಸ್
23-04-21 05:59 pm Headline Karnataka News Network ದೇಶ - ವಿದೇಶ
ನವದೆಹಲಿ, ಎ.23: ಲೋಕಸಭೆ ಮಾಜಿ ಸ್ಪೀಕರ್, ಬಿಜೆಪಿಯ ಮಾಜಿ ಸಂಸದೆ ಸುಮಿತ್ರಾ ಮಹಾಜನ್ ನಿಧನರಾಗಿರುವರೆಂದು ತಿಳಿದು ಕಾಂಗ್ರೆಸ್ ಸಂಸದ ಶಶಿ ತರೂರ್ ಸಂತಾಪ ಸೂಚಿಸಿ ಟ್ವೀಟ್ ಮಾಡುವ ಮೂಲಕ ಹೊಸ ವಿವಾದಕ್ಕೆ ತುತ್ತಾಗಿದ್ದಾರೆ.
ನಿನ್ನೆ ರಾತ್ರಿ 11.16ಕ್ಕೆ ತಿರುವನಂತಪುರದ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದು, ಸುಮಿತ್ರಾ ಮಹಾಜನ್ ನಿಧನರಾಗಿರುವರೆಂದು ತಿಳಿದು ದುಃಖಿತನಾಗಿದ್ದೇನೆ. ಅವರ ಜೊತೆಗಿನ ದಿನಗಳನ್ನು ನೆನೆದು, ಸುಮಿತ್ರಾ ಮತ್ತು ಸುಷ್ಮಾ ಸ್ವರಾಜ್ ಸೇರಿ ನಮ್ಮನ್ನು ಬ್ರಿಕ್ಸ್ ಸಮ್ಮೇಳನಕ್ಕೆ ಕರೆದೊಯ್ದಿದ್ದು ಸ್ಮರಣಾರ್ಹ. ಅವರನ್ನು ಅಗಲುವಿಕೆಯ ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಹಾರೈಸುತ್ತೇನೆ ಎಂದಿದ್ದರು.
ಕೂಡಲೇ ಶಶಿ ತರೂರ್ ಟ್ವೀಟಿಗೆ ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಟೀಕೆ ಬಂದಿತ್ತು. ಸುಮಿತ್ರಾ ಆರೋಗ್ಯವಾಗಿದ್ದಾರೆ. ಸುಮ್ಮನೆ ಅವರನ್ನೇಕೆ ಕೊಲ್ಲುವಿರಿ ಎಂದು ಕಾಲೆಳೆಯುವ ಕೆಲಸ ಮಾಡಿದ್ದರು. ಪ್ರತಿಕ್ರಿಯಿಸಿದ್ದ ತರೂರ್, ನನಗೆ ಬಂದಿದ್ದ ಮೂಲಗಳಿಂದ ಹಾಗೆ ಬರೆದಿದ್ದೇನೆ. ಇಲ್ಲಾಂದ್ರೆ, ಟ್ವೀಟನ್ನು ಡಿಲೀಟ್ ಮಾಡುತ್ತೇನೆ ಎಂದಿದ್ದರು.
ಆಬಳಿಕ ಬಿಜೆಪಿ ಜನರಲ್ ಸೆಕ್ರಟರಿ ವಿಜಯ್ ವರ್ಗೀಯ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸುಮಿತ್ರಾರವರು ಪೂರ್ತಿ ಆರೋಗ್ಯವಾಗಿದ್ದಾರೆ. ಅವರಿಗೆ ದೇವರು ದೀರ್ಘಾಯುಷ್ಯ ಕೊಟ್ಟಿದ್ದಾರೆ ಎನ್ನುವ ಮೂಲಕ ಸ್ಪಷ್ಟನೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಶಶಿ ತರೂರ್, ತುಂಬಾ ಥ್ಯಾಂಕ್ಸ್ ವಿಜಯ್ ವರ್ಗೀಯ. ಕೆಲವು ಜನ ಸುಮ್ಮನೆ ವದಂತಿ ಹಬ್ಬಿಸುತ್ತಾರೆ. ನಾನು ನನ್ನು ಟ್ವೀಟನ್ನು ಡಿಲೀಟ್ ಮಾಡುತ್ತೇನೆ. ಸುಮಿತ್ರಾರಿಗೆ ದೇವರು ದೀರ್ಘಾಯುಷ್ಯ ನೀಡಲೆಂದು ದೇವರಲ್ಲಿ ಹಾರೈಸುತ್ತೇನೆ ಎಂದು ಮರು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ನಾಯಕಿಯಾಗಿರುವ ಸುಮಿತ್ರಾ ಮಹಾಜನ್ ಮಧ್ಯಪ್ರದೇಶದ ಇಂದೋರ್ ಕ್ಷೇತ್ರದಲ್ಲಿ 1989ರಿಂದ 2019ರ ವರೆಗೆ ಸಂಸದೆಯಾಗಿದ್ದರು. ಸುದೀರ್ಘ ಕಾಲ ಸಂಸತ್ತಿನಲ್ಲಿದ್ದ ಮಹಿಳಾ ಸಂಸದೆ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಅಲ್ಲದೆ, 2014ರಿಂದ 2019ರ ವರೆಗೆ ಲೋಕಸಭಾ ಸ್ವೀಕರ್ ಕೂಡ ಆಗಿದ್ದರು.
I am relieved if that is so. I received this from what I thought was a reliable source: “पूर्व लोकसभा अध्यक्ष श्रीमती सुमित्रा महाजन जी हमारे बीच नहीं रहीं.
— Shashi Tharoor (@ShashiTharoor) April 22, 2021
ईश्वर दिवंगत आत्मा को अपने श्रीचरणों में स्थान दें.🙏” Happy to retract & appalled that anyone would make up such news. https://t.co/3c8pDGaBRv
Former Lok Sabha speaker Sumitra Mahajan is 'absolutely fine', said the BJP after Congress MP Shashi Tharoor mistakenly sent out a condolence message for her family on Thursday night. The Congress legislator from Kerala's Thiruvananthapuram later retracted his tweet and issued an apology.
21-10-25 11:01 pm
Bangalore Correspondent
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
21-10-25 03:11 pm
HK News Desk
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
21-10-25 09:49 pm
Mangalore Correspondent
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
Ashoka Janamana in Puttur, CM Siddaramaiah: ಪ...
20-10-25 07:25 pm
21-10-25 10:51 pm
Mangalore Correspondent
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm